ಸಂಗ್ರಹ ಚಿತ್ರ 
ರಾಜ್ಯ

ನಿಷೇಧದ ಹೊರತಾಗಿಯೂ ಸಮಯಾಧಾರಿತ ದರಗಳಿಗೆ ಕ್ಯಾಬ್ ಚಾಲಕರ ಪಟ್ಟು!'

ಪರಿಷ್ಕೃತ ದರ ನಿಗದಿಗೆ ಸರ್ಕಾರ ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ, ಸಮಯಾಧಾರಿತ ದರಗಳಿಗೆ ಕ್ಯಾಬ್ ಚಾಲಕರು ಇದೀಗ ಪಟ್ಟುಹಿಡಿದು ಕುಳಿತಿದ್ದಾರೆ...

ಬೆಂಗಳೂರು: ಪರಿಷ್ಕೃತ ದರ ನಿಗದಿಗೆ ಸರ್ಕಾರ ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ, ಸಮಯಾಧಾರಿತ ದರಗಳಿಗೆ ಕ್ಯಾಬ್ ಚಾಲಕರು ಇದೀಗ ಪಟ್ಟುಹಿಡಿದು ಕುಳಿತಿದ್ದಾರೆ. 
ರಾಜ್ಯದಲ್ಲಿ ಕಾರುಬಾರು ನಡೆಸುತ್ತಿರುವ ಆ್ಯಪ್ ಆಧಾರಿತ ಓಲಾ ಹಾಗೂ ಉಬರ್ ಕಂಪನಿಗಳು ಪ್ರಯಾಣದರಗಳನ್ನು ಇತ್ತೀಚೆಗಷ್ಟೇ ಹೆಚ್ಚಳ ಮಾಡಿತ್ತು. ಈ ಬದಲಾವಣೆಗಳು ಇನ್ನು ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ ಎಂದು ಹೇಳುತ್ತಿರುವ ಬೆನ್ನಲ್ಲೇ ಸರ್ಕಾರ ಪರಿಷ್ಕೃತ ದರ ನಿಗದಿ ಮಾಡುವಂತೆ ಸೂಚನೆ ನೀಡಿತ್ತು. ಇದಕ್ಕೆ ಕ್ಯಾಬ್ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯಾವುದೇ ಆಗ್ರಹಗಳಿಗೂ ಸರ್ಕಾರ ಮಣಿಯದ ಹಿನ್ನಲೆಯಲ್ಲಿ ಬದಲಾವಣೆಗಳನ್ನು ತರಲು ಕಾಲಾವಕಾಶಗಳನ್ನು ಕೇಳಿದ್ದರು. 
ಸುದ್ದಿಗಾರರೊಂದಿಗೆ ಮಾತನಾಡಿರುವ ಸಾರಿಗೆ ಆಯುಕ್ತ ಬಿ. ದಯಾನಂದ ಅವರು, ಪರಿಷ್ಕೃತ ದರ ನಗದಿ ಮಾಡುವಂತೆ ಈಗಾಗಲೇ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಹೊಸ ದರಗಳನ್ನು ನಿಗದಿ ಮಾಡುವುದು ಬಿಟ್ಟರೆ ಕಂಪನಿಗಳಿಗೆ ಬೇರಾವುದೇ ಆಯ್ಕೆಗಳಿಲ್ಲ. ಸರ್ಕಾರದ ಸೂಚನೆಯನ್ನು ಪಾಲನೆ ಮಾಡಲು ಸಾಧ್ಯವಿಲ್ಲ ಎಂಬ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ. ಸಾಕಷ್ಟು ಸುದೀರ್ಘ ಪ್ರಕ್ರಿಯೆಗಳ ಬಳಿಕ ಪರಿಷ್ಕೃತ ದರ ನಿಗದಿ ಮಾಡುವಂತೆ ತಿಳಿಸಲಾಗಿದೆ. ಬದಲಾವಣೆಗಳನ್ನು ಮಾಡಲು ಕಂಪನಿಗಳು ಕಾಲಾವಕಾಶವನ್ನು ಕೇಳಿದೆ. ಹೀಗಾಗಿ ಕಾಲಾವಕಾಶವನ್ನು ನೀಡಲಾಗಿದೆ. ಶೀಘ್ರದಲ್ಲಿಯೇ ಕಂಪನಿಗಳೊಂದಿಗೆ ಸಭೆಯನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 
ಕ್ಯಾಬ್ ಚಾಲಕರು ಸಮಯಾಧಾರಿತ ದರಗಳನ್ನು ಕೂಡ ಸೇರ್ಪಡೆಗೊಳಿಸಿಕೊಂಡಿದ್ದು, ಪ್ರಸ್ತುತ ಸರ್ಕಾರ ಪರಿಷ್ಕೃತ ದರ ನಿಗದಿ ಮಾಡುವಂತೆ ಸೂಚಿಸಿರುವ ಹಿನ್ನಲೆಯಲ್ಲಿ ಇದರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. 20 ನಿಮಿಷ ಉಚಿತ ಕಾಯುವ ಸಮಯ ಕೂಡ ನೂತನ ದರದಲ್ಲಿ ನಿಗದಿಯಾಗಿದ್ದು ಇದಕ್ಕೆ ಚಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 
ಪ್ರಸ್ತುತ ಉಬರ್ 5 ನಿಮಿಷಗಳ ಬಳಿಕ ಪ್ರತೀ ನಿಮಿಷಕ್ಕೆ ರೂ.5.27 ಪಡೆದುಕೊಳ್ಳುತ್ತಿದ್ದು, ಓಲಾ ಕಾಯುವಿಕೆಗೆ ಯಾವುದೇ ರೀತಿಯ ಹಣವನ್ನು ಪಡೆಯುತ್ತಿಲ್ಲ. ಹೀಗಾಗಿ ಸರ್ಕಾರ ಈ ಎಲ್ಲಾ ವಿಚಾರಗಳನ್ನು ಪರಿಶೀಲನೆ ನಡೆಸಲಿದೆ ಎಂದು ಹೇಳಲಾಗುತ್ತಿದೆ. 
ಓಲಾ ವಕ್ತಾರ ಮಾತನಾಡಿ, ಪರಿಷ್ಕೃತ ದರಗಳನ್ನು ಕಂಪನಿ ಈ ಹಿಂದೆಯೇ ಅಳವಡಿಸಿಕೊಂಡಿತ್ತು. ಎಲ್ಲಾ ಗ್ರಾಹಕರಿಗೂ ಪರಿಷ್ಕೃತ ದರದಂತೆಯೇ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ. 
ಉಬರ್ ವಕ್ತಾರ ಮಾತನಾಡಿ, ಪರಿಷ್ಕೃತ ದರ ನಿಗದಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ, ಸಮಯಾಧಾರಿತ ದರಗಳ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT