ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಲಿಫ್ಟ್ ಕೇಳಿ ಕಾರನ್ನೇ ಹೊತ್ತೊಯ್ದ ಕಿರಾತಕ ಕಳ್ಳ

ಡ್ರಾಪ್ ಕೇಳಿದ ದುಷ್ಕರ್ಮಿಯೊಬ್ಬ ನಂತರ ನೆಪ ಮಾಡಿ ಕಾರನ್ನೇ ದೋಚಿ ಪರಾರಿಯಾಗಿರುವ ಘಟನೆ ನಾಗವಾರ ಸಿಗ್ನಲ್ ಬಳಿ ನಡೆದಿದೆ...

ಬೆಂಗಳೂರು: ಡ್ರಾಪ್ ಕೇಳಿದ ದುಷ್ಕರ್ಮಿಯೊಬ್ಬ ನಂತರ ನೆಪ ಮಾಡಿ ಕಾರನ್ನೇ ದೋಚಿ ಪರಾರಿಯಾಗಿರುವ ಘಟನೆ ನಾಗವಾರ ಸಿಗ್ನಲ್ ಬಳಿ ನಡೆದಿದೆ. 
ಸೆಪ್ಟೆಂಬರ್ 12 ರಂದು ಘಟನೆ ನಡೆದಿದೆ. ಈಜಿಪುರ ನಿವಾಸಿಯಾಗಿರುವ ಆರ್. ವೇಲು ಕಾರು ಚಾಲಕರಾಗಿದ್ದಾರೆ. 
ಸೆ.12 ರಾತ್ರಿ ಗೆಳೆಯರೊಂದಿಗೆ ನಾಗವಾರ ಸರ್ವಿಸ್ ರಸ್ತೆಯಲ್ಲಿರುವ ಬಾರ್'ಗೆ ಹೋಗಿದ್ದಾರೆ. ಬಳಿಕ 10.30ರ ಸುಮಾರಿಗೆ ಗೆಳೆಯನನ್ನು ಹೆಚ್'ಬಿಆರ್ ಲೇಔಟ್'ನ ಟೆಲಿಕಾಮ್ ಲೇಔಟ್ ಬಳಿ ಡ್ರಾಪ್ ಮಾಡಿದ್ದಾರೆ. 
ಬಳಿಕ ಹೆಚ್'ಬಿಆರ್ ಲೇಔಟ್ 5 ನೇ ಬ್ಲಾಕ್ ಬಳಿ ಸಿಗರೇಟ್ ಕೊಳ್ಳುವ ಸಲುವಾಗಿ ಕಾರು ನಿಲ್ಲಿಸಿದ್ದಾರೆ. ಈ ವೇಳೆ 20-25 ವರ್ಷದ ಯುವಕ ಬಂದು ನಾಗವಾರ ಸಿಗ್ನಲ್ ಬಳಿ ಡ್ರಾಪ್ ಮಾಡುವಂತೆ ಬೇಡಿಕೊಂಡಿದ್ದಾನೆ. 
ಯುವಕನನ್ನು ನೋಡಿ ಅಯ್ಯೋ ಎನಿಸಿತು. ಹೀಗಾಗಿ ಡ್ರಾಪ್ ಮಾಡಲು ಒಪ್ಪಿಕೊಂಡೆ. ನಾಗಾರ ಸಿಗ್ನಲ್ ಬಳಿ ಬರುತ್ತಿದ್ದಂತೆಯೇ ವೀರಪ್ಪನಪಾಳ್ಯ ಜಂಕ್ಷನ್ ಬಳಿ ಇಳಿಯುವುದಾಗಿ ತಿಳಿಸಿದ. ವೀರಪ್ಪನಪಾಳ್ಯ ಬಳಿ ಹೋಗುತ್ತಿದ್ದಂತೆಯೇ ಯಾರೋ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆಂದು ಹೇಳಿದ. ಈ ವೇಳೆ ಆ ರೀತಿ ಏನೂ ಆಗಿಲ್ಲ ಎಂದು ಹೇಳಿದ್ದೆ. ಆದರೂ ಆತ ಅದೇ ರೀತಿ ಹೇಳಿದ. ಬಳಿಕ ಕಾರು ನಿಲ್ಲಿಸಿ ಏನಾಯಿತು ಎಂದು ನೋಡಲು ಇಳಿದೆ. ಈ ವೇಳೆ ದುಷ್ಕರ್ಮಿ ಕಾರನ್ನು ಚಲಾಯಿಸಿಕೊಂಡು ಹೊರಟುಹೋದ ಎಂದು ದೂರಿನಲ್ಲಿ ವೇಲು ಅವರು ಹೇಳಿದ್ದಾರೆ. 
ಪ್ರಕರಣ ಸಂಬಂಧ ಹೆಣ್ಣೂರು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT