ಸಾಂದರ್ಭಿಕ ಚಿತ್ರ 
ರಾಜ್ಯ

ಮಾಲೀಕರಿಗೆ ಪ್ರತಿಷ್ಠೆಯ ಸ್ಪರ್ಧೆಯಾಗಿರುವ ಕಂಬಳ ಕ್ರೀಡೆ

ಕರಾವಳಿ, ಉಡುಪಿ ಜಿಲ್ಲೆಗಳಲ್ಲಿ ಪ್ರತಿಷ್ಠಿತ ಕಂಬಳ ಕ್ರೀಡೆ ಆರಂಭಗೊಂಡಿದೆ. ಕೋಣಗಳ ಮಾಲೀಕರು ಪಂದ್ಯಕ್ಕೆ...

ಉಡುಪಿ: ಕರಾವಳಿ, ಉಡುಪಿ ಜಿಲ್ಲೆಗಳಲ್ಲಿ ಪ್ರತಿಷ್ಠಿತ ಕಂಬಳ ಕ್ರೀಡೆ ಆರಂಭಗೊಂಡಿದೆ. ಕೋಣಗಳ ಮಾಲೀಕರು ಪಂದ್ಯಕ್ಕೆ ಕೊನೆಯ ಹಂತದ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪಾಲಿನ ಸೊತ್ತು ಎಂದು ನಂಬಿಕೊಂಡು ಜತನದಿಂದ ಕೋಣಗಳನ್ನು ಕಾಪಾಡಿಕೊಂಡು ಬರುವ ಮಾಲೀಕರು ಕಂಬಳದಲ್ಲಿ ಗೆದ್ದು ಬರಬೇಕೆಂಬ ಆಸೆ ಹೊತ್ತಿರುತ್ತಾರೆ.

ಮಣಿಪಾಲದ ಸಮೀಪ ಹೀರೆಬೆಟ್ಟು ಗ್ರಾಮದ ಕಂಚಿನಬೈಲುನಲ್ಲಿ ಕೃಷಿಕ ಹಾಗೂ ಹೊಟೇಲ್ ಉದ್ಯಮ ನಡೆಸುತ್ತಿರುವ ಶ್ರೀಕಾಂತ್ ಭಟ್ ಅವರು ಕಂಬಳ ಕ್ರೀಡೆಯ ಅಪಾರ ಪ್ರಿಯರು. ತಮ್ಮ 15 ಎಕರೆ ಜಮೀನಿನಲ್ಲಿ ಕೋಣಗಳಿಗೆ ಸೂಕ್ತ ಗಾಳಿ, ಬೆಳಕು ವ್ಯವಸ್ಥೆಯಿರುವ ಕೊಟ್ಟಿಗೆಯನ್ನು ನಿರ್ಮಿಸಿ 7 ಕಂಬಳ ಕೋಣಗಳನ್ನು ಸಾಕುತ್ತಿದ್ದಾರೆ. ಪ್ರತಿದಿನ ಈ ಕೋಣಗಳಿಗೆ 5 ಕೆಜಿ ಹುರುಳಿ, ಹುಲ್ಲು, ಅರ್ಧ ಕೆಜಿ ಬೆಲ್ಲ, 150 ಎಂಎಲ್ ಸಾಸಿವೆ ಮತ್ತು ವಾರಕ್ಕೊಂದು ದಿನ ತೆಂಗಿನ ಎಣ್ಣೆ ಕುಡಿಸುತ್ತಾರೆ.

ಭಟ್ಟರ ಕೋಣಗಳನ್ನು ನೋಡಿಕೊಳ್ಳುತ್ತಿರುವ ಸಚಿನ್ ಎಸ್ ಕೋಟಿಯಾನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಪ್ರಾಣಿಗಳೆಂದರೆ ಭಟ್ಟರಿಗೆ ತಮ್ಮ ಕುಟುಂಬ ಸದಸ್ಯರಿದ್ದಂತೆ. ಭಟ್ಟರು ಕೊಟ್ಟಿಗೆಗೆ ಬಂದಾಗ ಕೋಣಗಳು ಎದ್ದು ನಿಲ್ಲುತ್ತವೆ. ಕಿವಿಗಳನ್ನು ಆಡಿಸುತ್ತವೆ. ಹೀಗೆ ಅವುಗಳ ಪ್ರೀತಿ, ವಾತ್ಸಲ್ಯವನ್ನು ತೋರಿಸುತ್ತವೆ ಎನ್ನುತ್ತಾರೆ.

ಪ್ರಾಣಿಗಳಿಗೆ ಪ್ರತಿದಿನ ತೈಲ ಅಭ್ಯಂಜನ ಮಾಡಿಸಲಾಗುತ್ತದೆ. ಭಟ್ಟರಲ್ಲಿದ್ದ ರಾಕೆಟ್ ಮೋದ ಎಂಬ 20 ವರ್ಷದ ಕೋಣ ಇತ್ತೀಚೆಗೆ ತೀರಿಕೊಂಡಿತ್ತು. ಇದು 2014ರಲ್ಲಿ 114 ಮೀಟರ್ ದೂರವನ್ನು 13.40 ಸೆಕೆಂಡ್ ಗಳಲ್ಲಿ ಓಡಿ ದಾಖಲೆ ನಿರ್ಮಿಸಿತ್ತು ಎನ್ನುತ್ತಾರೆ ಸಚಿನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT