ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರಿಗೆ 161 ಕಿ.ಮೀ ಉದ್ದದ ಸಬ್ ಅರ್ಬನ್ ರೈಲ್ವೆ ಯೋಜನೆ ಅನುಮೋದನೆ

ನಗರಕ್ಕೆ ಸಬ್ ಅರ್ಬನ್ ರೈಲು ಸಂಪರ್ಕ ಬೇಕೆಂಬ ಎರಡು ದಶಕಗಳ ಬೇಡಿಕೆ ಕೊನೆಗೂ ಈಡೇರುವ ....

ಬೆಂಗಳೂರು: ನಗರಕ್ಕೆ ಸಬ್ ಅರ್ಬನ್ ರೈಲು ಸಂಪರ್ಕ ಬೇಕೆಂಬ ಎರಡು ದಶಕಗಳ ಬೇಡಿಕೆ ಕೊನೆಗೂ ಈಡೇರುವ ಲಕ್ಷಣ ಕಾಣುತ್ತಿದೆ. ಮೊನ್ನೆ ಮಂಡಿಸಲಾಗಿರುವ ಕೇಂದ್ರ ಬಜೆಟ್ ನಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಅನುಮೋದನೆ ನೀಡಲಾಗಿದೆ.
142 ಕಿಲೋ ಮೀಟರ್ ಕಾರಿಡಾರ್ ನ 12,061 ಕೋಟಿ ರೂಪಾಯಿ ವೆಚ್ಚದಲ್ಲಿ ಸಬ್ ಅರ್ಬನ್ ರೈಲು ಯೋಜನೆಗೆ ಕೇಂದ್ರ ಒಪ್ಪಿಗೆ ಸೂಚಿಸಿದೆ. ದ್ವಿಗುಣ ಯೋಜನೆಯಲ್ಲಿ ಹೆಚ್ಚುವರಿ 19 ಕಿಲೋ ಮೀಟರ್ ಸಬ್ ಅರ್ಬನ್ ರೈಲು ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು ಈ ಮೂಲಕ ಒಟ್ಟಾರೆ ಸಬ್ ಅರ್ಬನ್ ಸಂಪರ್ಕ 161 ಕಿಲೋ ಮೀಟರ್ ಗಳ ದೂರ ಹೊಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯ, ಬಾಣಸವಾಡಿ ಮತ್ತು ಹೆಬ್ಬಾಳ ಮಧ್ಯೆ 19 ಕಿಲೋ ಮೀಟರ್ ದೂರದ ಸಬ್ ಅರ್ಬನ್ ರೈಲ್ವೆ ಸಂಪರ್ಕ ಮತ್ತು ಚನ್ನ ಪಟ್ಟಣ ಹಾಗೂ ಬೈಯಪ್ಪನಹಳ್ಳಿ ಮಾರ್ಗವಾಗಿ ಕರ್ಮೆಲರಾಮ್ ಗೆ ಸಬ್ ಅರ್ಬನ್ ರೈಲ್ವೆ ಸಂಪರ್ಕವನ್ನು ದ್ವಿಗುಣ ಯೋಜನೆ ವಿಭಾಗದಲ್ಲಿ ಕೈಗೊಳ್ಳಲಾಗುತ್ತದೆ. ಯೋಜನೆಗೆ ಸಂಬಂಧಪಟ್ಟಂತೆ 1 ಕೋಟಿ ರೂಪಾಯಿಯನ್ನು ಬಜೆಟ್ ನಲ್ಲಿ ಮುಂಗಡ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ದ್ವಿಗುಣ ಯೋಜನೆ: ಬಜೆಟ್ ನಲ್ಲಿ ಅನುಮೋದನೆಗೊಂಡ ಇತರ ಯೋಜನೆಗಳೆಂದರೆ 212.54 ಕಿಲೋ ಮೀಟರ್ ದ್ವಿಗುಣ ಯೋಜನೆ 840 ಕೋಟಿ ರೂಪಾಯಿಗಳಲ್ಲಿ. ಬೈಯಪ್ಪನಹಳ್ಳಿ ಮತ್ತು ಹೊಸೂರು ನಡುವೆ 375.67 ಕೋಟಿ ರೂಪಾಯಿಗಳಲ್ಲಿ 49 ಕಿಲೋ ಮೀಟರ್ ಉದ್ದದ ದ್ವಿಗುಣ ಯೋಜನೆ, 21.7 ಕಿಲೋ ಮೀಟರ್ ಉದ್ದದ ರೈಲು ಮಾರ್ಗ 169.95 ಕೋಟಿ ರೂಪಾಯಿ ವೆಚ್ಚಗಳಲ್ಲಿ ಯಶವಂತಪುರ ಮತ್ತು ಚನ್ನಸಂದ್ರ ನಡುವೆ ಹಾಗೂ 41.5 ಕಿಲೋ ಮೀಟರ್ ಉದ್ದದ ದ್ವಿಗುಣ ರೈಲು ಮಾರ್ಗ ಸಂಚಾರ ಪೆನ್ನುಕೊಂಡ ಮತ್ತು ಧರ್ಮಾವರಂ ಮಧ್ಯೆ 294.67 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT