ರಾಜ್ಯ

ಮೋದಿ ಒಬ್ಬ ಸುಳ್ಳ, ಮೋಸಗಾರ: ರಾಮ್ ಜೇಠ್ಮಲಾನಿ

Raghavendra Adiga
ಬೆಂಗಳೂರು: "ಮೋದಿಯೊಬ್ಬ ಸುಳ್ಳ, ಮೋಸಗಾರ ಮೋದಿಯನ್ನು ಪ್ರಧಾನಿ ಮಾಡಿ ಎಂದು ಹೇಳಿ ನಾನೇ ಮೂರ್ಖನಾದೆ" ಹಿರಿಯ ವಕೀಲ ರಾಮ್ ಜೇಠ್ಮಲಾನಿ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು "ಮೋದಿ ಮೋಸಗಾರ, ವಿದೇಶದಲ್ಲಿದ್ದ ಕಪ್ಪು ಹಣವನ್ನು ಭಾರತಕ್ಕೆ ತರುವೆನೆಂದ ಪ್ರಣಾಳಿಕೆಯಲ್ಲಿ ನನ್ನಿಂದಲೇ ಬರೆದುಕೊಂಡು ಇಂದು ಅದರ ಬಗ್ಗೆ ಚಕಾರವೆತ್ತುತ್ತಿಲ್ಲ.ಇನ್ನು ಅಮಿತ್ ಶಾ ಅಂತಹವರಿಗೆ ಇದೊಂದು ನಗೆಚಾಟಿಕೆಯ ವಿಚಾರವಾಗಿದೆ" ಎಂದರು.
"ಕರ್ನಾಟಕದ ಜನ ಮೋದಿ ಮಾತಿಗೆ ಮರುಳಾಗಬೇಡಿ. ನಿಮಗಿಷ್ಟವಾದವರಿಗೆ ಮತ ನಿಡಿ. ಆದರೆ ಮೋದಿಯಂತಹಾ ಮೋಸಗಾರ ಮತ್ತು ಕೃತ್ಯಗಾರನ ಮೋಸವನ್ನು ಮರೆಯದಿರಿ. ಬಿಜೆಪಿಯಲ್ಲಿ ಅತಿ ಹೆಚ್ಚಿನ ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯುಳ್ಳವರಿದ್ದಾರೆ. ಇದು ಆ ಪಕ್ಷದ ಸ್ಥಿತಿಯನ್ನು ತೋರಿಸುತ್ತಿದೆ" ಎಂದು ಎಚ್ಚರಿಸಿದರು.
"ಮೋದಿಗೆ ಬುದ್ದಿ ಕಲಿಸುವವರೆಗೆ , ನನ್ನ ಕೊನೆಯುಸಿರು ಇರುವವರೆಗೆ ನಾನು ಹೋರಾಡುತ್ತೇನೆ. ನಾನು ವಕೀಲ ವೃತ್ತಿಯಿಂದ ನಿವೃತ್ತನಾಗಿದ್ದೇನೆ ಇನ್ನು ನನ್ನ ಜೀವನವೆಲ್ಲಾ ಮೋದಿಯ ಮೋಸವನ್ನು ಜನರಿಗೆ ತಿಳಿಸುವುದಕ್ಕೆ ಮೀಸಲು" ಅವರು ಹೇಳಿದರು.
SCROLL FOR NEXT