ರಾಜ್ಯ

ಮೈಸೂರು : ಚೂಡಿದಾರ್ ವಿಚಾರದಲ್ಲಿ ಜಗಳ : ಅಕ್ಕ- ತಂಗಿ ಆತ್ಮಹತ್ಯೆ

Nagaraja AB

ಮೈಸೂರು:ಚೂಡಿದಾರ್ ಧರಿಸುವ ವಿಚಾರದಲ್ಲಿ  ಜಗಳ ನಡೆದು ಅಕ್ಕ- ತಂಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟಿ. ನರಸೀಪುರ ತಾಲೂಕಿನ ಕಾಲಬಸವನಹುಂಡಿ ಗ್ರಾಮದಲ್ಲಿ  ನಡೆದಿದೆ.

 10 ನೇ ತರಗತಿ ವಿದ್ಯಾರ್ಥಿನಿ ಅನು (16 )  ಹಾಗೂ ಆಕೆಯ ಚಿಕ್ಕಪ್ಪನ ಮಗಳು ಕವಿತಾ (30) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.

ಚೂಡಿದಾರ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ನಿನ್ನೆ ನಡುವೆ ಜಗಳ ನಡೆದಿದೆ. ನಂತರ ಹತಾಶೆಗೊಂಡ ಅನು ಮನೆಯ ಹಿಂಬಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮನೆಯ ಕೊಠಡಿಯಲ್ಲಿ ಕವಿತಾ ತನ್ನ ವೇಲ್ ನಿಂದಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನು ಆತ್ಮಹತ್ಯೆಯಿಂದ ಕಂಗಲಾದ  ಪೋಷಕರು ರೋಧಿಸುತ್ತಿರುವುದನ್ನು ನೋಡಿದ ಕವಿತಾ ಅಲ್ಲಿಂದ ಮನೆಯೊಳಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಲಕಾಡು ಪೊಲೀಸರು ತಿಳಿಸಿದ್ದಾರೆ.

SCROLL FOR NEXT