ಗೊಮ್ಮಟೇಶ್ವರ ಮೂರ್ತಿ ಮೇಲಿರುವ ಚಿನ್ನ ಲೇಪಿತ ಛತ್ರಿ 
ರಾಜ್ಯ

ಎಲ್ಲರ ಗಮನ ಸೆಳೆಯುತ್ತಿದೆ ಗೊಮ್ಮಟಮೂರ್ತಿ ಮೇಲಿರುವ ಚಿನ್ನದ ಲೇಪಿತ 'ಛತ್ರಿತ್ರಿಯಾ'

ಶ್ರವಣಬೆಳಗೊಳದ ವಿಂದ್ಯಾಗಿರಿ ಪರ್ವತದ ಮೇಲಿರುವ 58 ಅಡಿ ಏಕಶಿಲಾ ವಿಗ್ರಹದ ಮೇಲಿರುವ ಸ್ವರ್ಣಲೇಪಿತ ಛತ್ರಿ ಎಲ್ಲರ ಆಕರ್ಷಣೆಯ ಕೇಂದ್ರ ...

ಶ್ರವಣಬೆಳಗೊಳ: ಶ್ರವಣಬೆಳಗೊಳದ ವಿಂದ್ಯಾಗಿರಿ ಪರ್ವತದ ಮೇಲಿರುವ 58 ಅಡಿ ಏಕಶಿಲಾ ವಿಗ್ರಹದ ಮೇಲಿರುವ ಸ್ವರ್ಣಲೇಪಿತ ಛತ್ರಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ತ್ಯಾಗಮೂರ್ತಿಯ ತಲೆಯ ಮೇಲಿರುವ ಈ ಸ್ವರ್ಣಲೇಪನ ಮುಕುಟ ಸೂರ್ಯನ ಬೆಳಕಿನಿಂದ ಮತ್ತಷ್ಟು ಹೊಳೆಯುತ್ತಿದೆ. ಗೊಮ್ಮಟೇಶ್ವರನನ್ನು ನೋಡಲು ಬರುವ ಪ್ರವಾಸಿಗರು ಇದನ್ನು ನೋಡದೇ ಹೋಗಲು ಸಾಧ್ಯವಿಲ್ಲ,  ಇದನ್ನು ಛತ್ರಿತ್ರಿಯಾ ಎಂದು ಸಹ ಕರೆಯಲಾಗುತ್ತದೆ,  ಈ ಮಕುಟದ ಮೇಲೆ ಒಂದರ ಮೇಲೊಂದು ಮೂರು ಛತ್ರಿಗಳಿವೆ. ಈ ಛತ್ರಿಗಳನ್ನು ತಾಮ್ರ ಮತ್ತು ಕಂಚಿನೊಂದಿಗೆ ಕೆತ್ತಲಾಗಿದ್ದು. ಚಿನ್ನದ ಲೇಪನ ಮಾಡಲಾಗಿದೆ. 
ತಾಮ್ರದ ಶೀಟುಗಳಿಂದ ಇದನ್ನು ತಯಾರಿಸಲಾಗಿದ್ದು, ಒಂದರ ಮೇಲೊಂದನ್ನು ಜೋಡಿಸಲಾಗಿದೆ, ತಳಭಾಗದ ಛತ್ರಿ 18 ಅಡಿ ಅಗಲವಿದೆ, ಮಧ್ಯ ಭಾಗದ್ದು 12 ಅಡಿ, ಅತಿ ಮೇಲಿರುವ ಛತ್ರಿ 9 ಅಡಿ ಅಗಲವಿದೆ. ಈ ಮೂರು ಛತ್ರಿಗಳ ಮೇಲೆ ಬಂಗಾರದ ಕಳಸ ಜೋಡಿಸಲಾಗಿದೆ. 
ಮಂಗಳೂರು ಮೂಲದ 30 ಮಂದಿ ತಯಾರಕರು ಇದನ್ನು ಕೆತ್ತಿದ್ದಾರೆ. ಗೋವರ್ದನ್ ಮೆಟಲ್ಸ್ ಈ ಛತ್ರಿಯನ್ನು ತಯಾರಿಸಿದೆ. ಇದು 1,275 ಕೆಜಿ ತೂಕವಿದ್ದು, 4 ತಿಂಗಳ ಕಾಲ ಇದನ್ನು ತಯಾರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

SCROLL FOR NEXT