ರಾಜ್ಯ

ಧಾರವಾಡ ಡಿವೈಎಸ್ ಪಿ ಶರಣ್ ಗಾಂವ್ಕರ್ ನಿಧನ

Shilpa D
ಧಾರವಾಡ: ಜಿಲ್ಲಾ ಮೀಸಲು ಪಡೆಯ ಡಿವೈಎಸ್‍ಪಿ ಆಗಿದ್ದ ಶ್ರವಣ್ ಗಾಂವ್ಕರ್ (42) ಮಂಗಳವಾರ ನಸುಕಿನ ಜಾವ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.
ಬೆಳಗಿನ ಜಾವ ಶ್ರವಣ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದ್ರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಧಾರವಾಡದ ರಜತಗಿರಿ ಬಡಾವಣೆಯಲ್ಲಿ ಶ್ರವಣ್ ಅವರ ಮನೆ ಇದ್ದು, ಇದೀಗ ಅವರು ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ.
ಸದ್ಯ ಶ್ರವಣ್ ಅವರ ಅಕಾಲಿಕ ನಿಧನಕ್ಕೆ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಕಂಬನಿ ಮಿಡಿದಿದ್ದಾರೆ.
SCROLL FOR NEXT