ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ 
ರಾಜ್ಯ

ಸಕಲೇಶಪುರ: ಸತತ 36 ಗಂಟೆಗಳ ಕಾರ್ಯಾಚರಣೆ ನಂತರ ಆನೆ ರಕ್ಷಿಸಿದ ಸಿಬ್ಬಂದಿ

ತಾಲ್ಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಸತತ 36 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಂತರ 27 ....

ಸಕಲೇಶಪುರ: ತಾಲ್ಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಸತತ 36 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಂತರ 27 ವರ್ಷದ ಹೆಣ್ಣು ಆನೆಯನ್ನು ರಕ್ಷಿಸಲಾಗಿದೆ. ಆನೆ ಕಂದಕಕ್ಕೆ ಬಿದ್ದು ಮೇಲೆ ಏಳಲಾಗದೆ ಪರಿತಾಪಪಡುತ್ತಿತ್ತು.

ನಡೆದದ್ದೇನು?: ಎರಡು ದಿನಗಳ ಹಿಂದೆ ಆನೆ ಆಹಾರ ಹುಡುಕಿಕೊಂಡು ತನ್ನ ಆರು ತಿಂಗಳ ಮರಿಯೊಂದಿಗೆ ಕಡಗರವಳ್ಳಿ ಗ್ರಾಮಕ್ಕೆ ಹೋಗಿತ್ತು. ಈ ಸಂದರ್ಭದಲ್ಲಿ ಕಾಲು ಜಾರಿ ಹೂಳು ತುಂಬಿದ ಕಂದಕಕ್ಕೆ ಬಿದ್ದಿತು. ಆನೆಯ ಎದುರಿನ ಕಾಲಿಗೆ ಅದಾಗಲೇ ಗಾಯವಾಗಿತ್ತು. ಇದರಿಂದ ಕಂದಕದಿಂದ ಏಳುವುದು ಕೂಡ ಕಷ್ಟವಾಗಿತ್ತು.

ಕಳೆದ ಸೋಮವಾರ ಬೆಳಗ್ಗೆ ಗ್ರಾಮಸ್ಥರು ಆನೆ ಕಂದಕಕ್ಕೆ ಬಿದ್ದ ವಿಚಾರವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಭೂಮಿಯಲ್ಲಿ ತಿರುಗುವ ಯಂತ್ರಕ್ಕೆ ಹಗ್ಗ ಕಟ್ಟಿ ಆನೆಯನ್ನು ಮೇಲೆತ್ತಲು ಪ್ರಯತ್ನಿಸಿದರು. ಆದರೆ ಪ್ರಯೋಜನವಾಗಲಿಲ್ಲ. ವಾತಾವರಣ ಕೈಕೊಟ್ಟಿತ್ತು. ಕೊನೆಗೆ ದುಬಾರೆ ಆನೆ ಶಿಬಿರದಿಂದ ಎರಡು ಆನೆಗಳನ್ನು ಕರೆತಂದು ಆನೆಯನ್ನು ಮೇಲೆತ್ತಲು ನಡೆಸಿದ ಕಾರ್ಯಾಚರಣೆ ನೆರವಿಗೆ ಬಂದಿತು.

ಆನೆ ಮತ್ತು ಮರಿಯನ್ನು ನಂತರ ಶಿವಮೊಗ್ಗದ ಸಕ್ರೆಬೈಲು ಶಿಬಿರಕ್ಕೆ ವರ್ಗಾಯಿಸಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT