ಕಾರಿನಲ್ಲಿ ಹೊತ್ತಿ ಉರಿದ ಬೆಂಕಿ, ತಾಯಿ, ಮಗು ಸಜೀವ ದಹನ 
ರಾಜ್ಯ

ಬೆಂಗಳೂರು: ಕಾರಿಗೆ ಬೆಂಕಿ ಹೊತ್ತಿಕೊಂಡು ತಾಯಿ, ಮಗು ಸಜೀವ ದಹನ

ಅಪಾರ್ಟ್'ಮೆಂಟ್ ಕೆಳ ಮಹಡಿಯ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಾಯಿ ಹಾಗೂ ನಾಲ್ಕು ವರ್ಷದ ಗಂಡು ಮಗು ಸಜೀವ ದಹನವಾಗಿರುವ ದಾರುಣ ಘಟನೆ ವೈಟ್ ಫೀಲ್ಟ್'ನಲ್ಲಿ ಶುಕ್ರವಾರ ನಡೆದಿದೆ...

ಬೆಂಗಳೂರು: ಅಪಾರ್ಟ್'ಮೆಂಟ್ ಕೆಳ ಮಹಡಿಯ  ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಾಯಿ ಹಾಗೂ ನಾಲ್ಕು ವರ್ಷದ ಗಂಡು ಮಗು ಸಜೀವ ದಹನವಾಗಿರುವ ದಾರುಣ ಘಟನೆ ವೈಟ್ ಫೀಲ್ಟ್'ನಲ್ಲಿ ಶುಕ್ರವಾರ ನಡೆದಿದೆ. 
ನೆಲ್ಲೂರಹಳ್ಳಿಯ ಬೋರ್'ವೆಲ್ ರಸ್ತೆಯ ಸುಮಧುರ ಆಪಾರ್ಟ್ ಮೆಂಟ್ ನಿವಾಸಿಯಾಗಿರುವ ರಾಜೇಶ್ ಘಟ್ನಟ್ಟಿ ಅವರ ಪತ್ನಿ ನೇಹಾ ವರ್ಮಾ (30) ಹಾಗೂ ಅವರ ಪುತ್ರ ಪರಮ್ (4) ಮೃತ ದುರ್ದೈವಿಗಳು. 
ದಂಪತಿಗಳು ಬೆಳಗಾವಿ ಮೂಲದವರಾಗಿದ್ದು, 8 ವರ್ಷಗಳ ಹಿಂದಷ್ಟೇ ನಗರಕ್ಕೆ ಆಗಮಿಸಿದ್ದರು. ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ರಾಜೇಶ್ ಅವರು ಸಾಫ್ಟ್ ವೇರ್ ಸಂಸ್ಥೆಯನ್ನು ನಡೆಸುತ್ತಿದ್ದು, ಬೆಳ್ಳಂದೂರಿನ ಪ್ಲೇ ಹೋಮ್ ನಲ್ಲಿ ಮಗು ಬಾಲಕನನ್ನು ಬಿಡಲಾಗುತ್ತಿತ್ತು. 
ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ನೇಹಾ ಅವರು ಪುತ್ರ ಪರಮ್ ಜೊತೆಗೆ ಕಾರಿನಲ್ಲಿ ಬಂದಿದ್ದಾರೆ, ಅಪಾರ್ಟ್'ಮೆಂಟ್ ನ ನೆಲಮಹಡಿಯಲ್ಲಿ ಕಾರನ್ನು ಪಾರ್ಕ್ ಮಾಡುವ ವೇಳೆ ಇದ್ದಕ್ಕಿದ್ದಂತೆಯೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಕಾರು ಸ್ಫೋಟಗೊಂಡಿದೆ. ಈ ವೇಳೆ ನೇಹಾ ಹಾಗೂ ಪುಟ್ಟ ಮಗು ಸಜೀವವಾಗಿ ದಹನವಾಗಿದ್ದಾರೆ. 
ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಪಾರ್ಟ್'ಮೆಂಟ್'ನ ಭದ್ರತಾ ಸಿಬ್ಬಂದಿಗಳೇ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕಾರಿನಲ್ಲಿದ್ದ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿಯ ನರ್ತನ ಮತ್ತಷ್ಟು ಹೆಚ್ಚಾಗಿದೆ. 
ಕಾರನ್ನು 2009ರಲ್ಲಿ ಖರೀದಿ ಮಾಡಲಾಗಿದ್ದು, ಘಟನೆ ವೇಳೆ ನೇಹಾ ಅವರ ಪತಿ ರಾಜೇಶ್ ಕಚೇರಿಯಲ್ಲಿದ್ದರು. ಅಪಾರ್ಟ್'ಮೆಂಟ್'ನಲ್ಲಿದ್ದ ನೆರೆಹೊರೆಯವರು ಕರೆ ಮಾಡಿ ರಾಜೇಶ್ ಅವರುಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ರಾಜೇಶ್ ಅವರು ಕುಟುಂಬ ಸದಸ್ಯರೆಂದು ಗುರ್ತಿಸಿದ್ದಾರೆ. 
ಘಟನೆ ವೇಳೆ ರಾಜೇಶ್ ಅವರ ತಾಯಿ ಮನೆಯಲ್ಲಿಯೇ ಇದ್ದು, ರಾಜೇಶ್ ಮನೆಗೆ ಬರುವವರೆಗೂ ಘಟನೆ ಬಗ್ಗೆ ಅವರಿಗೆ ಮಾಹಿತಿಯೇ ತಿಳಿದಿರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT