ರಾಮ್ ಜೇಠ್ಮಲಾನಿ 
ರಾಜ್ಯ

ಮೋದಿ ಒಬ್ಬ ಸುಳ್ಳ, ಮೋಸಗಾರ: ರಾಮ್ ಜೇಠ್ಮಲಾನಿ

ಮೋದಿಯೊಬ್ಬ ಸುಳ್ಳ, ಮೋಸಗಾರ ಮೋದಿಯನ್ನು ಪ್ರಧಾನಿ ಮಾಡಿ ಎಂದು ಹೇಳಿ ನಾನೇ ಮೂರ್ಖನಾದೆ, ಅವ" ಹಿರಿಯ ವಕೀಲರಾಮ್ ಜೇಠ್ಮಲಾನಿ ಹೇಳಿದ್ದಾರೆ.

ಬೆಂಗಳೂರು: "ಮೋದಿಯೊಬ್ಬ ಸುಳ್ಳ, ಮೋಸಗಾರ ಮೋದಿಯನ್ನು ಪ್ರಧಾನಿ ಮಾಡಿ ಎಂದು ಹೇಳಿ ನಾನೇ ಮೂರ್ಖನಾದೆ" ಹಿರಿಯ ವಕೀಲ ರಾಮ್ ಜೇಠ್ಮಲಾನಿ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು "ಮೋದಿ ಮೋಸಗಾರ, ವಿದೇಶದಲ್ಲಿದ್ದ ಕಪ್ಪು ಹಣವನ್ನು ಭಾರತಕ್ಕೆ ತರುವೆನೆಂದ ಪ್ರಣಾಳಿಕೆಯಲ್ಲಿ ನನ್ನಿಂದಲೇ ಬರೆದುಕೊಂಡು ಇಂದು ಅದರ ಬಗ್ಗೆ ಚಕಾರವೆತ್ತುತ್ತಿಲ್ಲ.ಇನ್ನು ಅಮಿತ್ ಶಾ ಅಂತಹವರಿಗೆ ಇದೊಂದು ನಗೆಚಾಟಿಕೆಯ ವಿಚಾರವಾಗಿದೆ" ಎಂದರು.
"ಕರ್ನಾಟಕದ ಜನ ಮೋದಿ ಮಾತಿಗೆ ಮರುಳಾಗಬೇಡಿ. ನಿಮಗಿಷ್ಟವಾದವರಿಗೆ ಮತ ನಿಡಿ. ಆದರೆ ಮೋದಿಯಂತಹಾ ಮೋಸಗಾರ ಮತ್ತು ಕೃತ್ಯಗಾರನ ಮೋಸವನ್ನು ಮರೆಯದಿರಿ. ಬಿಜೆಪಿಯಲ್ಲಿ ಅತಿ ಹೆಚ್ಚಿನ ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯುಳ್ಳವರಿದ್ದಾರೆ. ಇದು ಆ ಪಕ್ಷದ ಸ್ಥಿತಿಯನ್ನು ತೋರಿಸುತ್ತಿದೆ" ಎಂದು ಎಚ್ಚರಿಸಿದರು.
"ಮೋದಿಗೆ ಬುದ್ದಿ ಕಲಿಸುವವರೆಗೆ , ನನ್ನ ಕೊನೆಯುಸಿರು ಇರುವವರೆಗೆ ನಾನು ಹೋರಾಡುತ್ತೇನೆ. ನಾನು ವಕೀಲ ವೃತ್ತಿಯಿಂದ ನಿವೃತ್ತನಾಗಿದ್ದೇನೆ ಇನ್ನು ನನ್ನ ಜೀವನವೆಲ್ಲಾ ಮೋದಿಯ ಮೋಸವನ್ನು ಜನರಿಗೆ ತಿಳಿಸುವುದಕ್ಕೆ ಮೀಸಲು" ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT