ರಾಜ್ಯ

ಗಣೇಶ ಮೂರ್ತಿ ಮೇಲೆ ಕಲ್ಲೆಸೆತ: ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣ

Manjula VN
ಬೆಳಗಾವಿ: ಗಣೇಶ ಮೂರ್ತಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆ ಶನಿವಾರ ಬೆಳಗಿನ ಜಾವ ಬೆಳಗಾವಿ ನಗರದ ತೆಂಗಿನಕೇರಿ ಗಲ್ಲಿಯ ಮೋತಿಲಾಲ ವೃತ್ತದಲ್ಲಿ ನಡೆದಿದೆ. 
ಶನಿವಾರ ಮುಂಜಾನೆ 3.30ರ ಸಮಯದಲ್ಲಿ ಘಟನೆ ನಡೆದಿದ್ದು, ಬೆಳಗಾವಿಯಲ್ಲಿ ಇದೀಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. 
ಕಲ್ಲು ತೂರಾಟದಿಂದ ಮೋತಿಲಾಲ ವೃತ್ತದಲ್ಲಿನ ಗಣೇಶ ಮೂರ್ತಿಯ ಕಿವಿ. ಕಾಲು ಭಾಗಗಳಿಗೆ ಸ್ವಲ್ಪ ಹಾನಿಯಾಗಿದೆ. ಅಲ್ಲದೆ, ರಸ್ತೆ ಪಕ್ಕದಲ್ಲಿನ ಎರಡು ಆಟೋ ರಿಕ್ಷಾ, ಒಂದು ಕಾರು ಕೂಡ ಜಖಂಗೊಂಡಿವೆ. 
ಶುಕ್ರವಾರ ಮೊಹರಂ ಹಬ್ಬದಲ್ಲಿ ಡೋಲಿಯ ಮೆರವಣಿಯು ತೆಂಗಿನಕೇರಿ ಗಲ್ಲಿಯ ಮೋತಿಲಾಲ ವೃತ್ತದ ಮಾರ್ಗದಲ್ಲಿ ಸಾಗುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಕೂಡಲೇ ಪೊಲೀಸರು, ಸ್ಥಳೀಯರು ಎರಡೂ ಗುಂಪಿನಲ್ಲಿದ್ದವರನ್ನು ಸಮಾಧಾನಪಡಿಸಿ ಮೆರವಣಿಗೆಗೆ ಅವಕಾಶ ಕಲ್ಪಿಸಿದ್ದರು. ಶನಿವಾರ ಬೆಳಗಿನ ಜಾವ 3.30ರ ಸುಮಾರಿಗೆ ದ್ವಿಚಕ್ರ ವಾಹನದ ಮೇಲೆ ಆಗಮಿಸಿದ ದುಷ್ಕರ್ಮಿಗಳು ಗಣೇಶ ಮೂರ್ತಿಗೆ ಕಲ್ಲು ತೂರಿಸಿದ್ದಾರೆಂದು ತಿಳಿದುಬಂದಿದೆ. 
SCROLL FOR NEXT