ಅನಂತಪುರ ಈಶ್ವರಯ್ಯ 
ರಾಜ್ಯ

ಹಿರಿಯ ಕಲಾ ವಿಮರ್ಷಕ ಅನಂತಪುರ ಈಶ್ವರಯ್ಯ ವಿಧಿವಶ

ಕಲಾವಿಹಾರಿ, ಕಲಾ ಚಿಂತಕರಾಗಿದ್ದ ವಿಮರ್ಷಕ ಅನಂತಪುರ ಈಶ್ವರಯ್ಯ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.

ಉಡುಪಿ: ಕಲಾವಿಹಾರಿ, ಕಲಾ ಚಿಂತಕರಾಗಿದ್ದ ವಿಮರ್ಷಕ ಅನಂತಪುರ ಈಶ್ವರಯ್ಯ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.
ಕುಂಬಳೆ‌ ಅನಂತಪುರದ ಈಶ್ವರಯ್ಯ ಹಲವು ರೀತಿಯ ಲಲಿತ ಕಲೆಯ ಕಲಾವಿದರುಗಳಿಗೆ,ಕಲಾಸ್ವಾದಕರಿಗೆ, ಕಲಾ ಚಿಂತಕರಿಗೆ ಪತ್ರಕರ್ತರಿಗೆ, ಛಾಯಾಗ್ರಾಹಕರಿಗೆ, ಸಾಹಿತ್ಯಾಸಕ್ತರಿಗೆ ಹೀಗೆ ಹಲವು ಕ್ಷೇತ್ರದ ಜನರಿಗೆ ಚಿರಪರಿಚಿತವಾಗಿದ್ದ ಹೆಸರು. ಕನ್ನಡದ ಪ್ರಸಿದ್ದ ಮಾಸ ಪತ್ರಿಕೆ ತುಷಾರ, ಉದಯವಾಣಿ ಸಾಪ್ತಾಹಿಕ ಪುರವಣಿ ಮಾಜಿ ಸಂಪಾದಕರಾಗಿದ್ದ ಇವರು ಉಡುಪಿ ಎಂಜಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪತ್ರಕರ್ತರಾಗಿ ಉದಯವಾಣಿ ಗೆ ಸೇರಿದ್ದರು.
ಕಲೆ, ಸಂಸ್ಕೃತಿಯ ವಿಮರ್ಶೆಗಳಿಗೆ ಹೆಸರಾಗಿದ್ದ ಇವರು ಹಲವು ಕಲಾವಿದರ ಬೆಳವಣಿಗೆಗೆ ಸಹಕಾರ ನೀಡಿದರು.ಫೋಟೋಗ್ರಫಿ ತರಬೇತಿಯನ್ನೂ ನೀಡಿತಿದ್ದ ಇವರು ನಿವೃತ್ತಿ ನಂತರ ಸಹ ಕಲಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಸಂಗೀತದಲ್ಲಿ, ಯಕ್ಷಗಾನದಲ್ಲಿ, ಸಾಹಿತ್ಯದಲ್ಲಿ, ಛಾಯಾಗ್ರಹಣದಲ್ಲಿ ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನ ಅಭಿರುಚಿಯನ್ನು ಬೆಳೆಸಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT