ರಾಜ್ಯ

5 ವರ್ಷದಲ್ಲಿ 48 ಕೈದಿಗಳ ಅಸಹಜ ಸಾವು; ಹೈಕೋರ್ಟ್'ಗೆ ಸರ್ಕಾರ ಮಾಹಿತಿ

Manjula VN
ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ 2012ರಿಂದ 2017ರ ಅ.31ರ ಅವಧಿಯಲ್ಲಿ ಒಟ್ಟು 48 ಕೈದಿಗಳು ಅಸಹಜವಾಗಿ ರಾಜ್ಯ ಸರ್ಕಾರ ಹೈಕೋರ್ಟ್'ಗೆ ಸೋಮವಾರ ಮಾಹಿತಿ ನೀಡಿದೆ. 
ಸುಪ್ರೀಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಕಾರಾಗೃಹಗಳಲ್ಲಿನ ಅಸಹಜ ಸಾವು ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲಿಸಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ. 
ರಾಜ್ಯದ ವಿವಿಧ ಕಾರಾಗೃಹಗಳಲ್ಲಿ 2012ರಿಂದ 2017ರ ಅ.31ರವರೆಗೆ ಒಟ್ಟು 48 ಕೈದಿಗಳು ಅಸಹಜವಾಗಿ ಸಾವನ್ನಪ್ಪಿದ್ದಾರೆ. ಆ ಪೈಕಿ 26 ಕೈದಿಗಳ ಅಸಹಜ ಸಾವಿನ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಸಾವನ್ನಪ್ಪಿದ್ದ 48 ಕೈದಿಗಳ ಪೈಕಿ ಮುನಿಯಪ್ಪ ಎಂಬ ಕೈದಿ ಕುಟುಂಬಕ್ಕೆ ಮಾತ್ರ ರೂ.5 ಲಕ್ಷ ಪರಿಹಾರ ನೀಡಲಾಗಿದೆ ಎಂದು ತಿಳಿಸಿದೆ. 
SCROLL FOR NEXT