ಸಾಂದರ್ಭಿಕ ಚಿತ್ರ 
ರಾಜ್ಯ

ನಕಲಿ ಜಿಎಸ್ ಟಿ ಸರಕುಪಟ್ಟಿ ಹಗರಣ: ತೆರಿಗೆ ಸಲಹೆಗಾರನ ಕೈವಾಡ ಶಂಕೆ

ದೇಶದಲ್ಲಿಯೇ ಅತಿದೊಡ್ಡ ಜಿಎಸ್ ಟಿ ನಕಲಿ ಸರಕುಪಟ್ಟಿ ಹಗರಣ ಎಂದು ಹೇಳಲಾಗುತ್ತಿರುವ ಜಿಎಸ್ ಟಿ ನಕಲಿ ...

ಬೆಂಗಳೂರು: ದೇಶದಲ್ಲಿಯೇ ಅತಿದೊಡ್ಡ ಜಿಎಸ್ ಟಿ ನಕಲಿ ಸರಕುಪಟ್ಟಿ ಹಗರಣ ಎಂದು ಹೇಳಲಾಗುತ್ತಿರುವ ಜಿಎಸ್ ಟಿ ನಕಲಿ ಸರಕುಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ ಸುಹೈಲ್ ಎಂಬ ತೆರಿಗೆ ಸಲಹೆಗಾರನ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಬಿ ಕಾಂ ಪದವೀಧರನಾಗಿರುವ ಸುಹೈಲ್ ಕಳೆದೊಂದು ದಶಕದಿಂದ ತೆರಿಗೆ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದು ದೇಶದ ಹೊಸ ತೆರಿಗೆ ವ್ಯವಸ್ಥೆಯ ಜಟಿಲತೆಗಳ ಬಗ್ಗೆ ಜ್ಞಾನವನ್ನು ಹೊಂದಿದ್ದನು.

ಸುಮಾರು 1200 ಕೋಟಿ ರೂಪಾಯಿ ಸರಕುಪಟ್ಟಿಯ ನಕಲು ಮಾಡಿರುವ ಹಗರಣದ ಹಿಂದೆ ಬಾಷಾ ಎಂಬ ಚಿಂದಿ ವ್ಯಾಪಾರಿ ಕೂಡ ಇದ್ದಾನೆ ಎನ್ನಲಾಗುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಸರ್ಕಾರಕ್ಕೆ ಜಿಎಸ್ ಟಿ ನೀಡದೆ ವಂಚನೆಯೆಸಗಲು ನೋಡಿದ್ದರು ಎಂದು ಹೇಳುತ್ತಾರೆ.

ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಹಫಿಝುರ್ ಎಂಬ ಮತ್ತೊಬ್ಬಾತ ಇದ್ದು ಆತ ಸುಹೈಲ್ ಜೊತೆ ತೆರಿಗೆ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದ. ಕಳೆದ 10 ತಿಂಗಳಿನಿಂದ ಈ ಆರೋಪಿಗಳು ಹಗರಣದಲ್ಲಿ ವಂಚನೆಯಲ್ಲಿ ತೊಡಗಿದ್ದು ಎರಡು ತಿಂಗಳ ಹಿಂದೆ ಬೆಳಕಿಗೆ ಬಂದಿತು ಎಂದು ಬೆಂಗಳೂರು ದಕ್ಷಿಣ ವಿಭಾಗದ ಜಿಎಸ್ ಟಿ ಆಯುಕ್ತರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

SCROLL FOR NEXT