ಯದುವೀರ್-ತ್ರಿಷಿಕಾ ದಂಪತಿ ಹಾಗೂ ಯುವರಾಜನೊಂದಿಗೆ ರಾಜಮಾತೆ 
ರಾಜ್ಯ

ಮೈಸೂರು: ಯದುವಂಶದ ಯುವರಾಜನ ನಾಮಕರಣ ಫೆ.19ರಂದು

ಯದುವಂಶದ ಯುವರಾಜನ ನಾಮಕರಣದ ದಿನಾಂಕ ನಿಗದಿಯಾಗಿದ್ದು, ಫೆ.19ರಂದು ಯುವರಾಜನ ನಾಮಕರಣ ನಡೆಯಲಿದೆ...

ಮೈಸೂರು: ಯದುವಂಶದ ಯುವರಾಜನ ನಾಮಕರಣದ ದಿನಾಂಕ ನಿಗದಿಯಾಗಿದ್ದು, ಫೆ.19ರಂದು ಯುವರಾಜನ ನಾಮಕರಣ ನಡೆಯಲಿದೆ. 
ಮೈಸೂರು ಅರಸು ಮನೆತನದ ಯದುವೀರ್-ತ್ರಿಷಿಕಾ ದಂಪತಿಗೆ ಜನಿಸಿರುವ ಗಂಡು ಮಗುವಿಗೆ ನಾಮಕರಣ ಮಾಡಲು ಮುಂದಿನ ತಿಂಗಳು ಫೆಬ್ರವರಿ 19 ಮತ್ತು 20ರಂದು ದಿನಾಂಕ ನಿಗದಿ ಮಾಡಲಾಗಿದ್ದು, ನಾಮಕರಣ ಹಿನ್ನಲೆ ಅರಮನೆ ಶೃಂಗಾರಗೊಳ್ಳುತ್ತಿದೆ. 
19ರಂದು ಧಾರ್ಮಿಕ ಪೂಜಾ ವಿಧಾನಗಳು ನಡೆಯಲಿದ್ದು, 20 ರಂದು ಅರಮನೆಯ ಕಲ್ಯಾಣ ಮಂಟಪದಲ್ಲಿ ನಾಮಕರಣ ಶಾಸ್ತ್ರ ಮಾಡಲು ರಾಜಮಾತೆ ಪ್ರಮೋದಾದೇವಿಯವರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. 
1953ರ ಫೆಬ್ರವರಿ 20ರಂದು ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ಅವರ ಜನ್ಮದಿನವಾಗಿದ್ದು, ಅಂದೇ ತಮ್ಮ ಮೊಮ್ಮಗನಿಗೆ ಉತ್ತರ ಬಾದ್ರ ನಕ್ಷತ್ರದಲ್ಲಿ ನಾಮಕರಣ ಮಾಡಲು ರಾಜಮಾತೆ ನಿರ್ಧರಿಸಿದ್ದಾರೆಂದು ಅರಮನೆಯ ಮೂಲಗಳು ಮಾಹಿತಿ ನೀಡಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಂತಿ ಮಾತುಕತೆ ವಿಫಲ: ಅಮೆರಿಕ ಟೆಹ್ರಾನ್‌ನ ವಿಶ್ವಾಸ ಗಳಿಸಲು ಸಾಧ್ಯವಾಗಲಿಲ್ಲ; ಇರಾನ್ ಸ್ಪೀಕರ್

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

IPL 2026: ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ; RR vs RCB ಪಂದ್ಯದ 'ಭ್ರಷ್ಟಾಚಾರ ವಿರೋಧಿ' ಶಿಷ್ಟಾಚಾರ ಉಲ್ಲಂಘನೆಗೆ BCCI ಖಡಕ್ ಪ್ರತಿಕ್ರಿಯೆ

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

SCROLL FOR NEXT