ಸಾಂದರ್ಭಿಕ ಚಿತ್ರ 
ರಾಜ್ಯ

ಮಾಲೀಕರಿಗೆ ಪ್ರತಿಷ್ಠೆಯ ಸ್ಪರ್ಧೆಯಾಗಿರುವ ಕಂಬಳ ಕ್ರೀಡೆ

ಕರಾವಳಿ, ಉಡುಪಿ ಜಿಲ್ಲೆಗಳಲ್ಲಿ ಪ್ರತಿಷ್ಠಿತ ಕಂಬಳ ಕ್ರೀಡೆ ಆರಂಭಗೊಂಡಿದೆ. ಕೋಣಗಳ ಮಾಲೀಕರು ಪಂದ್ಯಕ್ಕೆ...

ಉಡುಪಿ: ಕರಾವಳಿ, ಉಡುಪಿ ಜಿಲ್ಲೆಗಳಲ್ಲಿ ಪ್ರತಿಷ್ಠಿತ ಕಂಬಳ ಕ್ರೀಡೆ ಆರಂಭಗೊಂಡಿದೆ. ಕೋಣಗಳ ಮಾಲೀಕರು ಪಂದ್ಯಕ್ಕೆ ಕೊನೆಯ ಹಂತದ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪಾಲಿನ ಸೊತ್ತು ಎಂದು ನಂಬಿಕೊಂಡು ಜತನದಿಂದ ಕೋಣಗಳನ್ನು ಕಾಪಾಡಿಕೊಂಡು ಬರುವ ಮಾಲೀಕರು ಕಂಬಳದಲ್ಲಿ ಗೆದ್ದು ಬರಬೇಕೆಂಬ ಆಸೆ ಹೊತ್ತಿರುತ್ತಾರೆ.

ಮಣಿಪಾಲದ ಸಮೀಪ ಹೀರೆಬೆಟ್ಟು ಗ್ರಾಮದ ಕಂಚಿನಬೈಲುನಲ್ಲಿ ಕೃಷಿಕ ಹಾಗೂ ಹೊಟೇಲ್ ಉದ್ಯಮ ನಡೆಸುತ್ತಿರುವ ಶ್ರೀಕಾಂತ್ ಭಟ್ ಅವರು ಕಂಬಳ ಕ್ರೀಡೆಯ ಅಪಾರ ಪ್ರಿಯರು. ತಮ್ಮ 15 ಎಕರೆ ಜಮೀನಿನಲ್ಲಿ ಕೋಣಗಳಿಗೆ ಸೂಕ್ತ ಗಾಳಿ, ಬೆಳಕು ವ್ಯವಸ್ಥೆಯಿರುವ ಕೊಟ್ಟಿಗೆಯನ್ನು ನಿರ್ಮಿಸಿ 7 ಕಂಬಳ ಕೋಣಗಳನ್ನು ಸಾಕುತ್ತಿದ್ದಾರೆ. ಪ್ರತಿದಿನ ಈ ಕೋಣಗಳಿಗೆ 5 ಕೆಜಿ ಹುರುಳಿ, ಹುಲ್ಲು, ಅರ್ಧ ಕೆಜಿ ಬೆಲ್ಲ, 150 ಎಂಎಲ್ ಸಾಸಿವೆ ಮತ್ತು ವಾರಕ್ಕೊಂದು ದಿನ ತೆಂಗಿನ ಎಣ್ಣೆ ಕುಡಿಸುತ್ತಾರೆ.

ಭಟ್ಟರ ಕೋಣಗಳನ್ನು ನೋಡಿಕೊಳ್ಳುತ್ತಿರುವ ಸಚಿನ್ ಎಸ್ ಕೋಟಿಯಾನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಪ್ರಾಣಿಗಳೆಂದರೆ ಭಟ್ಟರಿಗೆ ತಮ್ಮ ಕುಟುಂಬ ಸದಸ್ಯರಿದ್ದಂತೆ. ಭಟ್ಟರು ಕೊಟ್ಟಿಗೆಗೆ ಬಂದಾಗ ಕೋಣಗಳು ಎದ್ದು ನಿಲ್ಲುತ್ತವೆ. ಕಿವಿಗಳನ್ನು ಆಡಿಸುತ್ತವೆ. ಹೀಗೆ ಅವುಗಳ ಪ್ರೀತಿ, ವಾತ್ಸಲ್ಯವನ್ನು ತೋರಿಸುತ್ತವೆ ಎನ್ನುತ್ತಾರೆ.

ಪ್ರಾಣಿಗಳಿಗೆ ಪ್ರತಿದಿನ ತೈಲ ಅಭ್ಯಂಜನ ಮಾಡಿಸಲಾಗುತ್ತದೆ. ಭಟ್ಟರಲ್ಲಿದ್ದ ರಾಕೆಟ್ ಮೋದ ಎಂಬ 20 ವರ್ಷದ ಕೋಣ ಇತ್ತೀಚೆಗೆ ತೀರಿಕೊಂಡಿತ್ತು. ಇದು 2014ರಲ್ಲಿ 114 ಮೀಟರ್ ದೂರವನ್ನು 13.40 ಸೆಕೆಂಡ್ ಗಳಲ್ಲಿ ಓಡಿ ದಾಖಲೆ ನಿರ್ಮಿಸಿತ್ತು ಎನ್ನುತ್ತಾರೆ ಸಚಿನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT