ಕಸವನಹಳ್ಳಿಯಲ್ಲಿ ಕಟ್ಟಡ ಕುಸಿದು ಬಿದ್ದ ಸ್ಥಳದಲ್ಲಿ ರಕ್ಷಣಾ ಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿರುವುದು 
ರಾಜ್ಯ

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ; ಕನಿಷ್ಠ ಮೂರು ಬಾರಿ ಕಟ್ಟಡ ಮಾಲೀಕರು ಬದಲಾವಣೆ

ನಗರದ ಸರ್ಜಾಪುರ ರಸ್ತೆಯ ಕಸುವನಹಳ್ಳಿಯಲ್ಲಿ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡವೊಂದು....

ಬೆಂಗಳೂರು: ನಗರದ ಸರ್ಜಾಪುರ ರಸ್ತೆಯ ಕಸವನಹಳ್ಳಿಯಲ್ಲಿ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಪ್ರಕರಣದಲ್ಲಿ ಕಟ್ಟಡ ಮಾಲೀಕ ರಫೀಕ್ ಆ ಜಾಗದ ಮೊದಲ ಮಾಲೀಕರಲ್ಲ ಎಂಬುದು ತಿಳಿದುಬಂದಿದೆ.
ಕಟ್ಟಡದ ಸಮೀಪ ವಾಸಿಸುತ್ತಿರುವ ಜನರು ಹೇಳುವ ಪ್ರಕಾರ, ಕಟ್ಟಡ ನಿರ್ಮಾಣ ಆರಂಭವಾಗುವ ಹೊತ್ತಿಗೆ ಬೇರೆ ಮಾಲೀಕರಿದ್ದರು. ಕಟ್ಟಡ ನಿರ್ಮಾಣ ಮುಗಿಯುವ ಮೊದಲೇ ಅದನ್ನು ಅವರು ಮಾರಾಟ ಮಾಡಿದ್ದರು. ವರ್ಷಗಳು ಕಳೆದಂತೆ ಜಾಗವು ಬೇರೆ ಬೇರೆ ಮಾಲೀಕರ ಕೈಗೆ ಅದು ಹೋಗಿದ್ದು ಯಾರೊಬ್ಬರೂ ಕೂಡ ಅದರ ಭದ್ರತೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಕಟ್ಟಡ ನಿರ್ಮಾಣ ಆರಂಭದಲ್ಲಿ ಕೆಲಸ ಮಾಡುತ್ತಿದ್ದ ಪ್ಲಂಬರ್ ಬಾಬು. ಇವರು ನಿನ್ನೆ ಕಟ್ಟಡ ಕುಸಿಯುತ್ತಿರುವುದನ್ನು ಕಣ್ಣಾರೆ ಕಂಡಿದ್ದಾರೆ.
ನೆಲಮಹಡಿಯಲ್ಲಿರುವ ಅಂಗಡಿಗಳನ್ನು ಬಾಡಿಗೆಗೆ ಕೊಟ್ಟಿರಲಿಲ್ಲ. ಅದರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತು. ನೆಲಮಹಡಿಯಲ್ಲಿ ಕಟ್ಟಡದ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮತ್ತು ಆತನ ಕುಟುಂಬ ಕೆಲ ಸಮಯ ವಾಸವಾಗಿತ್ತು. ನಂತರ ಅವರು ಅಲ್ಲಿಂದ ಬಿಟ್ಟುಹೋದರು ಎನ್ನುತ್ತಾರೆ ಬಾಬು.
ಪಕ್ಕದಲ್ಲಿನ ನಿವಾಸಿಯೊಬ್ಬರು, ಕಟ್ಟಡವನ್ನು ಖರೀದಿಸಿದ್ದ ರಫೀಕ್ ಎನ್ನುವವರು ಪಕ್ಕದಲ್ಲಿ ಐಶ್ವರ್ಯ ಡಿಪಾರ್ಟ್ ಮೆಂಟಲ್ ಸ್ಟೋರ್ ಎಂಬ ಅಂಗಡಿಯನ್ನು ಹೊಂದಿದ್ದರು. ತಮ್ಮ ಕಾರ್ಮಿಕರಿಗೆ ಮನೆ ನೀಡಲು ಬಯಸಿದ್ದ ರಫೀಕ್ ಕಟ್ಟಡದ ಮೇಲೆ ಎರಡು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲು ಆರಂಭಿಸಿದರು ಎನ್ನುತ್ತಾರೆ.
ಕಟ್ಟಡವನ್ನು ರಫೀಕ್ ಖರೀದಿಸುವ ಮುನ್ನ ಮೂಲ ಮಾಲೀಕರಿಂದ ಮತ್ತೊಬ್ಬ ವ್ಯಕ್ತಿಗೆ ಹೋಗಿತ್ತು. ಅವರು ಅದನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ್ದರು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಮಾಲೀಕರನ್ನು ಗುರುತಿಸುವುದು ಕಷ್ಟವಾಗುತ್ತಿದೆ.
ರಫೀಕ್ ನನ್ನು ಪೊಲೀಸರು ಬಂಧಿಸಲೆತ್ನಿಸಿದರೂ ಕೂಡ ಅವರು ತಪ್ಪಿಸಿಕೊಂಡಿದ್ದಾರೆ. ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್, ಕುಂಜಿ ಮೊಹಮ್ಮದ್ ಎಂಬುವವರು ತಮ್ಮ ಆಸ್ತಿಯನ್ನು ಸಮೀರಾಗೆ ವರ್ಗಾಯಿಸಿದ್ದರು. ಕಟ್ಟಡದ ಮಾಲೀಕರು ಮತ್ತು ನಿರ್ಮಾಣದಲ್ಲಿ ತೊಡಗಿದ್ದ ವ್ಯಕ್ತಿಗಳ ವಿರುದ್ಧ ನರಹತ್ಯೆ ಅಪರಾಧ ಎಂದು ಕೇಸು ದಾಖಲಿಸಿದ್ದೇವೆ ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT