ರಾಜ್ಯ

ಹಂಗಾಮಿ ಸ್ಪೀಕರ್ ಆಯ್ಕೆ: ನಾಳೆ ಬೆಳಿಗ್ಗೆ 10:30ಕ್ಕೆ ಸುಪ್ರೀಂ ವಿಚಾರಣೆ

Raghavendra Adiga
ನವದೆಹಲಿ: ಕರ್ನಾಟಕ ರಾಜಕೀಯ ಬೆಳವಣಿಗೆಗಳು ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು ಹಂಗಾಮಿ ಸ್ಪೀಕರ್ ಕೆಜಿ ಬೋಪಯ್ಯ ಅವರ ಆಯ್ಕೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ನಾಳೆ ಬೆಳಿಗ್ಗೆ 10:30 ಕ್ಕೆ ವಿಚಾರಣೆಗೆ ಬರಲಿದೆ.
ರಾಜ್ಯಪಾಲರಿಂದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ನೇಮಕವಾದ  ಭಾರತೀಯ ಜನತಾ ಪಕ್ಷದ ಶಾಸಕ  ಕೆ.ಜಿ. ಬೋಪಯ್ಯ ಅವರ ಆಯ್ಕೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಇದೇ ವೇಳೆ ನಾಳೆ ಸಂಜೆ ನಾಲ್ಕಕ್ಕೆ ಯಡಿಯೂರಪ್ಪ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದನ್ವಯ ವಿಶ್ವಾಸಮತ ಯಾಚನೆಗೆ ಸಿದ್ದತೆ ನಡೆಸಿದೆ.
ನಾಲ್ಕು ಬಾರಿ ಶಸಕರಾಗಿ ಆಯ್ಕೆಯಾಗಿರುವ  ಬೋಪಯ್ಯ ಅವರು 2009 ರಿಂದ 2013 ರವರೆಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಆಗಿದ್ದರು. 
SCROLL FOR NEXT