ರಾಜವಂಶಸ್ಥೆ ಪ್ರಮೋದಾ ದೇವಿ 
ರಾಜ್ಯ

ರಾಜಮನೆತನ ಉತ್ತಮ ಹಿತೈಷಿಯನ್ನು ಕಳೆದುಕೊಂಡಿದೆ: ಅಂಬರೀಷ್ ನಿಧನಕ್ಕೆ ಪ್ರಮೋದಾ ದೇವಿ ಸಂತಾಪ

ಮೈಸೂರು ರಾಜ ಮನೆತನ ಪ್ರಾಮಾಣಿಕ ಗೆಳೆಯ ಹಾಗೂ ಉತ್ತಮ ಹಿತೈಷಿಯನ್ನು ಕಳೆದುಕೊಂಡಿದೆ ಎಂದು ಅಂಬರೀಷ್ ನಿಧನಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿಯವರು ಸಂತಾಪ ಸೂಚಿಸಿದ್ದಾರೆ...

ಮೈಸೂರು: ಮೈಸೂರು ರಾಜ ಮನೆತನ ಪ್ರಾಮಾಣಿಕ ಗೆಳೆಯ ಹಾಗೂ ಉತ್ತಮ ಹಿತೈಷಿಯನ್ನು ಕಳೆದುಕೊಂಡಿದೆ ಎಂದು ಅಂಬರೀಷ್ ನಿಧನಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿಯವರು ಸಂತಾಪ ಸೂಚಿಸಿದ್ದಾರೆ. 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂಬರೀಷ್ ಅವರು ಪ್ರಾಮಾಣಿಕ ಗೆಳೆಯರಾಗಿದ್ದರು. ಸಾಕಷ್ಟು ನೈತಿಕ ಬೆಂಬಲ ನೀಡುತ್ತಿದ್ದರು. ಯಾವುದೇ ಸಂದರ್ಭದಲ್ಲಿಯೇ ಸಮಸ್ಯೆಗಳು ಎದುರಾದರೂ ಸ್ವಇಚ್ಛೆಯಿಂದ ಬಂದು ಕುಟುಂಬಕ್ಕೆ ಸಹಾಯ ಮಾಡುತ್ತಿದ್ದರು. ರಾಜಮನೆತನದ ಸದಸ್ಯರೊಂದಿಗೆ ಆತ್ಮೀಯತೆಯಿಂದ ಇದ್ದರು ಎಂದು ಹೇಳಿದ್ದಾರೆ. 
ವಿಜಯದಶಮಿ ದಿನ ಮೈಸೂರು ಅರಮನೆಗೆ ಬಂದ ಸಂದರ್ಭದಲ್ಲಿ ರಾಜಮನೆತನದ ಕುಟುಂಬ ಸದಸ್ಯರು ಪಟ್ಟದ ಕತ್ತಿ ಹಿಡಿದಿರುವುದನ್ನು ನೋಡಬೇಕೆಂದು ಬಯಸಿದ್ದರು. 
ಸಂಸದರಾಗಿದ್ದಾಗ ರಾಜಧಾನಿ ದೆಹಲಿಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಭೇಟಿ ಮಾಡಿದ್ದರು. ನನ್ನ ಪತಿ ಯಾವಾಗಲೂ ತಾಳ್ಮೆ ಹಾಗೂ ಸಮಾಧಾನಕರ ವ್ಯಕ್ತಿಯಾಗಿದ್ದರಿಂದಾಗಿ ಯಾವುದೇ ಕೆಲಸವಾಗಬೇಕಿದ್ದರೂ, ಕಠಿಣವಾಗಿರಬೇಕೆಂದು ಸಲಹೆ ನೀಡಿದ್ದರು. ಮಲೇಷಿಯಾ ಪ್ರವಾಸಕ್ಕೆ ತೆರಳಿದ್ದಾಗ ಕೂಡ ಅವರನ್ನು ಭೇಟಿ ಮಾಡಿದ್ದೆವು. 
ಅಚಾನಕ್ ಆಗಿ ರೆಸ್ಟೋರೆಂಟ್ ವೊಂದರಲ್ಲಿ ಅವರನ್ನು ಭೇಟಿ ಮಾಡಿದ್ದೆವು. ಆಗ ರಾಜಮನೆತನದಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಹೇಳಿಕೊಂಡಿದ್ದೆವು. ಈ ವೇಳೆ ಕುಟುಂಬಕ್ಕೆ ಸಹಾಯ ಮಾಡಿದ್ದರು. ಇಂತಹ ಅತ್ಯುತ್ತಮ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT