ರಾಜ್ಯ

ಗಣೇಶ ಉತ್ಸವದ ವೇಳೆ ದುರಂತ: ತಲೆ ಮೇಲೆ ಸಿಡಿದ ಪಟಾಕಿ, ಯುವತಿ ಸಾವು

Manjula VN
ತಿಪಟೂರು: ಗಣೇಶ ಉತ್ಸವದ ವೇಳೆ ನಡೆದ ಪಟಾಕಿ ದುರಂತದಲ್ಲಿ 21 ವರ್ಷ ಯುವತಿಯೊಬ್ಬಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಭಾನುವಾರ ನಡೆದಿದೆ. 
ಸಿತಾರ (21) ಮೃತಪಟ್ಟ ಯುವತಿಯೆಂದು ಹೇಳಲಾಗುತ್ತಿದೆ. ಗಣೇಶ ಉತ್ಸವದ ವೇಳೆ ಭಾರೀ ಪ್ರಮಾಣದ ಸಿಡಿಮದ್ದುಗಳನ್ನು ಸಿಡಿಸಲಾಗುತ್ತಿತ್ತು. ಈ ವೇಳೆ ಪಟಾಕಿಯೊಂದಿ ಸಿತಾರ ಅವರ ತಲೆ ಮೇಲೆ ಬಿದ್ದು ಸಿಡಿದಿದೆ. 
ಇದರಿಂದ ಸಿತಾರಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಯುವತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲು ಯತ್ನಿಸಿದ್ದಾರೆ. ಆದರೆ, ಮಾರ್ಗದ ಮಧ್ಯೆಯೇ ಸಿತಾರಾ ಅವರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. 
ಘಟನೆ ಸಂಬಂಧ ತಿಪಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. 
SCROLL FOR NEXT