ರಾಜ್ಯ

ಬುದ್ದಿಜೀವಿಗಳಿಗೆ ಜೀವಿತರ - ಮೃತದೇಹದ ವ್ಯತ್ಯಾಸ ಗೊತ್ತಿರಲ್ಲ- ಅನಂತ್ ಕುಮಾರ್ ಹೆಗ್ದೆ

Nagaraja AB
ಧಾರವಾಡ: ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಾಗುವ ಕೇಂದ್ರ ಕೌಶಾಲ್ಯಾಭಿವೃದ್ದಿ ಸಚಿವ ಅನಂತ್ ಕುಮಾರ್ ಹೆಗ್ಡೆ   ಮತ್ತೆ ಬುದ್ದಿಜೀವಿಗಳ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಬುದ್ದಿಜೀವಿಗಳಿಗೆ  ಜೀವಿತರ - ಮೃತದೇಹದ ವ್ಯತ್ಯಾಸ ಗೊತ್ತಿರಲ್ಲ ಅಂತಾ ಟೀಕಿಸಿದ್ದಾರೆ.
ಬುದ್ದಿ ಜೀವಿ ಅಂತಾ ಕರೆದುಕೊಳ್ಳುವವರಿಗೆ ಅವರ ಅಂತರ್ ಆತ್ಮದ ಬಗ್ಗೆಯೇ ಅರ್ಥವಾಗಲ್ಲ, ಅವರು ಜೀವಿತರು ಹಾಗೂ ಮೃತದೇಹ ಎರಡು ದೇಹದ ಭಾಗ ಅಂದುಕೊಂಡಿದ್ದಾರೆ ಎಂದು ಹೇಳಿದರು.
ಕಾಶಾಲ್ಯಾಭಿವೃದ್ದಿ ತರಬೇತಿ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬುದ್ದಿಜೀವಿಗಳು ತಮ್ಮ  ದೇಹದ ಅಗತ್ಯಗಳನ್ನು ಪೂರೈಸುವುದನ್ನು ಮಾತ್ರ ಯೋಚಿಸುತ್ತಾರೆ ಎಂದರು.
SCROLL FOR NEXT