ಗುಡ್ಡ ಕುಸಿತದಿಂದ ಹಳಿಗಳು ನಾಶ: ಬೆಂಗಳೂರು-ಮಂಗಳೂರು ರೈಲು ಸಂಚಾರ ಅನಿರ್ದಿಷ್ಟಾವಧಿಗೆ ಸ್ಥಗಿತ 
ರಾಜ್ಯ

ಗುಡ್ಡ ಕುಸಿತದಿಂದ ಹಳಿಗಳು ನಾಶ: ಬೆಂಗಳೂರು-ಮಂಗಳೂರು ರೈಲು ಸಂಚಾರ ಅನಿರ್ದಿಷ್ಟಾವಧಿಗೆ ಸ್ಥಗಿತ

ಭಾರೀ ಮಳೆ ಹಿನ್ನಲೆಯಲ್ಲಿ ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ಹಳಿಗಳು ನಾಶಗೊಂಡಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ...

ಬೆಂಗಳೂರು: ಭಾರೀ ಮಳೆ ಹಿನ್ನಲೆಯಲ್ಲಿ ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ಹಳಿಗಳು ನಾಶಗೊಂಡಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. 
ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಘಟ್ಟ ಪ್ರದೇಶದ 56 ಕಿಮೀ ರೈಲು ಮಾರ್ಗದಲ್ಲಿ 68 ಕಡೆ ರೈಲು ಹಳಿಗಳ ಮೇಲೆ ಭೂಕುಸಿತ ಉಂಟಾಗಿದೆ ಎಂದು ತಿಳಿದುಬಂದಿದೆ. 
ಕೆಎಸ್ಆರ್ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್'ಪ್ರೆಸ್ ಸಂಚಾರ ಸೆ.2-4 ಮತ್ತು 9-11ರವರೆಗೂ ರದ್ದುಗೊಂಡಿದೆ. 
ಕೆಎಸ್ಆರ್ ಬೆಂಗಳೂರಿಗೆ ತೆರಳುವ ಇದೇ ರೈಲು ಸೆ.1 ಮತ್ತು 5ರಿಂದ 8, 12 ಮತ್ತು 14ರವರೆಗೂ ರದ್ದುಗೊಂಡಿದೆ. ಕಣ್ಣೂರು/ಕಾರವಾರಕ್ಕೆ ತೆರಳುವ ರೈಲುಗಳು ಸೆ.2-5 ಮತ್ತು 9-15ರವರೆಗೂ ರದ್ದುಗೊಂಡಿದೆ. ಕಣ್ಣೂರು/ಕಾರವಾರ ಕ್ಕೆ ಸಂಚಾರ ನಡೆಸುವ ರೈಲು ಸೆ.6-8 ಮತ್ತು 13-15ರವರೆಗೂ ರದ್ದುಗೊಂಡಿದೆ. ಹಾಸನದಿಂದ ಮಂಗಳೂರಿಗೆ ತೆರಳುವ ರೈಲುಗಳು ಸೆ.2, 4, 6, 9, 11 ಮತ್ತು 13ರವರೆಗೂ ರದ್ದುಗೊಂಡಿದೆ. 
ಸೆ.3,5,7,10,12 ಮತ್ತು 14 ರಂದು ಯಶವಂತಪುರದಿಂದ ಮಂಗಳೂರಿಗೆ ತೆರಳುವ ರೈಲುಗಳು ರದ್ದುಗೊಂಡಿದೆ. ಸೆ.4,6,8,11,13 ಮತ್ತು 15 ರಂದು ಯಶವಂತಪುರದಿಂದ ಕಾರವಾರ-ಹಾಸನಕ್ಕೆ ತೆರಳುವ ರೈಲುಗಳು ರದ್ದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಜನ ಸಾಧಾರಣ್ ರೈಲುಗಳು ಯಶವಂತಪುರದಿಂದ -ಹಾಸನ ಜನ ಸಾಧಾರಣ್ ರೈಲು ರೈಲು ಸಂಖ್ಯೆ  06515 ಸೆ.8 ಮತ್ತು 15 ರಂದು ಕಾರ್ಯನಿರ್ವಹಿಸಲಿವೆ. 06576 ಹಾಸನ - ಯಶವಂತುಪ ಜನ ಸಾಧಾರಣ್ ವಿಶೇಷ ರೈಲು ಸೆ.2 ಮತ್ತು 9 ರಂದು ಹಾಸನದಿಂದ ಯಶವಂತಪುರಕ್ಕೆ ಮರಳಿ ಬರಲಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT