ಸಂಗ್ರಹ ಚಿತ್ರ 
ರಾಜ್ಯ

ಮಹಿಳೆಯಿಂದ ಕದ್ದ ಫೋನ್ ಹಿಂತಿರುಗಿಸಲು 'ನಗ್ನ ಚಿತ್ರ'ದ ಬೇಡಿಕೆ ಇಟ್ಟ ಖದೀಮ!

ಮಹಿಳೆಯೊಬ್ಬರ ಮೊಬೈಲ್ ಕಳವು ಮಾಡಿದ ಖದೀಮನೊಬ್ಬ ಮೊಬೈಲ್ ಹಿಂತಿರುಗಿಸಬೇಕಾದರೆ ಆಕೆಯ ನಗ್ನ ಚಿತ್ರಗಳನ್ನು ತನಗೆ ಕಳಿಸುವಂತೆ ಕೇಳಿರುವ ವಿಕೃತ ಘಟನೆ ಬೆಂಗಳೂರಿನಲ್ಲಿ ನಡೆದಿದೆ

ಬೆಂಗಳೂರು: ಮಹಿಳೆಯೊಬ್ಬರ ಮೊಬೈಲ್ ಕಳವು ಮಾಡಿದ ಖದೀಮನೊಬ್ಬ ಮೊಬೈಲ್ ಹಿಂತಿರುಗಿಸಬೇಕಾದರೆ ಆಕೆಯ ನಗ್ನ ಚಿತ್ರಗಳನ್ನು ತನಗೆ ಕಳಿಸುವಂತೆ ಕೇಳಿರುವ ವಿಕೃತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ಟಾರ್ ಹೋಟೆಲ್ ನಲ್ಲಿ ತನ್ನ ಮೊಬೈಲ್ ನಾಪತ್ತೆಯಾದ ಬಳಿಕ ಮೊಬೈಲ್ ಕದ್ದ ಕಳ್ಳನಿಂದ ಮಹಿಳೆ ಸಂದೇಶ ಪಡೆದಿದ್ದಾರೆ. ಅದರಂತೆ "ಆಕೆಯ ನಗ್ನ ಚಿತ್ರಗಳನ್ನು ತನಗೆ ಕಳಿಸಿದರೆ" ಮಾತ್ರ ಅವಳ ಮೊಬೈಲ್ ಹಿಂದಿರುಗಿಸುವುದಾಗಿ ಆತ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಆಕೆಯ ಮನೆಯವರಿಗೆ ಸಹ ಆ ದುಷ್ಕರ್ಮಿಯು ಸಂದೇಶ ಕಳಿಸಿದ್ದು ಅಂತಿಮವಾಗಿ ಮಹಿಳೆ ಈ ಸಂಬಂಧ ಪೋಲೀಸರ ಮೊರೆ ಹೋಗಿದ್ದಾರೆ.
ಬೆಂಗಳೂರಿನ ಹೂಡಿಯಲ್ಲಿ ವಾಸವಿದ್ದ 22 ವರ್ಷದ ಮಹಿಳೆ ಕಳೆದ ಶುಕ್ರವಾರ ಹೋಟೆಲ್ ಗೆ ತೆರಳಿದ್ದಾಗ ಆಕೆಯ ಸ್ಮಾರ್ಟ್ ಫೋನ್ ಕಳುವಾಗಿದೆ. ಈ ಕುರಿತಂತೆ ಆಕೆ ಪೋಲೀಸರಿಗೆ ದೂರು ಸಲ್ಲಿಸುವುದಕ್ಕೆ ಮುನ್ನವೇ ಆ ಖದೀಮ ಮಹಿಳೆ ಫೋನ್ ನಲ್ಲಿದ್ದ ಆಕೆಯ ಸ್ನೇಹಿತರು, ಸಂಬಂಧಿಗಳ ಸಂಖ್ಯೆಗಳಿಗೆ ಅಶ್ಲೀಲ ಸಂದೇಶ ರವಾನಿಸಲು ಪ್ರಾರಂಭಿಸಿದ್ದಾನೆ.
"ಆಕೆ ಕುಟುಂಬದವರು ಹಾಗೂ ಮಿತ್ರರು ಆಕೆಯನ್ನು ಇನ್ನೊಂದು ಮೊಬೈಲ್ ಸಂಖ್ಯೆ ಮೂಲಕ ಸಂಪರ್ಕಿಸಿ ಈ ಸಂದೇಶಗಳ ಕುರಿತಂತೆ ವಿವರಿಸಿದ್ದಾರೆ. ಆಗ ಮಹಿಳೆ ತನ್ನ ಕಳೆದು ಹೋದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಅದಿನ್ನೂ ಕಾರ್ಯ ನಿರ್ವಹಿಸುತ್ತಿರುವುದು ತಿಳಿದು ಆಘಾತವಾಗಿದೆ.
"ಆಕೆ ಕರೆ ಮಾಡಿದಾಗ ಆ ದುಷ್ಕರ್ಮಿ ಅವರೊಡನೆ ಸಹ ಅಸಭ್ಯವಾಗಿ ಮಾತನಾಡಿದ್ದಲ್ಲದೆ ಮಹಿಳೆ ತನ್ನ ನಗ್ನ ಚಿತ್ರಗಳನ್ನು ಕಳಿಸಿದರಷ್ಟೇ ಆಕೆಯ ಮೊಬೈಲ್ ಹಿಂತಿರುಗಿಸುತ್ತೇನೆ ಎಂದು ಆಕೆಯ ಮೇಲೆ ಒತ್ತಡ ಹೇರಿದಾನೆ" ಪೋಲೀಸರು ಹೇಳಿದರು.
ಇದಾದ ನಂತರ ಮಹಿಳೆ ಮಹದೇವಪುರ ಪೋಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ/ "ನಾವು ಈ ಕುರಿತಂತೆ ಆರೋಪಿಯ ಪತ್ತೆ ಕಾರ್ಯ ಕೈಗೊಂಡಿದ್ದೇವೆ. ಮಹಿಳೆಗೆ ತಿಳಿದಿರುವವರೇ ಈ ಕೆಲಸ ಮಾಡಿದ್ದಾರೆಯೆ ಎನ್ನುವ ಕುರಿತಂತೆಯೂ ನಾವು ತನಿಖೆ ಕೈಗೊಂಡಿದ್ದೇವೆ" ಪೋಲೀಸರು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT