ಐಸ್ ಕ್ರೀಂ ಸವಿಯುತ್ತಿರುವ ರಾಹುಲ್ ಗಾಂಧಿ
ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆ ಮತದಾನಕ್ಕೆ ಇನ್ನೆರಡು ದಿನ ಬಾಕಿಯಿದ್ದು ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸುಡು ಬಿಸಿಲಿನಿಂದಾಗಿ ಶನಿವಾರ ಐಸ್ ಕ್ರೀಂ ಸವಿಯಲು ತೆರಳಿದ್ದರು.
ಶಿವಾನಂದ ಸರ್ಕಲ್ ನಲ್ಲಿರುವ ರಿಚಿ ರಿಚ್ ಗೆ ಭೇಟಿ ನೀಡಿ, ಅಲ್ಲಿ ಐಸ್ ಕ್ರೀಂ ಸವಿದಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ.
ನನ್ನ ಇಷ್ಟು ದಿನದ ಚುನಾವಣಾ ಪ್ರಚಾರದ ಕೊನೆಯ ದಿನವನ್ನು ಕಳೆಯಲು ಬೆಂಗಳೂರಿನಲ್ಲಿರುವ ಐಸ್ ಕ್ರೀಂ ಪಾರ್ಲರ್ ಒಂದು ಒಳ್ಳೆಯ ಜಾಗವಾಗಿತ್ತು. ಇಲ್ಲಿ ದೊರೆಯುವ ಐಸ್ ಕ್ರೀಂ ತುಂಬಾನೇ ಟೇಸ್ಟಿಯಾಗಿದೆ. ಅಲ್ಲದೇ ಇಲ್ಲಿನ ಸಿಬ್ಬಂದಿ ಕೂಡ ಸ್ನೇಹ ಮನೋಭಾವದಿಂದ ಕೂಡಿದ್ದಾರೆ. ಈ ಪಾರ್ಲರ್ ನ ಮಾಲೀಕನನ್ನು ಮತ್ತು ಕೆಲ ಗ್ರಾಹಕರನ್ನು ಭೇಟಿ ಮಾಡಿ ಮಾಡಿದ್ದು, ಖುಷಿ ನೀಡಿದೆ. ಆದಷ್ಟು ಬೇಗ ಮತ್ತೆ ಇದೇ ಪಾರ್ಲರ್ ಗೆ ಭೇಟಿ ನೀಡುತ್ತೇನೆ ಅಂತ ಬರೆದುಕೊಂಡಿದ್ದಾರೆ.
ಈ ಹಿಂದೆ ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ರಸ್ತೆ ಬದಿಯ ಕುಲ್ಫಿ ಅಂಗಡಿಯಿಂದ ಕುಲ್ಫಿ ತಿಂದು ಮೆಚ್ಚುಗೆ ಸೂಚಿಸಿದ್ದರು.