ಸಂಗ್ರಹ ಚಿತ್ರ 
ರಾಜ್ಯ

ವಿಲಕ್ಷಣ ಘಟನೆ: ಮಗಳ ಗೆಳೆಯನಿಂದಲೇ ಪತ್ನಿಯ ಅಪಹರಣ! ವ್ಯಕ್ತಿಯಿಂದ ಪೋಲೀಸರಿಗೆ ದೂರು

ಒಂದು ವಿಲಕ್ಷಣ ಘಟನೆಯಲ್ಲಿ ಗಂಡನೊಬ್ಬ ತನ್ನ ಹೆಂಡತಿ ಹಾಗೂ ಮಗಳನ್ನು ಮಗಳ ಸ್ನೇಹಿತನೇ ಅಪಹರಿಸಿದ್ದಾನೆ ಎಂದು ವ್ಯಕ್ತಿಯೊಬ್ಬ ಪೋಲೀಸ್ ಆಯುಕ್ತರಿಗೆ ದೂರಿತ್ತಿದ್ದಾನೆ

ಬೆಂಗಳೂರು: ಒಂದು ವಿಲಕ್ಷಣ ಘಟನೆಯಲ್ಲಿ ಗಂಡನೊಬ್ಬ ತನ್ನ ಹೆಂಡತಿ ಹಾಗೂ ಮಗಳನ್ನು ಮಗಳ ಸ್ನೇಹಿತನೇ ಅಪಹರಿಸಿದ್ದಾನೆ ಎಂದು ವ್ಯಕ್ತಿಯೊಬ್ಬ  ಪೋಲೀಸ್ ಆಯುಕ್ತರಿಗೆ ದೂರಿತ್ತಿದ್ದಾನೆ. ಇದಕ್ಕೆ ಮುನ್ನ ಅಶೋಕ ನಗರ ಪೋಲೀಸರು ದೂರು ಸ್ವೀಕರಿಸಲು ನಿರಾಕರಿಸಿದ ಕಾರಣ ದೂರುದಾರನಾದ ಗೌರಕ್ ಕಶ್ಯಪ್ ಕಮಿಷನರ್ ಕಛೇರಿಗೆ ಆಗಮಿಸಿ ದೂರಿತ್ತಿದ್ದಾರೆ. ಆಯುಕ್ತರ ಹಸ್ತಕ್ಷೇಪದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೋಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಶಾಂತಿನಗರ ನಿವಾಸಿ ಕಶ್ಯಪ್, ತಮ್ಮ 16 ವರ್ಷ ವಯಸ್ಸಿನ ಮಗಳು ಮತ್ತು ಅವರ ಪತ್ನಿ ಕುಶಾಲ್ ದೇವಿ (30) ತಮ್ಮ ತವರಾದ ಉತರ ಪ್ರದೇಶಕ್ಕೆ ತೆರಳುವಾಗ ರೈಲಿನಿಂದ ಕಾಣೆಯಾಗಿದ್ದಾರೆ ಎಂದುತಿಳಿಸಿದ್ದಾರೆ. ಅಪ್ರಾಪ್ತ ಮಗಳನ್ನು ಆಕೆಯ ಗೆಳೆಯ ರಾಹುಲ್ ಅಪಹರಣ ಮಾಡಿದ್ದಾನೆ ಎಂದು ಕಶ್ಯಪ್ ಆರೋಪಿಸಿದ್ದಾರೆ.
ಕಶ್ಯಪ್ ಹೇಳುವಂತೆ ಸೋಮವಾರ ಆತ್ನ ಪತ್ನಿಯಿಂದ ಕಡೆಯದಾಗಿ ಕರೆ ಬಂದ ವೇಳೆ ಆಕೆ ಹಾಗೂ ಮಗಳು ತೆಲಂಗಾಣದ ಮೂಲಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.ಅವರಿಂದ ಹಣವನ್ನೆಲ್ಲಾ ದೋಚಲಾಗಿದೆ. ಬಳಿಕ ಅದೇ ದರೋಡೆಕೋರನು ಅವರುಗಳನ್ನು ಅಪಹರಣ ಮಾಡಿರುವ ಸಾಧ್ಯತೆಯೂ ಇದೆ ಎಂದು ಕಶ್ಯಪ್ ಹೇಳುತ್ತಾರೆ.
ಇಷ್ಟಾದ ಬಳಿಕ ಪತ್ನಿಯ ಮೊಬೈಲ್ ನಾಟ್ ರೀಚಬಲ್ ಆಗಿದೆ. ಕಶ್ಯಪ್ ತನ್ನ ಕೆಲ ಸಂಬಂಧಿಕರ ಮೂಲಕ ತೆಲಂಗಾಣದಲ್ಲಿ ಪತ್ನಿ ಹಾಗೂ ಪುತ್ರಿಯರಿಗೆ ಹುಡುಕಾಟ ನಡೆಸಿದರೂ ಯಾವ ಫಲ ದೊರೆಯಲಿಲ್ಲ ಅಂತಿಮವಾಗಿ ಅವರು ಪೋಲೀಸರ ಮೊರೆ ಹೋಗಿದ್ದಾರೆ.
ಇದಾಗಿ ತನ್ನ ಅಂಗಡಿ ಸಮೀಪದಲಿದ್ದ ರಾಹುಲ್ ತನ್ನ ಮಗಳ ಸ್ನೇಹಿತನಾಗಿದ್ದ. ಅವನೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಕಶ್ಯಪ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಏಕೆಂದರೆ ಘಟನೆ ನಂತರ ಕಶ್ಯಪ್ ರಾಹುಲ್ ಗಾಗಿ ಹುಡುಕಿದಾಗ ಆತನೂ ನಗರದಿಂದ ದೂರ ಹೋಗಿರುವುದು ತಿಳಿದಿದೆ. ಇದಾಗಿ ಅವರು ಅಶೋಕ ನಗರ ಪೋಲೀಸರ ಬಳಿ ಧಾವಿಸ್ದಾಗ ಪೋಲೀಸರು ತಾವು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT