ರಾಜ್ಯ

ಸಿಂಧನೂರು ಬಳಿ ಟ್ರಾಕ್ಟರ್ ಪಲ್ಟಿ: ತಂದೆ, ಮಗ ಸೇರಿ ನಾಲ್ವರ ದುರ್ಮರಣ

Vishwanath S
ಸಿಂಧನೂರು(ರಾಯಚೂರು): ವಿದ್ಯುತ್ ಕಂಬಗಳನ್ನು ಸಾಗಿಸುತ್ತಿದ್ದಾಗ ಟ್ರಾಕ್ಟರ್ ಟ್ರಾಲಿ ಕೊಂಡಿ ಕಳಚಿ ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ತಂದೆ ಮತ್ತು ಮಗ ಸೇರಿ ನಾಲ್ವರು ದಾರುಣ ಸಾವನ್ನಪ್ಪಿರುವ ಘಟನೆ ಶ್ರೀರಾಂಪುರ ಕ್ರಾಸ್ ಬಳಿ ಸಂಭವಿಸಿದೆ. 
ಗಂಗಾವತಿ ತಾಲೂಕಿನ ಸುಳೆಕಲ್ ಗ್ರಾಮಸ್ಥರಾದ 35 ವರ್ಷದ ನಾಗರಾಜ, 25 ವರ್ಷದ ರಮೇಶ್, 19 ವರ್ಷದ ಶರಣಪ್ಪ ಮತ್ತು 20 ವರ್ಷದ ಮಲ್ಲಿಕಾರ್ಜುನ್ ಎಂದು ತಿಳಿದುಬಂದಿದೆ. 
ಸಿಂಧನೂರು ತಾಲೂಕಿನ ಸಾಸಲಮರಿ ಬಳಿ ವಿದ್ಯುತ್ ಕಂಬ ಹಾಕಲು ತೆರಳುತ್ತಿದ್ದಾಗ ಟ್ರಾಕ್ಟರ್ ನಲ್ಲಿದ್ದ ಕಂಬಗಳು ಒಂದೇ ಕಡೆ ವಾಲಿದ್ದರ ಪರಿಣಾಮ ಟ್ರಾಕ್ಟರ್ ಅಪಘಾತ ಸಂಭವಿಸಿದೆ.
SCROLL FOR NEXT