ರಾಜ್ಯ

ರೈತರ ಸಹಕಾರಿ ಬ್ಯಾಂಕ್ ಸಾಲ ಮನ್ನಾಗೆ ಕುಟುಂಬ ಸದಸ್ಯರ ಮಿತಿ ತೆಗೆದುಹಾಕಿದ ಸರ್ಕಾರ

Sumana Upadhyaya

ಬೆಂಗಳೂರು: ಸಹಕಾರಿ ಸಂಘ ಸಂಸ್ಥೆಗಳಿಂದ ಸಾಲ ಪಡೆದುಕೊಂಡ ರೈತರಿಗೆ ಖುಷಿಯ ವಿಚಾರವಿದು. ರೈತರ ಸಾಲಮನ್ನಾಗೆ ಸರ್ಕಾರ ವಿಧಿಸಿದ್ದ ಒಂದು ಕುಟುಂಬ, ಒಂದು ಸಾಲ ಷರತ್ತನ್ನು ತೆಗೆದುಹಾಕಿದೆ. ಪರಿಷ್ಕೃತ ಆದೇಶವನ್ನು ಸರ್ಕಾರ ಇನ್ನು ಕೆಲ ದಿನಗಳಲ್ಲಿ ಹೊರಡಿಸಲಿದೆ ಎಂದು ಸಹಕಾರ ಖಾತೆ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದ್ದಾರೆ.

ರಾಜ್ಯ ಸಚಿವ ಸಂಪುಟ ಕಳೆದ ವಾರ ನಡೆಸಿದ ಸಭೆಯಲ್ಲಿ, ರೈತರ ಸಾಲಮನ್ನಾಗೆ ಕುಟುಂಬವನ್ನು ಒಂದು ಘಟಕವೆಂದು ಪರಿಗಣಿಸಬೇಕೆಂದು ನಿರ್ಧರಿಸಲಾಯಿತು. ಕುಟುಂಬದಲ್ಲಿ ಎಷ್ಟು ಮಂದಿಯ ಹೆಸರಲ್ಲಿ ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದುಕೊಂಡರೂ ಸಹ 1 ಲಕ್ಷದವರೆಗೆ ರೈತ ಸಾಲಮನ್ನಾವನ್ನು ಮನ್ನಾ ಮಾಡಲು ನಿರ್ಧರಿಸಲಾಯಿತು.

ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸ್ ಅವರ 103ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಗೌರವ ನಮನ ಸಲ್ಲಿಸಿ ಮಾತನಾಡಿದ ಸಚಿವ ಬಂಡೆಪ್ಪ ವಾಣಿಜ್ಯ ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲ ಎಷ್ಟು ಪ್ರಮಾಣದಲ್ಲಿ ಮನ್ನಾ ಆಗಲಿದೆ ಎಂದು ಸದ್ಯದಲ್ಲಿಯೇ ನಿರ್ಧರಿಸಲಾಗುವುದು ಎಂದರು.

SCROLL FOR NEXT