ಸಾಂದರ್ಭಿಕ ಚಿತ್ರ 
ರಾಜ್ಯ

ಪತ್ನಿ, ಪುತ್ರಿ ಮೇಲೆ ಅತ್ಯಾಚಾರ: ಮಾನಸಿಕ ಅಸ್ವಸ್ಥನ ಕರೆ ನಂಬಿ ಮನೆಗೆ ಹೋಗಿ ಬೇಸ್ತುಬಿದ್ದ ಪೊಲೀಸರು

ಮನೆಗೆ ನುಗ್ಗಿರುವ ದುಷ್ಕರ್ಮಿಗಳು ತಮ್ಮ ಪತ್ನಿ ಹಾಗೂ ಪುತ್ರಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾರೆಂದು ವ್ಯಕ್ತಿ ಮಾಡಿದ ಕರೆಯನ್ನು ನಂಬಿ ಮನೆಗೆ ಭೇಟಿ ನೀಡಿದ್ದ ಯಲಹಂಕ ಪೊಲೀಸರು ನಂತರ ಮನೆಯ ಪರಿಸ್ಥಿತಿಯನ್ನು ನೋಡಿ ಬೇಸ್ತುಬಿದ್ದಿರುವ ಘಟನೆ ಭಾನುವಾರ ನಡೆದಿದೆ...

ಬೆಂಗಳೂರು: ಮನೆಗೆ ನುಗ್ಗಿರುವ ದುಷ್ಕರ್ಮಿಗಳು ತಮ್ಮ ಪತ್ನಿ ಹಾಗೂ ಪುತ್ರಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾರೆಂದು ವ್ಯಕ್ತಿ ಮಾಡಿದ ಕರೆಯನ್ನು ನಂಬಿ ಮನೆಗೆ ಭೇಟಿ ನೀಡಿದ್ದ ಯಲಹಂಕ ಪೊಲೀಸರು ನಂತರ ಮನೆಯ ಪರಿಸ್ಥಿತಿಯನ್ನು ನೋಡಿ ಬೇಸ್ತುಬಿದ್ದಿರುವ ಘಟನೆ ಭಾನುವಾರ ನಡೆದಿದೆ. 
ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಪೊಲೀಸರ ನಮ್ಮ 100ಕ್ಕೆ ದೂರವಾಣಿ ಕರೆ ಮಾಡಿರುವ ವ್ಯಕ್ತಿಯೊಬ್ಬ ನನ್ನ ಪತ್ನಿ ಹಾಗೂ ಪುತ್ರಿ ಮೇಲೆ ಯಾರೋ ಅಪರಿಚಿತರು ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದಾರೆಂದು ಹೇಳಿದ್ದಾರೆ. ಈ ಮಾಹಿತಿ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು 2 ತಂಡಗಳಾಗಿ ಅಪರಾಧ ಪತ್ತೆಗಾಗಿ ಮನೆ ಮನೆ ಹುಡುಕಾಟ ನಡೆಸುತ್ತಾರೆ. ಬಳಿಕ ಕರೆ ಬಂದ ಮನೆಯನ್ನು ಪತ್ತೆ ಮಾಡಿ, ಮನೆಯೊಳಗೆ ಪ್ರವೇಶಿಸಿದ ಪೊಲೀಸರು ಕರೆ ಮಾಡಿದ ವ್ಯಕ್ತಿಯ ಪತ್ನಿ ಹಾಗೂ ಪುತ್ರಿ ಟಿವಿ ನೋಡುತ್ತಾ ಕುಳಿತಿರುವುದನ್ನು ಕಂಡು ಬೇಸ್ತುಬಿದ್ದಿದ್ದಾರೆ. 
ಬಳಿಕ ಅಚ್ಚರಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕರೆ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಮತ್ತು ಆತನಿಗೆ ಇಂತಹು ಸುಳ್ಳು ಸುದ್ದಿ ಹಬ್ಬಿಸಿ ಜನರಿಗೆ ಗಾಬರಿ ಹುಟ್ಟಿಸುವ ಚಟವಿದೆ ಎಂಬುದು ತಿಳಿದಿದೆ.
ಅತ್ಯಾಚಾರ, ಕೊಲೆ ಬಗ್ಗೆ ರಾಮಕೃಷ್ಣ ಅವರ ಪತ್ನಿಯನ್ನು ಪ್ರಶ್ನಿಸಿದಾಗ, ತಮ್ಮ ಪತಿ ಮಾನಸಿಕ ಅಸ್ವಸ್ಥರಾಗಿದ್ದು, ಇದೇ ರೀತಿ ಸಂಬಂಧಿಕರು ಮತ್ತು ಸ್ನೇಹಿತರಿಕೆ ಕರೆ ಮಾಡಿ ಆತಂಕ ಉಂಟು ಮಾಡುತ್ತಿರುತ್ತಾರೆ. ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗಿಲ್ಲ. ಪತಿಯ ತಪ್ಪಿಗೆ ಕ್ಷಮೆಯಾಚಿಸುವುದಾಗಿ ಮಹಿಳೆ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಮನೆ ಬಳಿ ಬಂದ ಕೂಡಲೇ ರಾಮಕೃಷಅಣ ಯಲಹಂಕದಲ್ಲಿರುವ ತನ್ನ ತೋಟದ ಬಳಿ ತೆರಳಿದ್ದಾನೆ. ಹುಸಿ ಕರೆಯಿಂದಾ ಆತಂಕಗೊಂಡಿದ್ದ ಯಲಹಂಕ ಪೊಲೀಸರು ನಿಜ ಸಂಗತಿ ತಿಳಿದು ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT