ರಾಜ್ಯ

ಹಿರೇಕೆರೂರು: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಓರ್ವ ಸಾವು, ಐವರಿಗೆ ಗಾಯ

Raghavendra Adiga
ಹಿರೇಕೆರೂರು: ಸಾಂಪ್ರದಾಯಿಕ ಕ್ರೀಡೆಯಾದ ಹೋರಿ ಬೆದರಿಸುವ ಸ್ಪರ್ಧೆ (ಕೊಬ್ರಿ ಹೋರಿ ಸ್ಪರ್ಧೆ)ಯ ವೇಳೆ ಯುವಕನೊಬ್ಬ ಸಾವನ್ನಪ್ಪಿದ್ದು ಐವರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿಯ ಹಿರೇಕೆರೂರು ತಾಲೂಕಿನ ಮಾಸೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಶಿವಮೊಗ್ಗದ  ಶಿಕಾರಿಪುರ ತಾಲೂಕು ಮತ್ತಿಕೋಟೆ ನಿವಾಸಿ ಅರುಣ್ ಕಣ್ಣಪ್ಪ ಮಡಿವಾಳರ್ ಮೃತಪಟ್ಟಿದ್ದಾರೆ.
ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಮಾಸೂರಿಗೆ ಬಂದಿದ್ದ ಅರುಣ್ ಎತ್ತುಗಳು ಓಡುತ್ತುಇರುವಾಗ ಅವರೂ ಜನಸಂದಣಿಯ ನಡುವೆ ನಿಂತಿದ್ದರು. ಆಗ ಅತ್ತ ಬಂದ ಒಂದು ಎತ್ತು ಮಡಿವಾಳರ್ ಅವರನ್ನು ತಿವಿದಿತ್ತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಿಸುವ ಮಾರ್ಗಮದ್ಯೆ ಅರುಣ್ ಮೃತಪಟ್ಟಿದ್ದಾರೆ.
ಸ್ಪರ್ಧೆ ವೇಳೆ ಇನ್ನೂ ಐದು ಮಂದಿಗೆ ಗಾಯಗಳಾಗಿದ್ದು ಅವರನ್ನು ಹಿರೇಕೆರೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅರುಣ್ ಕಣ್ಣಪ್ಪ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಹಿರೇಕೆರೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆ ಸಂಬಂಧ ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವ ಸೂಚನೆ ಇದೆ.
SCROLL FOR NEXT