ಸಚಿವ ಡಿಕೆ ಶಿವಕುಮಾರ್ ಆಪ್ತನೆಂದು 14 ಲಕ್ಷ ವಂಚನೆ: ಯುವಕನ ಬಂಧನ 
ರಾಜ್ಯ

ಸಚಿವ ಡಿಕೆ ಶಿವಕುಮಾರ್ ಆಪ್ತನೆಂದು 14 ಲಕ್ಷ ವಂಚನೆ: ಯುವಕನ ಬಂಧನ

ಸಚಿವ ಡಿಕೆ ಶಿವಕುಮಾರ್ ಆಪ್ತನೆಂದು ಹೇಳಿ 14 ಲಕ್ಷ ರೂ. ವಂಚಿಸಿದ್ದ ಯುವಕನೊಬ್ಬನನ್ನು ಬೆಂಗಳೂರು ಸುಬ್ರಹ್ಮಣ್ಯ ನಗರ ಪೋಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಆಪ್ತನೆಂದು ಹೇಳಿ 14 ಲಕ್ಷ ರೂ. ವಂಚಿಸಿದ್ದ ಯುವಕನೊಬ್ಬನನ್ನು ಬೆಂಗಳೂರು ಸುಬ್ರಹ್ಮಣ್ಯ ನಗರ ಪೋಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೆ.ಮಂಜುನಾಥ್ ಎಂದು ಗುರುತಿಸಲಾಗಿದೆ. ಈತ ನಾನು ಡಿಕೆ ಶಿವಕುಮಾರ್ ಕಛೇರಿಯಲ್ಲಿ ಶಾಖಾಧಿಕಾರಿ. ಸಚಿವರಿಗೆ ಆಪ್ತ ಎಂದು ಹೇಳಿಕೊಂಡಿದ್ದು ಕಂದಾಯ ಇಲಾಖೆಯಲ್ಲಿಕೆಪಿಎಸ್​ಸಿ ಮೆಂಬರ್​ ಕೋಟಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಗಟ್ಟಲೆ ಹಣ ವಂಚಿಸಿದ್ದಾನೆ.
ಪ್ರಕರಣ ಏನು? 
ಮಂಜುನಾಥ್ ತಾನು ಕಂದಾಯ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ, ನಾನು ಸಚಿವ ಡಿಕೆಶಿ ಅವರಿಗೆ ಆಪ್ತನಾಗಿದ್ದೇನೆಂದು ನಂಬಿಸಿ ಕೋಲಾರ ಜಿಲ್ಲೆ ಶ್ರೀನಿವಾಸಪುರದ ವೆಂಕಟೇಶ್ ಎನ್ನುವವರಿಂದ 14 ಲಕ್ಷ ಪಡೆದಿದ್ದಾನೆ. ಈ ಬಳಿಕ ವೆಂಕಟೇಶ್ ಅವರಿಗೆ ತಾನೇ ತಯಾರಿಸಿದ ನಕಲಿ ನೇಮಕಾತಿ ಪತ್ರವನ್ನು ರವಾನಿಸಿದ್ದಾನೆ.
ಈ ಪತ್ರದೊಡನೆ ಕೆಪಿಎಸ್​ಸಿ ಗೆ ಆಗಮಿಸಿ ಅಲ್ಲಿ ವಿಚಾರಿಸಿದ ವೆಂಕಟೇಶ್ ಅವರಿಗೆ ಆಘಾತ ಕಾದಿತ್ತು. ಕಛೇರಿ ಸಿಬ್ಬಂದಿಯು ಇದು ತಾವು ಕಳಿಸಿದ ಪತ್ರವೇ ಅಲ್ಲ ಎಂದಿದ್ದಾರೆ.
ನಿರಾಶರಾದ ವೆಂಕಟೇಶ್ ತಾನು ವಂಚನೆಗೊಳಗಾಗಿದ್ದನ್ನು ಅರಿತು ವಂಚಕ ಮಂಜುನಾಥ್ ಗೆ ಹಣ ಹಿಂತಿರುಗಿಸಲು ಕೇಳಿದ್ದಾರೆ. ಮೊದಲಿಗೆ ಹಣ ಹಿಂದಿರುಗಿಸುವುದಕ್ಕೆ ನಿರಾಕರಿಸಿದ ಆರೋಪಿ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.
ಮೋಸ ಹೋದ ವೆಂಕಟೇಶ್ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಆರೊಪಿಯನ್ನು ಬಂಧಿಸಿದ ಪೋಲೀಸರು ಆತ ಇನ್ನೂ ಎಷ್ಟು ಜನರಿಗೆ ಹೀಗೆ ವಂಚಿಸಿದ್ದಾನೆ ಎನ್ನುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!