ಡಿಜಿಟಲ್ ಬಸ್ ನಿಲ್ದಾಣ 
ರಾಜ್ಯ

ಬೆಳಗಾವಿಯಲ್ಲಿ ಡಿಜಿಟಲ್ ಬಸ್ ನಿಲ್ದಾಣ, ಟಿವಿ ಜೊತೆಗೆ ಇಂಟರ್ ನೆಟ್!

ಕುಂದಾನಗರಿ ಬೆಳಗಾವಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ತಲೆ ಎತ್ತಿದ್ದು, ಬಸ್ ಗಾಗಿ ಕಾಯುವ ಪ್ರಯಾಣಿಕರು ಇನ್ಮೂಂದೆ ಜಗತ್ತಿನೆಲ್ಲೆಡೆ ಸಂಪರ್ಕ ಸಾಧಿಸುವಂತಾಗಿದೆ.

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ತಲೆ ಎತ್ತಿದ್ದು, ಬಸ್ ಗಾಗಿ ಕಾಯುವ ಪ್ರಯಾಣಿಕರು ಇನ್ಮೂಂದೆ  ಜಗತ್ತಿನೆಲ್ಲೆಡೆ ಸಂಪರ್ಕ ಸಾಧಿಸುವಂತಾಗಿದೆ.

ಈ ಡಿಜಿಟಲ್ ಬಸ್ ನಿಲ್ದಾಣದಲ್ಲಿ ಜನರು ಅಂತರ್ಜಾಲ ಜಾಲಾಡಬಹುದಾಗಿದೆ. ಕಾಫಿ ಕುಡಿದು ಟಿವಿ ವೀಕ್ಷಿಸಿ ಎಂಜಯ್ ಮಾಡಬಹುದಾಗಿದೆ. ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಗುತ್ತಿದೆ.

ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್  ಅವರ ಅನುದಾನದಲ್ಲಿ ವಾಜಪೇಯಿ ಮಾರ್ಗದಲ್ಲಿ ಆರ್ ಪಿಡಿ ವೃತ್ತದ ಬಳಿ ಸುಮಾರು  ಒಂಬತ್ತೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬಸ್ ನಿಲ್ದಾಣವನ್ನು ಸ್ಥಾಪಿಸಲಾಗಿದೆ.  ಇಲ್ಲಿ ಉಚಿತ ವೈ, ಫೈ ವ್ಯವಸ್ಥೆ ಮಾಡಲಾಗಿದೆ. ಏಕಕಾಲದಲ್ಲಿ 40 ಜನರು ವೈಫೈ  ವ್ಯವಸ್ಥೆ ಬಳಸಿಕೊಳ್ಳುವ ಮೂಲಕ ಅಂತರ್ಜಾಲದಲ್ಲಿ ಜಾಲಡಬಹುದಾಗಿದೆ ಎಂದು ಇಂಟರ್ನೆಟ್ ಪೂರೈಕೆ ಸೇವಾ ಕಂಪನಿ ತಿಳಿಸಿದೆ.

ಇಂಟರ್ನೆಟ್  ಸಂಪರ್ಕ ಹೊರತುಪಡಿಸಿದಂತೆ ಬಸ್ ನಿಲ್ದಾಣದ ಎರಡು ಕಡೆಗಳಲ್ಲಿ ಎರಡು ಎಲ್ ಇಡಿ ಟಿವಿಗಳನ್ನು ಹಾಕಲಾಗಿದೆ. ಜನರು ಸುದ್ದಿ ವೀಕ್ಷಿಸಲು ಅನುಕೂಲವಾಗುವಂತೆ ಸ್ಥಳೀಯ ಕೇಬಲ್ ಸೇವಾ ಕಂಪನಿಯಿಂದ ಈ ಟಿವಿಗಳಿಗೆ  ಉಚಿತವಾಗಿ ಕೇಬಲ್ ಅಳವಡಿಸಲಾಗಿದೆ.

ಭದ್ರತೆ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಹಾಕಲಾಗಿದೆ. ಆದಾಯ ಉತ್ಪತ್ತಿ ನಿಟ್ಟಿನಲ್ಲಿ ಚಿಕ್ಕದಾದ ಕಾಫಿ ಅಂಗಡಿಯೂ ಇದೆ. ಬಸ್ ನಿಲ್ದಾಣ ಅಭಿವೃದ್ದಿಪಡಿಸಿರುವ ಲೋಕೋಪಯೋಗಿ ಇಲಾಖೆ ಕಾಫಿ ಅಂಗಡಿ ಮಾಲೀಕರಿಂದ ಸಾವಿರ ರೂಪಾಯಿ ಬಾಡಿಗೆ ಪಡೆಯಲಿದೆ.

ಈ ಬಸ್ ನಿಲ್ದಾಣದಲ್ಲಿ ಜಾಹೀರಾತು ಅಳವಡಿಸಲು ಬೆಳಗಾವಿ ಮಹಾನಗರ ಪಾಲಿಕೆಗೆ ಬಾಡಿಗೆಯನ್ನು ನಿಗದಿಪಡಿಸಲಾಗಿದೆ.ಈ ನಿಲ್ದಾಣಕ್ಕೆ  ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕ್ಯಾಪ್ಟನ್ ವಿಕ್ರಮ್ ಬಾತ್ರ ಹೆಸರಿಡಲು ನಿರ್ಧರಿಸಲಾಗಿದೆ.

 ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್, ಪ್ರಯಾಣಿಕರು ಸುಮ್ಮನೆ ಸಮಯ ವ್ಯರ್ಥ ಮಾಡದಂತೆ ಸದ್ಬಳಕೆ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಈ ಬಸ್ ನಿಲ್ದಾಣ ಸ್ಥಾಪಿಸಲಾಗಿದ್ದು, ಈಗಾಗಲೇ ಇಬ್ಬರಿಗೆ ಕೆಲಸ ನೀಡಲಾಗಿದೆ.  ಉಳಿದ  20 ಕಡೆಗಳಲ್ಲಿ ಇದೇ ರೀತಿಯ ಡಿಜಿಟಲ್ ಬಸ್ ನಿಲ್ದಾಣ ನಿರ್ಮಿಸಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT