ಸಾಂದರ್ಭಿಕ ಚಿತ್ರ 
ರಾಜ್ಯ

ಅಂತಾರಾಜ್ಯ ತಂಡದಿಂದ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ

ಮೂವತ್ತು ಲಕ್ಷ ರೂಪಾಯಿ ನೀಡಿದರೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ...

ಬೆಂಗಳೂರು: ಮೂವತ್ತು ಲಕ್ಷ ರೂಪಾಯಿ ನೀಡಿದರೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಅಂತರಾಜ್ಯ ತಂಡವನ್ನು ಬಂಧಿಸಲು ಬೆಂಗಳೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕಳೆದ 10 ದಿನಗಳಲ್ಲಿ ಮೂವರು ಈ ರೀತಿ ಮೋಸ ಮಾಡಿ 52 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಇವರ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದ್ದು ಸದ್ಯದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನ ರೈತರೊಬ್ಬರ ಮಗನಿಂದ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ 9.5 ಲಕ್ಷ ರೂಪಾಯಿ ಎಗರಿಸಿದ್ದಾರೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಾಜಿ ಎಸ್ ಎಂಬ ವಿದ್ಯಾರ್ಥಿಗೆ ಆಗಸ್ಟ್ 16ರಂದು ರಾಜ್ ಕುಮಾರ್ ತಿಬರ್ ವಾಲ್ ಎಂಬುವವರಿಂದ ಫೋನ್ ಬಂದಿದೆ. 20 ಲಕ್ಷ ಕೊಟ್ಟರೆ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿ ನಂಬಿಸಿದ್ದ. ಅದನ್ನು ನಂಬಿದ ಬಾಲಾಜಿ ಮುಂಗಡವಾಗಿ ಆಗಸ್ಟ್ 24ರಂದು 9.5 ಲಕ್ಷ ರೂಪಾಯಿ ನೀಡಿದ್ದನು.

ಹಣ ವರ್ಗಾವಣೆ ಮಾಡಿದ ನಂತರ ಫೋನ್ ಮಾಡುವುದಾಗಿ ತಿಳಿಸಿದ್ದರು. ಆದರೆ ಫೋನ್ ಬರಲಿಲ್ಲ, ಬಾಲಾಜಿ ಕರೆ ಮಾಡಿದಾಗ ತಿಬರ್ ವಾಲ್ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಆಗ ಬಾಲಾಜಿಗೆ ತಾನು ಮೋಸ ಹೋಗಿರುವುದು ತಿಳಿಯಿತು. ಅದೇ ರೀತಿ ಹರ್ಯಾಣ ಮೂಲದ ವ್ಯಾಪಾರಿಯೊಬ್ಬ ಕಿಮ್ಸ್ ನಲ್ಲಿ ತನ್ನ ಮಗನಿಗೆ ಮೆಡಿಕಲ್ ಸೀಟು ಸಿಗುತ್ತದೆಂದು ನಂಬಿ 21.5 ಲಕ್ಷ ರೂಪಾಯಿ ನೀಡಿ ಮೋಸ ಹೋಗಿದ್ದಾರೆ. ಅವರು ಸಹ ಆಗಸ್ಟ್ 23ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆಂಧ್ರ ಪ್ರದೇಶದ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಕೂಡ ಇಂತಹದ್ದೇ ಮತ್ತೊಂದು ವಂಚನೆ ಕೇಸು ದಾಖಲಾಗಿದೆ. ಶಶಾಂಕ್ ಶೇಖರ್ ಮತ್ತು ದಿನೇಶ್ ಸಿಂಗ್ ಎಂಬುವವರು ಪಿ ಚಂಗಲ್ ರಾಯುಡು ಮಗನಿಗೆ ಬೆಂಗಳೂರಿನ ವೈದೇಹಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ 52 ಲಕ್ಷ ರೂಪಾಯಿ ವಂಚಿಸಿದ್ದ.

ಪ್ರತಿವರ್ಷ ವೈದ್ಯಕೀಯ ಸೀಟು ಹಂಚಿಕೆ ಸಮಯದಲ್ಲಿ ಈ ರೀತಿಯ ವಂಚನೆ ಪ್ರಕರಣಗಳು ನಡೆಯುತ್ತವೆ. ಮೋಸ ಮಾಡುವವರ ತಂಡ ನೀಟ್ ದಾಖಲಾತಿ ಮತ್ತು ಫಲಿತಾಂಶ ಪಟ್ಟಿ ಮೂಲಕ ವಿದ್ಯಾರ್ಥಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಕರೆ ಮಾಡುತ್ತಾರೆ. ಇದೊಂದು ದೊಡ್ಡ ಪ್ರಮಾಣದ ವಂಚನೆಯಾಗಿದ್ದು ಮೋಸ ಹೋಗುವವರು ಬಹುತೇಕರು ಹೊರ ರಾಜ್ಯದವರಾಗಿರುತ್ತಾರೆ. ಇಂತಹ ವಂಚನೆ ಮಾಡುವವರ ದೊಡ್ಡ ಜಾಲವೇ ಇರುತ್ತದೆ, ಜನರು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT