ಸಾಂದರ್ಭಿಕ ಚಿತ್ರ 
ರಾಜ್ಯ

ಹಾಸ್ಟೆಲ್ ಕೊಠಡಿಯಲ್ಲಿ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಪತ್ತೆ

ಜೂನ್ 16 ರಂದು ನಾಪತ್ತೆಯಾಗಿದ್ದ 10 ನೇ ತರಗತಿ ವಿದ್ಯಾರ್ಥಿನಿ ಮಾಧುರ್ಯ ಮೃತದೇಹ ಹಾಸ್ಟೆಲ್ ಕೊಠಡಿಯಲ್ಲಿ ಶನಿವಾರ ಪತ್ತೆಯಾಗಿದೆ.

ಹಾಸನ: ಜೂನ್ 16 ರಂದು ನಾಪತ್ತೆಯಾಗಿದ್ದ 10 ನೇ ತರಗತಿ ವಿದ್ಯಾರ್ಥಿನಿ ಮಾಧುರ್ಯ ಮೃತದೇಹ ಹಾಸ್ಟೆಲ್  ಕೊಠಡಿಯಲ್ಲಿ ಶನಿವಾರ ಪತ್ತೆಯಾಗಿದೆ.
ಮಾಧುರ್ಯ ಪೋಷಕರು ದಾಖಲಿಸಿದ್ದ ನಾಪತ್ತೆ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು  ಇಲ್ಲಿನ ಸರ್ಕಾರಿ  ಮೆಟ್ರಿಕ್ ಪೂರ್ವ ಹಾಸ್ಟೆಲ್ ನ ಕೊಠಡಿ ಪರಿಶೀಲಿಸಿದಾಗ ಆಕೆಯ ಮತೃದೇಹ ಕಂಡುಬಂದಿದೆ.
ಮಾಧುರ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಶ್ಚರ್ಯವೆಂದರೆ ಆಕೆ ಕೊಠಡಿಯಲ್ಲಿ ಸತ್ತು ಬಿದ್ದಿದ್ದರೂ ವಾರ್ಡನ್ ಗೆ  ಆಗಲೀ ಅಥವಾ ಆಕೆಯ ಗೆಳತಿಯರಿಗಾಗಲೀ ಈ ವಿಷಯ ಗೊತ್ತೆ ಆಗಿಲ್ಲ.
ಮೂಲಗಳ ಪ್ರಕಾರ  ಹಾಸನ ತಾಲೂಕು ಮಲ್ಲದೇವನಹಳ್ಳಿ ಗ್ರಾಮದ ಮಾಧುರ್ಯ,  ಜೂನ್ 16 ರಂದು  ತನ್ನ ಸ್ನೇಹಿತೆಯರೊಂದಿಗೆ ಮೈಸೂರು ಪ್ರವಾಸಕ್ಕೆ ತೆರಳಿದ್ದಳು. ಆಗ್ಗಿನಿಂದಲೂ ನಾಪತ್ತೆಯಾಗಿದ್ದಳು. ಆಕೆಯ ಸ್ನೇಹಿತೆಯರೆಲ್ಲರೂ ಅಂದೇ ವಾಪಾಸ್ಸಾಗಿದ್ದಾರೆ. ಆದರೆ, ಮಾಧುರ್ಯ ತನ್ನ ಸ್ನೇಹಿತೆಯರೆಲ್ಲರೂ ಮೈಸೂರು ಬಿಟ್ಟ ನಂತರ ಪ್ರತ್ಯೇಕವಾಗಿ ವಾಪಾಸ್ಸಾಗಿದ್ದಾಳೆ.
ಮೈಸೂರಿನಲ್ಲಿ  ಸ್ನೇಹಿತೆಯರೆಲ್ಲರೂ  ತೆರಳಿದ ನಂತರ ಮಾಧುರ್ಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ  ಕೆ. ಆರ್. ನಗರದ ಅರುಣ್ ಕುಮಾರ್,  ಚಾಮರಾಜನಗರದ ಮಹೇಶ್, ಹಾಗೂ  ಹಾಸನ ತಾಲೂಕು ಚೌಡೇನಹಳ್ಳಿಯ  ಶರತ್ ರಾಜ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT