ರಾಜ್ಯ

ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೇ ಕರ್ನಾಟಕ ಹೊತ್ತಿ ಉರಿಯುತ್ತದೆ: ಬೋಪಯ್ಯ

Shilpa D
ಬೆಂಗಳೂರು: ಒಂದು ವೇಳೆ ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೇ ಇಡೀ ಕರ್ನಾಟಕವೇ ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ಮುಖಂಡ ಕೆ.ಜಿ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿರುವ ಹಜ್ ಭವನಕ್ಕೆ  18ನೇ ಶತಮಾನದಲ್ಲಿ ಮೈಸೂರನ್ನು ಆಳಿದ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂಬ ಪ್ರಸ್ತಾವನೆ ಬಂದಿದೆ ಎಂದು ಸಚಿವ ಜಮೀರ್ ಹೇಳಿಕೆಗೆ ಬೋಪಯ್ಯ ಪ್ರತಿಕ್ರಿಯಿಸಿದ್ದಾರೆ.
ಹಜ್ ಭವನ ಎಂದರೇ ಹಜ್ ಭಕ್ತಾದಿಗಳು ಎಂದರ್ಥ, ಟಿಪ್ಪು ಸುಲ್ತಾನ್ ಒಬ್ಬ ದೇಶದ್ರೋಹಿ, ಕೊಲೆಗೆಡುಕ ,ಲಕ್ಷಾಂತರರ ಹಿಂದೂಗಳನ್ನು ಮುಸ್ಲಿಮರಾಗಿ ಪರಿವರ್ತಿಸಿದ. ಅಂಥವನ ಹೆಸರಿಟ್ಟರೇ ಇಡಿ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದು ಹೇಳಿದ್ದಾರೆ.
ನನ್ನ ಜಿಲ್ಲೆ ಕೊಡಗಿನಲ್ಲಿ ಟಿಪ್ಪು 310 ದೇವಾಲಯಗಳನ್ನು ನಾಶ ಮಾಡಿದ್ದಾನೆ,80 ಸಾವಿರ ಹಿಂದುಗಳನ್ನು ಪರಿವರ್ತಿಸಿದ್ದಾನೆ, ಟಿಪ್ಪು ಒಬ್ಬ ಮತಾಂಧ, ಅವನೊಬ್ಬ ದೇಶದ್ರೋಹಿಯೆಂದೇ ಕೊಡಗಿನ ಜನ ಪರಿಗಣಿಸಿದ್ದಾರಕೆ ಎಂದು ಹೇಳಿದ್ದಾರೆ. 
SCROLL FOR NEXT