ರಾಜ್ಯ

ಕಾಂಗ್ರೆಸ್ ಕಾರ್ಪೋರೇಟರನ್ನು ಬಂಧಿಸಿ, ಕೈಕಟ್ಟಿ ರಸ್ತೆ ಮಧ್ಯೆ ಪೊಲೀಸರಿಂದ ಮೆರವಣಿಗೆ, ವಿಡಿಯೋ ವೈರಲ್

Vishwanath S
ದಾವಣಗೆರೆ: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನದ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದ ದಾವಣಗೆರೆ ಕಾಂಗ್ರೆಸ್ ಕಾರ್ಪೋರೇಟರ್ ಶ್ರೀನಿವಾಸ್ ಅಲಿಯಾಸ್ ಮೋಟ್ಬಾಳ್ ಸೀನನನ್ನು ಪೊಲೀಸರು ಬಂಧಿಸಿ ನಗರದಲ್ಲಿ ಮೆರವಣಿಗೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಶನಿವಾರ ಮತದಾನ ನಡೆಯುತ್ತಿದ್ದ ವೇಳೆ ಸೀನ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಈ ಸಂಬಂಧ ಮಾಜಿ ಸಚಿವ, ಬಿಜೆಪಿ ನಾಯಕ ಎಸ್ ಎ ರವೀಂದ್ರನಾಥ್ ಅವರು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 
ಈ ದೂರಿನನ್ವಯ ಪೊಲೀಸರು ಭಾನುವಾರ ಸೀನನನ್ನು ಬಂಧಿಸಿ ಆತನ ಕೈ ಕಟ್ಟಿ, ಕತ್ತಿನ ಪಟ್ಟಿ ಹಿಡಿದು ರಸ್ತೆಯುದ್ದಕ್ಕೂ ಎಳೆದೊಯ್ದರು. ಇದನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಮಾಡಿದ್ದಾರೆ.
SCROLL FOR NEXT