ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮಟನ್ ಸಾಂಬಾರ್ ಮಾಡೆಂದದ್ದಕ್ಕೆ ಪತ್ನಿಯಿಂದ ಪತಿಯ ಕೊಲೆ

ಮಟನ್ ಸಾಂಬಾರ್ ಮಾಡುವಂತೆ ಪೀಡಿಸುತ್ತಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ.

ಬೆಂಗಳೂರು: ಮಟನ್ ಸಾಂಬಾರ್ ಮಾಡುವಂತೆ ಪೀಡಿಸುತ್ತಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ.
ಗೋಪಾಲ್ (46) ಕೊಲೆಯಾದ ದುರ್ದೈವಿ. ಆರೋಪಿ ಪತ್ನಿ ರುದ್ರಮ್ಮ ಹೂವಿನ ವ್ಯಾಪಾರ ಮಾಡಿಕೊಂಡಿದ್ದಳು. ಪತಿ ನಿತ್ಯವೂ ಕಂಠಮಟ್ಟ ಕುಡಿದು ಬರುತ್ತಿದ್ದ. ಏ.29ರಂದು ಸಹ ಆತ ಕುಡಿದು ಬಂದದ್ದಲ್ಲದೆ ಮಟನ್ ಸಾಂಬಾರ್ ಮಾಡುವಂತೆ ಗಲಾಟೆ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ರುದ್ರಮ್ಮ ಗಂಡನನ್ನು ಹತ್ಯೆ ಮಾಡಿದ್ದಾಳೆ ಎಂದು ಕುಮಾರ ಸ್ವಾಮಿ ಲೇಔಟ್ ಪೋಲೀಸರು ಹೇಳಿದರು.
ದಂಪತಿಗಳು ಕುಮಾರಸ್ವಾಮಿ ಲೇಔಟ್ ನ ಪ್ರಗತಿಪುರ ನಿವಾಸಿಗಳಾಗಿದ್ದು ಮೂವರು ಹೆಣ್ಣುಮಕ್ಕಳನ್ನು ಹೊಂದಿದ್ದಾರೆ. ಕೊಲೆಯಾದ ಗೋಪಾಲ್ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದನೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮನೆಯ ಕಿಟಕಿ ರಿಪೇರಿಗೆಂದು ರುದ್ರಮ್ಮನಿಂದ 2 ಸಾವಿರ ಪಡೆದು ಹೋಗಿದ್ದ ಗೋಪಾಲ್ ಕುಡಿದು ಬಂದು ಊಟಕ್ಕೆ ಮಟನ್ ಸಾಂಬಾರ್ ಮಾಡುವಂತೆ ಗಲಾಟೆ ಮಾಡಿದ್ದ. ಆಗ ಅದಕ್ಕೆ ನಿರಾಕರಿಸಿದ ರುದ್ರಮ್ಮನನ್ನು ಬಾಯಿ ತುಂಬಾ ಬೈಯ್ದು ಹೊಡೆಯಲು ಮುಂದಾಗಿದ್ದ. ಇದರಿಂದ ಬೇಸರಗೊಂಡ ರುದ್ರಮ್ಮ ಮಹಡಿಯ ಕೋಣೆ ಏರಿ ಕುಳಿತಳು. ಆಗ ಗೋಪಾಲ್ ತಾನೇ ಹೋಗಿ ಮಾಂಸ ತಂದು ಬೇಯಿಸಿ ಊಟ ತೀರಿಸಿದ್ದ. 
ಮಧ್ಯ ರಾತ್ರಿ ವೇಳೆಗೆ ಮಹಡಿಯಿಂದ ಇಳಿದ ರುದ್ರಮ್ಮ ಪತಿ ಮಲಗಿರುವುದು ಖಚಿತಪಡಿಸಿಕೊಂಡಳು. ಅವನ ಕೈ ಕಾಲುಗಳನ್ನು ಲುಂಗಿಯಿಂದ ಕಟ್ಟಿದ ರುದ್ರಮ್ಮ ಸೀರೆಯೊಂದರಿಂದ ಅವನ ಕತ್ತನ್ನು ಬಿಗಿದು ಉಸಿರುಗಟ್ಟಿಸಿ ಅವನನ್ನು ಹತ್ಯೆ ಮಾಡಿದ್ದಳು.  ಇದಾಗಿ ಮರುದಿನ ಪತಿ ಮದ್ಯಪಾನ ಮಾಡಿ ಸತ್ತಿದ್ದಾನೆಂದು ಆಕೆ ಪೋಲೀಸರಿಗೆ ಮಾಹಿತಿ ನೀಡಿದ್ದಾಳೆ.
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಪೋಲೀಸರಿಗೆ ಕುತ್ತಿಗೆ ಮೇಲೆ ಬಟ್ಟಿಯಿಂದ ಬಿಗಿದ ಗುರುತು ಪತ್ತೆಯಾಗಿದೆ. ತಕ್ಷಣ  ಪತ್ನಿ ರುದ್ರಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೋಲೀಸರಿಗೆ ಗೋಪಾಲ್ ಹತ್ಯೆ ಆಗಿರುವುದು ಖಚಿತಪಟ್ಟಿದೆ.
ಸಧ್ಯ ಆರೋಪಿ ರುದ್ರಮ್ಮನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT