ಸಂಗ್ರಹ ಚಿತ್ರ 
ರಾಜ್ಯ

ಒಬ್ಬನ ಜೊತೆ ನಿಶ್ಚಿತಾರ್ಥ, ಮತ್ತೊಬ್ಬನೊಂದಿಗೆ ಮದುವೆ, ಕೈಕೊಟ್ಟು ಓಡಿಹೋದ ಪ್ರೇಮಿ, ಹುಡುಗಿ ಕಥೆ ಹರೋಹರ?

ಪೋಷಕರು ನೋಡಿದ ವರನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ನಂತರ ಯಾರಿಗೂ ತಿಳಿಯದಂತೆ ಪ್ರಿಯಕರ ಜೊತೆ ಮದುವೆಯಾಗಿದ್ದ ನವವಧುವಿಗೆ ತಾಳಿ ಕಟ್ಟಿದ್ದ...

ಹಾಸನ: ಪೋಷಕರು ನೋಡಿದ ವರನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ನಂತರ ಯಾರಿಗೂ ತಿಳಿಯದಂತೆ ಪ್ರಿಯಕರ ಜೊತೆ ಮದುವೆಯಾಗಿದ್ದ ನವವಧುವಿಗೆ ತಾಳಿ ಕಟ್ಟಿದ್ದ ಪ್ರೇಮಿ ಕೈಕೊಟ್ಟು ದುಬೈಗೆ ಓಡಿ ಹೋಗಿದ್ದು, ಅತ್ತ ನಿಶ್ಚಿತಾರ್ಥವೂ ಮುರಿದುಬಿದ್ದಿದ್ದು, ಹುಡುಗಿಯ ಪರಿಸ್ಥಿತಿ ನರಕ ಮಯವಾಗಿದೆ. 
ಹಾಸನದ ಆಲೂರು ತಾಲೂಕಿನ ಕಾಡ್ಲೂರು ಗ್ರಾಮದ ಹಿತನ್ ಎಂಬಾತ ತನ್ನ ಮನೆಯ ಪಕ್ಕದಲ್ಲಿದ್ದ ಹುಡುಗಿಯನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ನಂತರ ಆಕೆಯ ನಿಶ್ಚಿತಾರ್ಥ ನಡೆದ ನಂತರ ಆಕೆಯನ್ನು ನವೆಂಬರ್ 18ರಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಅರಶಿನ ಕೊನೆ ಕಟ್ಟಿ ವಿವಾಹವಾಗಿದ್ದಾನೆ.
ಬಳಿಕ ತನ್ನ ಮದುವೆ ವಿಚಾರ ಮನೆಗೆ ಗೊತ್ತಾದ ನಂತರ ಆತ ಯುವತಿಗೆ ನನಗೆ ದುಬೈನಲ್ಲಿ ಕೆಲಸ ಸಿಕ್ಕಿದೆ ಅಂತ ಹೇಳಿ ಪರಾರಿಯಾಗಿದ್ದಾನೆ. ಇದೀಗ ಯಾರ ಸಂಪರ್ಕಕ್ಕೂ ಸಿಗದೆ ಇರುವುದರಿಂದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ನಿಶ್ಚಿತಾರ್ಥ ಮಾಡಿಕೊಂಡಿದ್ದವರಿಗೆ ಯುವತಿ ಗುಟ್ಟಾಗಿ ಮದುವೆಯಾಗಿರುವ ವಿಚಾರ ತಿಳಿದು ಮದುವೆಯನ್ನು ನಿಲ್ಲಿಸಿದ್ದಾರೆ. ಇದರಿಂದ ಸಹಜವಾಗಿಯೇ ಕಂಗಾಲಾಗಿರುವ ಲಾವಣ್ಯ ಹಾಗೂ ಪೋಷಕರು, ನಮಗೆ ನ್ಯಾಯಬೇಕು. ಮಗಳಿಗೆ ಮಹಾಮೋಸ ಮಾಡಿರುವ ಹಿತನ್ ಮರಳಿ ಬಂದು ಬಾಳು ಕೊಡಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT