ಸಿದ್ದರಾಮಯ್ಯ 
ರಾಜ್ಯ

ಬೆಂಗಳೂರು: ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಮಾಧ್ಯಮಗಳ ಬಹಿಷ್ಕಾರ

ದೂರವಾಣಿ ನಗರದ ಐಟಿಐ ಇನ್ ಸ್ಟಿಟ್ಯೂಟ್ ನಲ್ಲಿ ಶಾಸಕ ಭೈರತಿ ಬಸವರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಸಮಾರಂಭ ...

ಬೆಂಗಳೂರು: ದೂರವಾಣಿ ನಗರದ ಐಟಿಐ ಇನ್ ಸ್ಟಿಟ್ಯೂಟ್ ನಲ್ಲಿ  ಶಾಸಕ ಭೈರತಿ ಬಸವರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು, ಈ ವೇಳೆ ಮಾಧ್ಯಮದವರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಸಣ್ಣ ತಿಕ್ಕಾಟದಿಂದ ಕೆಲ ಕಾಲ ಗೊಂದಲದ ವಾತಾವರಣ ಏರ್ಪಟ್ಟಿತ್ತು.
ವೇದಿಕೆಯಿಂದ ಸುಮಾರು 20 ಅಡಿ ದೂರದಲ್ಲಿ ಮಾಧ್ಯಮದವರಿಗೆ ಸ್ಥಳ ಕಾದಿರಿಸಲಾಗಿತ್ತು, ಇದರ ಮುಂದಿನ ಸಾಲುಗಳಲ್ಲಿ ಸೀಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಳಿತಿದ್ದರು, ಈ ವೇಳೆಗಾಗಲೇ ಕೆಲ ಮಾಧ್ಯಮದವರು ಕ್ಯಾಮೆರಾಗಳ ಜೊತೆ ಆಸೀನರಾಗಿದ್ದರು, ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಬರುವ ವೇಳೆಗೆ ಬಸ್ ಮತ್ತು ಕಾರುಗಳಲ್ಲಿ ಸುಮಾರು 20 ಪತ್ರಕರ್ತರು ಜೊತೆಯಲ್ಲಿ ಆಗಮಿಸಿದರು,
ಈ ವೇಳೆ ಬಂದ ಪತ್ರಕರ್ತರು ಪೋಡಿಯಂ ನಲ್ಲಿ ಬಂದು ಕುಳಿತರು, ಹೀಗಾಗಿ ಹಿಂದೆ ಕುಳಿತಿದ್ದವರಿಗೆ ನೋಡು ಏನು ಕಾಣುತ್ತಿರಲಿಲ್ಲ, ಹೀಗಾಗಿ ಎರಡು ಗುಂಪುಗಳ ನಡುವೆ ಗುಂಪು ಘರ್ಷಣೆ ನಡೆಯಿತು, ಈ ವೇಳೆ ಕೈಕೈ ಮಿಲಾಯಿಸಲಾಯಿತು, ಈ ವೇಳೆ ಶಾಸಕ ಬೈರತಿ ಬಸವರಾಜ್ ಸಮಾಧಾನವಾಗುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ,
ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಅಲ್ಲಿಂದ ತಮ್ಮ ಕ್ಯಾಮೆರಾಗಳನ್ನು ಎತ್ತಿಕೊಂಡು ಹೊರ ನಡೆದರು.ಕಾರ್ಯಕ್ರಮ ಬಹಿಷ್ಕರಿಸಿ ಅಲ್ಲಿಂದ ಹೊರ ನಡೆದರು. ಕೆಲ ಕ್ಷಣದಲ್ಲಿ  ಪಕ್ಷದ ಕೆಲ ಕಾರ್ಯಕರುತರು ಮತ್ತು ಪೊಲೀಸರು ಅವರನ್ನು ವಾಪಸ್ ಕರೆ ತಂದರು. ನಂತರ  ವಾಪಸ್ ಬಂದ ಪತ್ರಕರ್ತರು ಕಾರ್ಯಕ್ರಮ ಶೂಟಿಂಗ್ ನಲ್ಲಿ ಪಾಲ್ಗೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Vice President Election 2025: ನೂತನ ಉಪ ರಾಷ್ಟ್ರಪತಿಯಾಗಿ ಸಿ ಪಿ ರಾಧಾಕೃಷ್ಣನ್ ಆಯ್ಕೆ

ಮದ್ದೂರಿನಲ್ಲಿ ಕಲ್ಲು ತೂರಾಟ: ಶಾಂತಿ ಕದಡುವುದೇ ಬಿಜೆಪಿ ಉದ್ದೇಶ; ಜಾತಿ, ಧರ್ಮ, ಪಕ್ಷ ಲೆಕ್ಕಿಸದೆ ಕ್ರಮ; Video

ಆಜ್ ತಕ್ ನಿರೂಪಕನ ವಿರುದ್ಧ ದ್ವೇಷ ಭಾಷಣ ಆರೋಪ: ಎಫ್‌ಐಆರ್ ದಾಖಲಿಸಲು UP ನ್ಯಾಯಾಲಯ ಆದೇಶ

Amruta Fadnavis: 'ನೀತಿ ಪಾಠ ಹೇಳುವವರೆ ಈ ರೀತಿಯ ಬಟ್ಟೆ ಧರಿಸಿದರೆ ಹೇಗೆ? ಮಹಾ ಸಿಎಂ 'ಫಡ್ನವೀಸ್ ಪತ್ನಿ' ವಿರುದ್ಧ ನೆಟ್ಟಿಗರ ಆಕ್ರೋಶ, Video ವೈರಲ್

ಅಕ್ರಮ ಬೆಟ್ಟಿಂಗ್ ಪ್ರಕರಣ: ವೀರೇಂದ್ರ ಪಪ್ಪಿ ಚಿನ್ನದ ಖಜಾನೆ ಕಂಡು ED ಶಾಕ್; 21 ಕೆಜಿ ಗೋಲ್ಡ್ ಬಿಸ್ಕೇಟ್ ಜಪ್ತಿ

SCROLL FOR NEXT