ಕಸವನಹಳ್ಳಿಯಲ್ಲಿ ಕಟ್ಟಡ ಕುಸಿದು ಬಿದ್ದ ಸ್ಥಳದಲ್ಲಿ ರಕ್ಷಣಾ ಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿರುವುದು 
ರಾಜ್ಯ

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ; ಕನಿಷ್ಠ ಮೂರು ಬಾರಿ ಕಟ್ಟಡ ಮಾಲೀಕರು ಬದಲಾವಣೆ

ನಗರದ ಸರ್ಜಾಪುರ ರಸ್ತೆಯ ಕಸುವನಹಳ್ಳಿಯಲ್ಲಿ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡವೊಂದು....

ಬೆಂಗಳೂರು: ನಗರದ ಸರ್ಜಾಪುರ ರಸ್ತೆಯ ಕಸವನಹಳ್ಳಿಯಲ್ಲಿ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಪ್ರಕರಣದಲ್ಲಿ ಕಟ್ಟಡ ಮಾಲೀಕ ರಫೀಕ್ ಆ ಜಾಗದ ಮೊದಲ ಮಾಲೀಕರಲ್ಲ ಎಂಬುದು ತಿಳಿದುಬಂದಿದೆ.
ಕಟ್ಟಡದ ಸಮೀಪ ವಾಸಿಸುತ್ತಿರುವ ಜನರು ಹೇಳುವ ಪ್ರಕಾರ, ಕಟ್ಟಡ ನಿರ್ಮಾಣ ಆರಂಭವಾಗುವ ಹೊತ್ತಿಗೆ ಬೇರೆ ಮಾಲೀಕರಿದ್ದರು. ಕಟ್ಟಡ ನಿರ್ಮಾಣ ಮುಗಿಯುವ ಮೊದಲೇ ಅದನ್ನು ಅವರು ಮಾರಾಟ ಮಾಡಿದ್ದರು. ವರ್ಷಗಳು ಕಳೆದಂತೆ ಜಾಗವು ಬೇರೆ ಬೇರೆ ಮಾಲೀಕರ ಕೈಗೆ ಅದು ಹೋಗಿದ್ದು ಯಾರೊಬ್ಬರೂ ಕೂಡ ಅದರ ಭದ್ರತೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಕಟ್ಟಡ ನಿರ್ಮಾಣ ಆರಂಭದಲ್ಲಿ ಕೆಲಸ ಮಾಡುತ್ತಿದ್ದ ಪ್ಲಂಬರ್ ಬಾಬು. ಇವರು ನಿನ್ನೆ ಕಟ್ಟಡ ಕುಸಿಯುತ್ತಿರುವುದನ್ನು ಕಣ್ಣಾರೆ ಕಂಡಿದ್ದಾರೆ.
ನೆಲಮಹಡಿಯಲ್ಲಿರುವ ಅಂಗಡಿಗಳನ್ನು ಬಾಡಿಗೆಗೆ ಕೊಟ್ಟಿರಲಿಲ್ಲ. ಅದರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತು. ನೆಲಮಹಡಿಯಲ್ಲಿ ಕಟ್ಟಡದ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮತ್ತು ಆತನ ಕುಟುಂಬ ಕೆಲ ಸಮಯ ವಾಸವಾಗಿತ್ತು. ನಂತರ ಅವರು ಅಲ್ಲಿಂದ ಬಿಟ್ಟುಹೋದರು ಎನ್ನುತ್ತಾರೆ ಬಾಬು.
ಪಕ್ಕದಲ್ಲಿನ ನಿವಾಸಿಯೊಬ್ಬರು, ಕಟ್ಟಡವನ್ನು ಖರೀದಿಸಿದ್ದ ರಫೀಕ್ ಎನ್ನುವವರು ಪಕ್ಕದಲ್ಲಿ ಐಶ್ವರ್ಯ ಡಿಪಾರ್ಟ್ ಮೆಂಟಲ್ ಸ್ಟೋರ್ ಎಂಬ ಅಂಗಡಿಯನ್ನು ಹೊಂದಿದ್ದರು. ತಮ್ಮ ಕಾರ್ಮಿಕರಿಗೆ ಮನೆ ನೀಡಲು ಬಯಸಿದ್ದ ರಫೀಕ್ ಕಟ್ಟಡದ ಮೇಲೆ ಎರಡು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲು ಆರಂಭಿಸಿದರು ಎನ್ನುತ್ತಾರೆ.
ಕಟ್ಟಡವನ್ನು ರಫೀಕ್ ಖರೀದಿಸುವ ಮುನ್ನ ಮೂಲ ಮಾಲೀಕರಿಂದ ಮತ್ತೊಬ್ಬ ವ್ಯಕ್ತಿಗೆ ಹೋಗಿತ್ತು. ಅವರು ಅದನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ್ದರು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಮಾಲೀಕರನ್ನು ಗುರುತಿಸುವುದು ಕಷ್ಟವಾಗುತ್ತಿದೆ.
ರಫೀಕ್ ನನ್ನು ಪೊಲೀಸರು ಬಂಧಿಸಲೆತ್ನಿಸಿದರೂ ಕೂಡ ಅವರು ತಪ್ಪಿಸಿಕೊಂಡಿದ್ದಾರೆ. ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್, ಕುಂಜಿ ಮೊಹಮ್ಮದ್ ಎಂಬುವವರು ತಮ್ಮ ಆಸ್ತಿಯನ್ನು ಸಮೀರಾಗೆ ವರ್ಗಾಯಿಸಿದ್ದರು. ಕಟ್ಟಡದ ಮಾಲೀಕರು ಮತ್ತು ನಿರ್ಮಾಣದಲ್ಲಿ ತೊಡಗಿದ್ದ ವ್ಯಕ್ತಿಗಳ ವಿರುದ್ಧ ನರಹತ್ಯೆ ಅಪರಾಧ ಎಂದು ಕೇಸು ದಾಖಲಿಸಿದ್ದೇವೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT