ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಕ್ಷುಲ್ಲಕ ಜಗಳಕ್ಕೆ ಕ್ಯಾಬ್ ಡ್ರೈವರ್ ಕೊಲೆ, ಮೂವರ ಬಂಧನ

ಬಾರ್ ಒಂದರಲ್ಲಿ ಮದ್ಯಪಾನ ಮಾಡಿದ್ದ ನಾಲವ್ರು ದುಷ್ಕರ್ಮಿಗಳ ತಂಡ ಕ್ಯಾಬ್ ಚಾಲಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಬೆಂಗಳೂರು ಬನಶಂಕರಿಯ ಕದಿರೇನಹಳ್ಳಿ ಬಾರ್ ಒಂದರಲ್ಲಿ....

ಬೆಂಗಳೂರು: ಬಾರ್ ಒಂದರಲ್ಲಿ ಮದ್ಯಪಾನ ಮಾಡಿದ್ದ ನಾಲವ್ರು ದುಷ್ಕರ್ಮಿಗಳ ತಂಡ ಕ್ಯಾಬ್ ಚಾಲಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಬೆಂಗಳೂರು ಬನಶಂಕರಿಯ ಕದಿರೇನಹಳ್ಳಿ ಬಾರ್ ಒಂದರಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ನಡೆದ ಘಟನೆಗೆ ಸಂಬಂಧಿಸಿ ಕುಮಾರಸ್ವಾಮಿ ಲೇಔಟ್ ಪೋಲೀಸರು ಇದಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತರನ್ನು ಬನಶಂಕರಿಯ ನಿವಾಸಿ ಸಾರಾಬಂಡೆ ಚಂಡೂರ್ ಎಂದು ಗುರುತಿಸಲಾಗಿದೆ. ಕದಿರೇನಹಳ್ಳಿ ನಿವಾಸಿಗಳಾದ ನಯಾಜ್ (32), ನದೀಮ್ (36) ಮತ್ತು ರಿಯಾಜ್ (30) ಬಂಧಿತರು.
ಬಾರ್ ನಲ್ಲಿ ಬಿಲ್ ಕೊಡಲು ಕ್ಯಾಶ್ ಕೌಂಟರ್ ಬಳಿ ಚಂಡೂರ್ ನಿಂತಿದ್ದ ವೇಳೆ ನಯಾಜ್ ಸೇರಿ ನಾಲ್ವರ ಗ್ಯಾಂಗ್ ಆಗಮಿಸಿದೆ. ತಮಗೆ ಬಾರ್ ಒಳಗೆ ಹೋಗಲು ದಾರಿ ಬಿಡುವಂತೆ ಚಂಡೂರ್ ಗೆ ಕೇಳಿದಾಗ ಅವರು ಸ್ವಲ್ಪ ಕಾಲ ಕಾಯಲು ಹೇಳಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಗ್ಯಾಂಗ್ ಆತನೊಂದಿಗೆ ಜಗಳವಾಡಿದೆ. ನಯಾಜ್ ಹಾಗೂ ರಿಯಾಜ್ ಅವರಿಗೆ ಚಾಕ್ಲುವಿನಿಮ್ದ್ ಅಹಲ್ಲೆ ನಡೆಸಿದೆ.
ಇದರಿಂದ ತಕ್ಷಣ ಎಚ್ಚೆತ್ತುಕೊಂಡ ಬಾರ್ ನ ಕ್ಯಾಶಿಯರ್ ಕುಮಾರಸ್ವಾಮಿ ಲೇಔಟ್ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.ಇದಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು ಒಬ್ಬ ಆರೋಪಿ ಹುಡುಕಾಟ ನಡೆದಿದೆ.ತನಿಖೆ ಪ್ರಗತಿಯಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT