ಕೊಚ್ಚಿಹೋದ ವೆಲ್ಲೆಸ್ಲಿ ಸೇತುವೆ 
ರಾಜ್ಯ

ಕೊಳ್ಳೇಗಾಲ: ಕೊಚ್ಚಿ ಹೋಯ್ತು 200 ವರ್ಷದ ವೆಲ್ಲೆಸ್ಲಿ ಸೇತುವೆ

ಕಾವೇರಿ ನದಿಯ ಪ್ರವಾಹದಿಂದಾಗಿ ಸುಮಾರು 200 ವರ್ಷದಷ್ಟು ಹಿಂದಿನ ವೆಲ್ಲೆಸ್ಲಿ ಸೇತುವೆ ಕೊಚ್ಚಿ ಹೋಗಿದೆ, ಕೊಳ್ಳೆಗಾಲ ತಾಲೂಕಿನ ಸತ್ಯಗಾಲ ...

ಮೈಸೂರು: ಕಾವೇರಿ ನದಿಯ ಪ್ರವಾಹದಿಂದಾಗಿ ಸುಮಾರು ಸುಮಾರು 200 ವರ್ಷದಷ್ಟು ಹಿಂದಿನ ವೆಲ್ಲೆಸ್ಲಿ ಸೇತುವೆ ಕೊಚ್ಚಿ ಹೋಗಿದೆ,  ಕೊಳ್ಳೆಗಾಲ ತಾಲೂಕಿನ ಸತ್ಯಗಾಲ ಸಮೀಪವಿದ್ದ ವೆಲ್ಲೆಸ್ಲಿ ಸೇತುವೆ ಕಬಿನಿ ಮತ್ತು ಕೆಆರ್ ಎಸ್ ಜಲಾಯಶಯಗಳಿಂದ ನೀರು ಹರಿಸಿದ ಪರಿಣಾಮ ಸೇತುವೆ ಕೊಚ್ಚಿ ಹೋಗಿದೆ.
1799ರಲ್ಲಿ ಕರ್ನಲ್  ಆರ್ಥೂರ್ ವೆಲ್ಲೆಸ್ಲಿ ಸತ್ಯಗಾಲ ಸಮೀಪ ಈ ಸೇತುವೆ ನಿರ್ಮಿಸಿದ್ದ, ಆದರೆ ತುಂಬಾ ಹಳೇಯದಾದ ಕಾರಣ ಸೇತುವೆ ಇದಾಗಿದ್ದು ಶಿಥಿಲಗೊಂಡಿತ್ತು. ಮಾಜಿ ಸಚಿವ ಎಚ್.ಎಸ್ ಮಹಾದೇವ್ ಪ್ರಸಾದ್ ಜಲಪಾತೋತ್ಸವ ಆರಂಭಿಸಿದ್ದರು,  ಈ ವೇಳೆ ಐತಿಹಾಸಿಕ ಸೇತುವೆಯನ್ನು ಪುನರ್ ಸ್ಥಾಪಿಸಬೇಕು ಎಂದು ಈ ಹಿಂದೆ ವಿದ್ಯಾವಂತ ನಾಗರಿಕರು ಆಗ್ರಹಿಸಿದ್ದರು.ಆದರೆ ಅದು ನೇರವೇರಲಿಲ್ಲ.
ಸೋಮವಾರ ನೀರಾವರಿ ಇಲಾಖೆ ಕೆಆರ್ ಎಸ್ ನಿಂದ 76 ಸಾವಿರ ಕ್ಯೂಸೆಕ್ಸ್ ಹಾಗೂ ಕಬಿನಿಯಿಂದ 40 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿದ್ದಾರೆ. ಕೊಡಗು ಮತ್ತು ವೈನಾಡು ಪ್ರದೇಶಗಶಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ, ನೀರಿನ ಹೊರ ಹರಿವು ಹೆಚ್ಚಿದೆ. ಹೀಗಾಗಿ ಬೃಂದಾವನ ಗಾರ್ಡನ್ ಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT