ಬಳಕೆಯಾಗದೇ ಉಳಿದಿರುವ ಪರಿಹಾರ ಸಾಮಾಗ್ರಿ 
ರಾಜ್ಯ

ಕೊಡಗು: 43 ಟನ್ ಅಕ್ಕಿ ಸೇರಿದಂತೆ ಕೊಳೆಯುತ್ತಿದೆ 8 ಲಕ್ಷ ರು. ಪರಿಹಾರ ಸಾಮಾಗ್ರಿ

ಕೊಡಗು ಪ್ರವಾಹ ಕಳೆದು ಹೆಚ್ಚು ಕಮ್ಮಿ 3 ತಿಂಗಳಾದರೂ ಮಡಿಕೇರಿಗೆ ಕಳುಹಿಸಿದ್ದ ಪರಿಹಾರ ಸಾಮಾಗ್ರಿ ಸಂಪೂರ್ಣ ಉಪಯೋಗವಾಗದೇ ಕೊಳೆಯುತ್ತಿವೆ.

ಮಡಿಕೇರಿ: ಕೊಡಗು ಪ್ರವಾಹ ಕಳೆದು ಹೆಚ್ಚು ಕಮ್ಮಿ 3 ತಿಂಗಳಾದರೂ ಮಡಿಕೇರಿಗೆ ಕಳುಹಿಸಿದ್ದ ಪರಿಹಾರ ಸಾಮಾಗ್ರಿ ಸಂಪೂರ್ಣ ಉಪಯೋಗವಾಗದೇ ಕೊಳೆಯುತ್ತಿವೆ.
ಸುಮಾರು 43 ಟನ್ ಅಕ್ಕಿ ಸೇರಿದಂತೆ 8 ಲಕ್ಷ ರು. ಪರಿಹಾರ ಸಾಮಾಗ್ರಿ ಮಡಿಕೇರಿಯ ಜ್ಯೂನಿಯರ್ ಕಾಲೇಜ್ ಕ್ಯಾಂಪಸ್ ನಲ್ಲಿ ಕೊಳೆಯುತ್ತಿವೆ. ಹೊಸದಾಗಿ ನಿರ್ಮಾಣವಾಗಿರುವ ಕಾಲೇಜಿನ ಕ್ಲಾಸ್ ರೂಮ್  ಗಳಲ್ಲಿ ಬಾತ್ ರೂಂ ಮತ್ತು ಶೌಚಾಲಯ ಸಾಮಾಗ್ರಿಗಳಾದ,  ಸೋಪು, ಟೂತ್ ಬ್ರಶ್, ಪ್ಲಾಸ್ಟಿಕ್ ಬಕೆಟ್, ಮಗ್ಸ್  ಸೇರಿದಂತೆ ಹೊಸ ಬಟ್ಟೆಗಳು, ಸ್ಟೇಷನರಿ ಸಾಮಾಗ್ರಿಗಳಾದ ಬುಕ್ ಮತ್ತು ಪೆನ್ ಇವೆ,
ಹೀಗಾಗಿ ಇಲ್ಲಿರುವ ವಸ್ತುಗಳನ್ನು ತೆರವುಗೊಳಿಸುವಂತೆ ಕಾಲೇಜು ಆಡಳಿತ ಮಂಡಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹಳೇಯ ಕ್ಲಾಸ್ ರೂಂ ಗಳಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ.
ಜಿಲ್ಲೆಯಾದ್ಯಂತ ಸುಮಾರು 500 ಮಂದಿ ಸಂತ್ರಸ್ತರಿದ್ದಾರೆ,ಅವರಿಗಾಗಿ ಸಾಮಾಗ್ರಿಗಳನ್ನು ಬಳಸಲಾಗುತ್ತಿದೆ, ಅವುಗಳು ಹಾಳಾಗದಂತೆ, ಸಂತ್ರಸ್ತರಿಗೆ ತಲುಪಿಸುವಲ್ಲಿ ನಿಗಾ ವಹಿಸುತ್ತೇವೆ, ಒಬ್ಬ ಸಂತ್ರಸ್ತರಿಗೆ ಪುನರ್ವಸತಿ ಸಿಕ್ಕ ಮೇಲೆ ಉಳಿದ ಸಾಮಾಗ್ರಿಗಳನ್ನು ಬೇರೆ  ಸಂತ್ರಸ್ತರಿಗೆ ನೀಡುತ್ತೇವೆ ಎಂದು ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಇನ್ನೂ 7 ಪರಿಹಾರ ಕೇಂದ್ರಗಳು ಕೆಲಸ ಮಾಡುತ್ತಿವೆ, ಕಾಲೇಜಿನಿಂದ ಪರಿಹಾರ ಸಾಮಾಗ್ರಿಗಳನ್ನು ತಂದು ಎಲ್ಲವನ್ನು ವಿತರಿಸಲಾಗುತ್ತದೆ ಎಂದು ಹೆಚ್ಚುವರಿ ಉಪ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

ತಮಿಳುನಾಡು ಸಿಎಂ ವಿಜಯ್-ಪ್ರಧಾನಿ ಮೋದಿ ಭೇಟಿ: ಎರಡು ದೊಡ್ಡ ಬೇಡಿಕೆ; ಇಲ್ಲಿದೆ ವಿವರ..

SCROLL FOR NEXT