ನಮ್ಮ ಮೆಟ್ರೊ 
ರಾಜ್ಯ

ಸ್ಮಾರ್ಟ್ ಐಡಿಯಾದಿಂದ 'ನಮ್ಮ ಮೆಟ್ರೊ ಸ್ಮಾರ್ಟ್ ಕಾರ್ಡ್'ಗಳ ಮಾರಾಟದಲ್ಲಿ ಹೆಚ್ಚಳ!

'ನಮ್ಮ ಮೆಟ್ರೊ' ನಷ್ಟದಲ್ಲಿಯೇ ಸಂಚರಿಸುತ್ತಿದೆ ಎಂದು ಅದರ ವ್ಯವಸ್ಥಾಪಕ ನಿರ್ದೇಶಕರು ಅನೇಕ ಬಾರಿ ...

ಬೆಂಗಳೂರು: 'ನಮ್ಮ ಮೆಟ್ರೊ' ನಷ್ಟದಲ್ಲಿಯೇ ಸಂಚರಿಸುತ್ತಿದೆ ಎಂದು ಅದರ ವ್ಯವಸ್ಥಾಪಕ ನಿರ್ದೇಶಕರು ಅನೇಕ ಬಾರಿ ಹೇಳಿದ್ದುಂಟು. ಇಂತಹ ಸಂದರ್ಭದಲ್ಲಿ ಕೆಲವು ಉಪಾಯಗಳನ್ನು ತಂದರೆ ಆದಾಯವನ್ನು ಹೆಚ್ಚಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಐಡಿಯಾ ಕೊಟ್ಟಿದ್ದು ಮೆಟ್ರೊ ಪ್ರಯಾಣಿಕರೊಬ್ಬರು. ಅದನ್ನು ಮೆಟ್ರೊ ನಿಗಮದ ಅಧಿಕಾರಿಗಳು ತಕ್ಷಣವೇ ಜಾರಿಗೆ ತಂದರು. ಇದರಿಂದ ಅಧಿಕ ಲಾಭವಾಗಿದೆ. ಮೆಟ್ರೊ ಪ್ರಯಾಣಿಕರ ಕಾರ್ಡುಗಳ ಮಾರಾಟದಲ್ಲಿ ಕಳೆದ ಜುಲೈ 4ರಿಂದ ಗಣನೀಯ ಏರಿಕೆ ಕಂಡುಬಂದಿದ್ದು ಅಲ್ಲಿಂದ 9 ದಿನಗಳು ಸತತ ಆದಾಯದಲ್ಲಿ 1 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆಯಾಗಿದೆ. ಜುಲೈ 4ರಿಂದ ನಿನ್ನೆಯವರೆಗೆ ಸರಾಸರಿ ಪ್ರತಿದಿನ 1800 ಸ್ಮಾರ್ಟ್ ಕಾರ್ಡುಗಳು ಮಾರಾಟವಾಗಿದೆ. ಇದೀಗ ಮೆಟ್ರೊ ಪ್ರಯಾಣ ಕಾರ್ಡು ಪ್ರತಿದಿನ 3ರಿಂದ 3,500ರಷ್ಟು ಮಾರಾಟವಾಗುತ್ತಿದೆ.

ಮೆಟ್ರೊದಲ್ಲಿ ಆಗಾಗ ಸಂಚರಿಸುವ ಮಿಂಟ್ರಾ ಆನ್ ಲೈನ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಘವ್ ಎಸ್ ಮೆಟ್ರೊದಲ್ಲಿ ಹೆಚ್ಚೆಚ್ಚು ಪ್ರಯಾಣಿಕರು ಸಂಚರಿಸುವಂತಾಗಬೇಕೆಂದು ಯೋಚಿಸಿ ಕೆಲ ತಿಂಗಳ ಹಿಂದೆ ಮೆಟ್ರೊ ಅಧಿಕಾರಿಗಳನ್ನು ಸಂಪರ್ಕಿಸಿದರಂತೆ. ಹಳ್ಳಿ ಜನರು ಸೇರಿದಂತೆ ಮೆಟ್ರೊದ ಜೊತೆ ಹೆಚ್ಚೆಚ್ಚು ಪ್ರಯಾಣಿಕರನ್ನು ಬೆಸೆಯುವುದು, ಮೆಟ್ರೊ ರೈಲು ಪ್ರಯಾಣ ಹೆಚ್ಚು ಆಪ್ತವಾಗುವಂತೆ ಮಾಡುವುದು ಅವರ ಉದ್ದೇಶವಾಗಿತ್ತು. ಅವರು ಕೊಟ್ಟ ಐಡಿಯಾವನ್ನು ಮೆಟ್ರೊ ಅಧಿಕಾರಿಗಳು ಎಲ್ಲಾ 40 ಮೆಟ್ರೊ ನಿಲ್ದಾಣಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ತಿಂಗಳ ಹಿಂದೆ ಪ್ರಕಟಿಸಿದರು.

ಅವರು ಕೊಟ್ಟ ಐಡಿಯಾವೇನು ಗೊತ್ತೆ? ಪ್ರಯಾಣಿಕರಿಗೆ ಆಪ್ತವಾಗುವ ಸಾಲುಗಳನ್ನು ಹಾಕುವುದು. 'ನಮ್ಮ ಮೆಟ್ರೊ: ಎಲ್ಲರೂ ಐಷಾರಾಮಿ ಪ್ರಯಾಣಕ್ಕೆ ಅರ್ಹರು', ನಮ್ಮ ಮೆಟ್ರೊ: ಗಾರ್ಡನ್ ಸಿಟಿಯ ಪ್ರಯಾಣ ಸಹವರ್ತಿ' 'ನಮ್ಮ ರೈತ: ನಮ್ಮ ಹೆಮ್ಮೆಯ ಪುತ್ರ' ಇತ್ಯಾದಿಗಳು. ಮೆಟ್ರೊ ರೈಲು ಪ್ರಯಾಣ ಎಷ್ಟು ಉತ್ತಮ ಎಂದು ಜನರಿಗೆ ಮನದಟ್ಟು ಮಾಡುವ ಸಾಲುಗಳು ಇವೆಲ್ಲ.

ಇದರ ಜೊತೆಗೆ ಮೆಟ್ರೊ ನಿಗಮ ನೀಡುವ ಸ್ಮಾರ್ಟ್ ಕಾರ್ಡು ಬಳಸಿದರೆ ಎನು ಪ್ರಯೋಜನ ಎಂಬುದನ್ನು ಕೂಡ ಎಲ್ಲಾ ನಿಲ್ದಾಣಗಳಲ್ಲಿ ಪ್ರಕಟಿಸಲಾಯಿತು. ನಿಲ್ದಾಣಗಳಲ್ಲಿ ಜಾಗ ಇರುವ ಬೋರ್ಡು ಗಳಲ್ಲೆಲ್ಲಾ ಸಾರ್ವಜನಿಕರಿಗೆ ಮೆಟ್ರೊ ಪ್ರಯಾಣ ಕಾರ್ಡುಗಳನ್ನು ಕೊಂಡರೆ ಎನು ಲಾಭ ಎಂದು ಅಲ್ಲಲ್ಲಿ ತೋರಿಸಲಾಯಿತು. ಪ್ರತಿದಿನ ಸಾಲಿನಲ್ಲಿ ನಿಂತು ಟಿಕೆಟ್ ಗೆ ಟೋಕನ್ ತೆಗೆದುಕೊಳ್ಳುವ ಕಿರಿಕಿರಿ ತಪ್ಪುತ್ತದೆ, ಸಮಯ ಉಳಿತಾಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಶೇಕಡಾ 15ರಷ್ಟು ಹಣ ಉಳಿತಾಯ ಮಾಡಬಹುದು ಎಂಬ ಸಾಲುಗಳನ್ನು ಪ್ರಕಟಿಸಿದೆವು ಎನ್ನುತ್ತಾರೆ ಮೆಟ್ರೊದ ಕಾರ್ಯಕಾರಿ ನಿರ್ದೇಶಕ ಎ ಎಸ್ ಶಂಕರ್.

ಇದರಿಂದಾಗಿ ಈ ಹಿಂದೆ ಪ್ರತಿದಿನ ಸರಾಸರಿ 95ರಿಂದ 98 ಲಕ್ಷ ಇದ್ದ ಮೆಟ್ರೊ ಆದಾಯ 1 ಕೋಟಿ ರೂಪಾಯಿ ದಾಟಿದೆ. ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಹೊರಗೆ ಸಹ ಮೆಟ್ರೊ ಕಾರ್ಡುಗಳನ್ನು ಪ್ರಯಾಣಿಕರಿಗೆ ಮಾರಾಟ ಮಾಡಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT