ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೈಭವ ಸ್ತಬ್ದ ಚಿತ್ರ
ಮೈಸೂರು: ವಿಶ್ವ ವಿಖ್ಯಾತ ಮೈಸೂರು ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಿದ ಆಕರ್ಷಕ ಸ್ತಬ್ದ ಚಿತ್ರಗಳು ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಅನಾವರಣಗೊಳಿಸಿದವು.
ಚಾಮರಾಜನಗರ ಜಿಲ್ಲೆಯ ಅರಣ್ಯ ಸಂಪತ್ತಿನೊಳಗಿನ ಆಧ್ಯಾತ್ಮಿಕ ಕ್ಷೇತ್ರಗಳು ಸ್ತಬ್ಧಚಿತ್ರ, ಚಿಕ್ಕಮಗಳೂರು- ಭೂತಾಯಿ ಕಾಫಿ ಕನ್ಯೆ , ಚಿಕ್ಕಬಳ್ಳಾಪುರ- ವಿದುರಾಶ್ವತ್ಥ , ಗದಗ್ - ಮರಗಳ ಮರು ನೆಡುವಿಕೆ, ಕಲಬುರಗಿ- ವಿಮಾನ ನಿಲ್ದಾಣ, ಧಾರಾವಾಡ- ದ. ರಾ. ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ, ಕೋಲಾರ- ಜಿಲ್ಲಾ ಪಂಚಾಯತ್ ನಡೆ ಅಭಿವೃದ್ದಿ ಕಡೆಗೆ , ವಿಜಯಪುರ- ಗೋಲ್ ಗುಂಬಜ್. ಚಿತ್ರದುರ್ಗ- ಶ್ರೀಗುರು ತಿಪ್ಪೆರುದ್ರ ಸ್ವಾಮಿಗಳು ನಾಯಕನಹಟ್ಟಿ ಪುಣ್ಯಕ್ಷೇತ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ- ಕರ್ನಾಟಕದ ನವರತ್ನಗಳು, ಮಂಡ್ಯ- ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು, ರಾಯಚೂರು - ಯರಮರಸ್ ಶಾಖೋತ್ಪನ್ನ ಕೇಂದ್ರ ,ಬೆಳಗಾವಿ- ಕಿತ್ತೂರು ಚೆನ್ನಮ್ಮ ವೈಭವ ಮತ್ತಿತರ 42 ಸ್ತಬ್ದಚಿತ್ರಗಳು ಜಂಬೂ ಸವಾರಿ ಮೆರವಣೆಗೆ ಮೆರುಗನ್ನು ಹೆಚ್ಚಿಸಿದವು.
ಹಗಲುವೇಷ, ದಾಲಪಟ, ಗೊಂಬೆ ಕುಣಿತ , ಚಂಡೆಮದ್ದಳೆ, ಗೊರವರ ಕುಣಿತ ಮತ್ತಿತರ ಜಾನಪದ ಕಲಾತಂಡಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು ಪ್ರೇಕ್ಷಕರ ಮನ ರಂಜಿಸಿದವು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos