ಗೌರಿ ಲಂಕೇಶ್ (ಸಂಗ್ರಹ ಚಿತ್ರ ) 
ರಾಜ್ಯ

ಗೌರಿ ಲಂಕೇಶ್ ಹತ್ಯೆಯ ರೂವಾರಿ ಅಮೋಲ್ ಕಾಳೆ: ಎಸ್ ಐಟಿ ಅಧಿಕಾರಿಗಳು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಮುಖ್ಯ ರೂವಾರಿ ಅಮೋಲ್ ಕಾಳೆ ಎಂದು ವಿಶೇಷ ತನಿಖಾ ...

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಮುಖ್ಯ ರೂವಾರಿ ಅಮೋಲ್ ಕಾಳೆ ಎಂದು ವಿಶೇಷ ತನಿಖಾ ದಳ(ಎಸ್ಐಟಿ) ಅಧಿಕಾರಿಗಳು ಹೇಳಿದ್ದಾರೆ. ಈತ ಕಟ್ಟಾ ಹಿಂದುತ್ವವಾದಿಯಾಗಿದ್ದು ಹಿಂದೂ ಧರ್ಮದ ರಕ್ಷಣೆಗೆ ಹೋರಾಟ ನಡೆಸುವವರನ್ನು ತನ್ನ ಸಂಘಟನೆಗೆ ಸೇರಿಸಿಕೊಳ್ಳುವ ಕೆಲಸದಲ್ಲಿ ನಿರತನಾಗಿದ್ದ ಎನ್ನುತ್ತಾರೆ.

ಹಲವು ಹಿಂದೂಪರ ಸಂಘಟನೆಗಳ ಬಗ್ಗೆ ನಿಷ್ಠೆ ಹೊಂದಿದ್ದ ಕಾಳೆಗೆ ಗೌರಿ ಲಂಕೇಶ್ ಹತ್ಯೆಯ ಕೆಲಸವನ್ನು ವಹಿಸಲಾಗಿತ್ತು. ತನಗೆ ಸಿಕ್ಕಿದ ಸೂಚನೆಯಂತೆ ಆತ ಗೌರಿ ಲಂಕೇಶ್ ಹತ್ಯೆಗೆ ಅಮಿತ್ ದೆಗ್ವೇಕರ್ ಜೊತೆ ಚರ್ಚೆ ನಡೆಸಿದ್ದಲ್ಲದೆ ತನ್ನ ಕೆಲಸಕ್ಕೆ ಹಲವರನ್ನು ಸಂಪರ್ಕಿಸಿದ್ದ ಎಂದು ಎಸ್ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಕಾಳೆ ಗೌರಿ ಹತ್ಯೆಗೆ ಮುನ್ನ ಆರೋಪಿಗಳನ್ನು ಧಾರ್ಮಿಕ ಸಭೆಗಳ ಮೂಲಕ ಭೇಟಿ ಮಾಡುತ್ತಿದ್ದ. ತಂಡದ ಸದಸ್ಯರನ್ನು ಸಂಪರ್ಕಿಸಲು ಖಾಸಗಿ ದೂರವಾಣಿಯನ್ನು ಬಳಸುತ್ತಿರಲಿಲ್ಲ. ಪಬ್ಲಿಕ್ ಬೂತ್ ಮೂಲಕ ಫೋನ್ ಮಾಡಿ ಸಂಪರ್ಕಿಸುತ್ತಿದ್ದ. ಆದರೆ ತಾನು ಎಲ್ಲಿ ವಾಸವಿದ್ದೇನೆ, ಏನು ಕೆಲಸ ಮಾಡುತ್ತಿದ್ದೇನೆ ಎಂದು ಅಮೋಲ್ ಕಾಳೆ ಬೇರೆಯವರಿಗೆ ಹೇಳುತ್ತಿರಲಿಲ್ಲ.

ಹಿಂದೂ ಧರ್ಮ ರಕ್ಷಣೆಗೆ ತಮ್ಮೆಲ್ಲರ ಸಹಕಾರ ಬೇಕು ಎಂದು ಇತರರನ್ನು ಪುಸಲಾಯಿಸುತ್ತಿದ್ದ. ಆರಂಭದ ಹಂತದಲ್ಲಿ ಒಬ್ಬರನ್ನು ಕೊಲೆ ಮಾಡಲು ತಾನು ಯೋಜನೆ ರೂಪಿಸುತ್ತಿರುವುದಾಗಿ ಅದಕ್ಕೆ ತಮ್ಮ ಸಹಕಾರ ಬೇಕೆಂದು ಆತ ಕೇಳುತ್ತಿರಲಿಲ್ಲ. ಆರ್ಥಿಕ ಸಹಾಯ ಮತ್ತು ಇತರ ರೀತಿಯ ನೆರವು ಕೇಳುತ್ತಿದ್ದ. ಕೊನೆಯ ಹಂತದಲ್ಲಿ ಮಾತ್ರ ಕೊಲೆಗೆ ತಮ್ಮ ಸಹಕಾರ ಬೇಕೆಂದು ಕೇಳುತ್ತಿದ್ದ ಎಂದು ತನಿಖಾಧಿಕಾರಿಗಳು ಕಾಳೆ ಬಗ್ಗೆ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT