ಮಳೆ ಎಫೆಕ್ಟ್: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಎದ್ದುಬಂದ ನೊರೆ 
ರಾಜ್ಯ

ಮಳೆ ಎಫೆಕ್ಟ್: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಹಾವಳಿ

ಕಳೆದ 2 ದಿನಗಳಿಂದ ಸತತವಾಗಿ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಭಾರೀ ಪ್ರಮಾಣದ ನೊರೆ ಉತ್ಪತ್ತಿಯಾಗಿದ್ದು, ಗುಪ್ಪೆ ಗುಪ್ಪೆಯಾಗಿ ಗಾಳಿಯಲ್ಲಿ ತೇಲುತ್ತಾ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು...

ಬೆಂಗಳೂರು: ಕಳೆದ 2 ದಿನಗಳಿಂದ ಸತತವಾಗಿ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಭಾರೀ ಪ್ರಮಾಣದ ನೊರೆ ಉತ್ಪತ್ತಿಯಾಗಿದ್ದು, ಗುಪ್ಪೆ ಗುಪ್ಪೆಯಾಗಿ ಗಾಳಿಯಲ್ಲಿ ತೇಲುತ್ತಾ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ವಾಹನ ಸವಾರರ ಮೇಲೆ ಬೀಳುತ್ತಿರುವುದರಿಂತ ಜನರು ಕಿರಿಕಿರಿ ಅನುಭವಿಸುವಂತಾಗಿದೆ. 
ಯಮಲೂರು ಕೋಡಿ ರಸ್ತೆಯಲ್ಲಿ ಕನಿಷ್ಟ 10 ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೊರೆ ಬೆಟ್ಟದಂತೆ ತೋರುತ್ತಿದೆ. ಗಾಳಿಯ ರಭಸಕ್ಕೆ ನೊರೆ ಎಲ್ಲೆಂದರಲ್ಲಿ ಹಾರಾಡಿ ಬೀಳುತ್ತಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಇನ್ನಿಲ್ಲದ ಸಂಕಟ ಎದುರಾಗಿದೆ. 
ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆರೆಯ ಒಳ ಹರಿವು ಹೆಚ್ಚಾಗಿರುವುದೇ ನೊರೆ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ. 
ಬೆಳ್ಳಂದೂರು ಕೋಡಿ, ಯಮಲೂರು ಕೋಡಿ ಮತ್ತು ವರ್ತೂರು ಕೋಡಿಗಳಲ್ಲಿ ಬೆಟ್ಟದಂತೆ ನೊರೆಯ ರಾಶಿ ಉತ್ಪತ್ತಿಯಾಗಿದೆ. ನೊರೆಯ ಪ್ರಮಾಣ ಹೆಚ್ಚಾಗಿರುವುದರಿಂದ ರಸ್ತೆಗೆ ಅಡ್ಡಲಾಗಿ ಕಬ್ಬಿಣದ ಮೆಷ್ ಅಳವಡಿಸಲಾಗಿದೆ. 
ಗಾಳಿ ಜೋರಾಗಿ ಬೀಸಿದಾಗ ನೊರೆ ರಸ್ತೆ ಹಾಗೂ ವಾಹನ ಸವಾರರ ಮೇಲೆ ಬೀಳುತ್ತಿದೆ. ನೊರೆ ಉಲ್ಬಣದಿಂದ ಸುತ್ತಮುತ್ತಲ ಗ್ರಾಮಸ್ಥರು ತುರಿಕೆ, ಚರ್ಮರೋಗಗಳಿಗೆ ತುತ್ತಾಗುವ ಭೀತಿ ಎದುರಿಸುತ್ತಿದ್ದಾರೆ. ನೊರೆಯಲ್ಲಿ ಬೆರೆತಿರುವ ರಾಸಾಯನಿಕ ಅಂಶಗಳು ಚರ್ಮಕ್ಕೆ ತಗುಲಿದರೆ ಉರಿ ಶುರುವಾಗುತ್ತದೆ. ಕಣ್ಣಿಗೆ ಬಿದ್ದರೆ, ದೃಷ್ಟಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT