ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ನಿಗೂಢ ಶಬ್ಧಕ್ಕೆ ಬೆಚ್ಚಿಬಿದ್ದ ಜನ 
ರಾಜ್ಯ

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ನಿಗೂಢ ಶಬ್ಧಕ್ಕೆ ಬೆಚ್ಚಿಬಿದ್ದ ಜನ

ಮೈಸೂರಿನ ಕುವೆಂಪು ನಗರದ ಸುತ್ತಮುತ್ತ ಭಾರೀ ನಿಗೂಢ ಶಬ್ಧವೊಂದು ಕೇಳಿ ಬಂದಿದ್ದು, ನಿಗೂಢ ಶಬ್ಧಕ್ಕೆ ಭೀತಿಗೊಳಗಾದ ಜನತೆ ಬಾಂಬ್ ಸ್ಫೋಟ, ಭೂಕಂಪವೆಂದು ತಿಳಿದು ಮನೆಯಿಂದ ಹೊರಗೆ ಓಡಿ ಬಂದಿರುವ ಘಟನೆ ಗುರುವಾರ ನಡೆದಿದೆ...

ಮೈಸೂರು: ಮೈಸೂರಿನ ಕುವೆಂಪು ನಗರದ ಸುತ್ತಮುತ್ತ ಭಾರೀ ನಿಗೂಢ ಶಬ್ಧವೊಂದು ಕೇಳಿ ಬಂದಿದ್ದು, ನಿಗೂಢ ಶಬ್ಧಕ್ಕೆ ಭೀತಿಗೊಳಗಾದ ಜನತೆ ಬಾಂಬ್ ಸ್ಫೋಟ, ಭೂಕಂಪವೆಂದು ತಿಳಿದು ಮನೆಯಿಂದ ಹೊರಗೆ ಓಡಿ ಬಂದಿರುವ ಘಟನೆ ಗುರುವಾರ ನಡೆದಿದೆ. 
ವಿದ್ಯಾರಣ್ಯಪುರ, ಕೆಆರ್ ಮೊಹಲ್ಲಾ, ದೇವರಾಜ ಮೊಹಲ್ಲಾ, ಕುವೆಂಪುನಗರ, ಸರಸ್ವತಿಪುರ, ದಟ್ಟಗಳ್ಳಿ, ಕೆ.ಜಿ.ಕೊಪ್ಪಳ, ಜಯಲಕ್ಷ್ಮಿಪುರ, ಗೋಕುಲಂ, ವಿವಿ.ಪುರಂ, ವಿಜಯನಗರ, ಯೆಲ್ವಾಳ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿನ್ನೆ ಮಧ್ಯಾಹ್ನ 12.30 ರಿಂದ 1 ಗಂಟೆ ಸುಮಾರಿಗೆ ನಿಗೂಢ ಶಬ್ಧವೊಂದು ಕೇಳಿಸಿದೆ. ಈ ವೇಳೆ ಭಯಗೊಂಡ ಜನರು ಮನೆ ಹಾಗೂ ಕಚೇರಿಗಳಿಗೆ ಹೊರಗೆ ಓಡಿಬಂದಿದ್ದಾರೆ. 
ನಿಗೂಢ ಶಬ್ಧ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕುವೆಂಪು ನಗರದ ನಿವಾಸಿ ಗೌರಮ್ಮ ಅವರು, ಮನೆಯಲ್ಲಿ ನಾನೊಬ್ಬಳೇ ಇದ್ದೆ. ಈ ವೇಳೆ ಜೋರಾಗಿ ಶಬ್ಧವೊಂದು ಕೇಳಿಸಿತು. ಈ ವೇಳೆ ಸಾಕಷ್ಟು ಭಯವಾಯಿತು. ಈ ವೇಳೆ ನೆರೆಮನೆಯಲ್ಲಿದ್ದ ಶಾರದಮ್ಮ ಅವರು ಕೂಗಿಕೊಂಡ ಶಬ್ಧ ಕೇಳಿ ಹೊರಗೆ ಓಡಿಬಂದೆ ಎಂದು ಹೇಳಿದ್ದಾರೆ. 
ಕಲಾವತಿ ಎಂಬುವವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಬಾಂಬ್ ಸ್ಫೋಟಗೊಂಡಂತಹ ಶಬ್ಧವೊಂದು ಕೇಳಿಸಿತ್ತು ಎಂದು ತಿಳಿಸಿದ್ದಾರೆ. 
ಸರ್ಕಾರದ ನಿವೃತ್ತ ಉದ್ಯೋಗಿ ಶಿವಾನಂದ ಎಂಬುವವರು ಮಾತನಾಡಿ, ನಾನು ನನ್ನ ಸಹೋದರಿಯ ಮನೆಗೆ ತೆರಳುತ್ತಿದ್ದೆ. ಈ ವೇಳೆ ಭೂಕಂಪದ ಅನುಭವವಾಯಿತು ಎಂದಿದ್ದಾರೆ. 
ಹಿರಿಯ ಭೂ ವಿಜ್ಞಾನಿ ಕೆವಿಆರ್ ಚೌಧರಿಯವರು ಮಾತನಾಡಿ, ನಮಗೂ ನಿಗೂಢ ಶಬ್ಧದ ಅನುಭವವಾಯಿತು. ಶಬ್ಧದ ಕುರಿತಂತೆ ಮಾಹಿತಿ ಕಲೆ ಹಾಕಲು ವಿವಿಧ ಪ್ರದೇಶಗಳಿಗೆ ಅಧಿಕಾರಿಗಳು ತೆರಳಿದ್ದಾರೆ. ಈಗಾಗಲೇ ನಾವು ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸಿದ್ದೇವೆಂದು ಹೇಳಿದ್ದಾರೆ. 
ಇದೇ ವೇಳೆ ಜನರು ಭೀತಿಗೊಳಗಾಗದಂತೆ ಮನವಿ ಮಾಡಿರುವ ಅವರು, ಭೂಕಂಪವಾಗುವ ಯಾವುದೇ ಸಂಭವಗಳಿಲ್ಲ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT