ಬಿಎ ಸನದಿ 
ರಾಜ್ಯ

ಕನ್ನಡದ ಹಿರಿಯ ಸಾಹಿತಿ ಬಿಎ ಸನದಿ ವಿಧಿವಶ

ಕನ್ನಡದ ಹಿರಿಯ ಕವಿ, ಲೇಖಕ ಬಿಎ ಸನದಿ (86) ಭಾನುವಾರ ವಿಧಿವಶರಾದರು. ಕುಮಟಾದ ತಮ್ಮ ನಿವಾಸದಲ್ಲಿ ಕವಿ ಸನದಿ ಅನಾರೋಗ್ಯದ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ.

ಕುಮಟಾ: ಕನ್ನಡದ ಹಿರಿಯ ಕವಿ, ಲೇಖಕ ಬಿಎ ಸನದಿ  (86) ಭಾನುವಾರ ವಿಧಿವಶರಾದರು. ಕುಮಟಾದ ತಮ್ಮ ನಿವಾಸದಲ್ಲಿ ಕವಿ ಸನದಿ ಅನಾರೋಗ್ಯದ ಕಾರಣದಿಂದ  ಕೊನೆಯುಸಿರೆಳೆದಿದ್ದಾರೆ. 
ಮೃತರ ಪಾರ್ಥಿವ ಶರೀರವನ್ನು ಬೆಳಗಾವಿಯ ಸಿಂದೋಳಿಯ ಮೂಲ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಲ್ಲಿಯೇ ಅಂತಿಮ ವಿಧಿಗಳನ್ನು ನೆರವೇರಿಸಲಾಗಿದೆ.
ಬೆಳಗಾವಿಯ ಸಿಂದೋಳಿಯಲ್ಲಿ  1933 ರ ಆಗಸ್ಟ್ 18 ರಂದು ಜನಿಸಿದ್ದ ಸನದಿ ಕವಿತೆ, ಕಥೆ, ಅನುವಾದ, ವಿಮರ್ಶೆಗಳನ್ನು ರಚಿಸಿ ಹೆಸರಾಗಿದ್ದರು, ಅಲ್ಲದೆ ಅದೆಲ್ಲಕ್ಕೆ ಮಿಗಿಲಾಗಿ ಆದರ್ಶ ಶಿಕ್ಷಕ ಎಂದು ಹೆಸರು ಮಾಡಿದ್ದರು.
 ಕವಿತೆ, ಕಥೆಗಳು, ನಾಟಕಗಳು ಮತ್ತು ಮಕ್ಕಳ ಸಾಹಿತ್ಯ ಸೇರಿದಂತೆ 60 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದ ಸನದಿ ಪದವಿ ನಂತರ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ  ವೃತ್ತಿಜೀವನ ನಡೆಸಿದ್ದು ರಾಜ್ಯ ಸರ್ಕಾರದ ಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ವಾರ್ತಾ ಇಲಾಖೆಗೆ ಸೇರಿ (ಬೆಂಗಳೂರು) ಪಂಚಾಯತ್ ರಾಜ್‌ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಕಲಬುರ್ಗಿಗೆ ವರ್ಗಾವಣೆಗೊಂಡು ವಿಭಾಗದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ಅಹಮದಾಬಾದಿಗೆ ವರ್ಗವಾಗಿ ಪಶ್ಚಿಮ ವಲಯದ ಪ್ರದರ್ಶನಾಧಿಕಾರಿಯಾಗಿ, ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಕಾರಿಯಾಗಿ, ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.,
ಸನದಿ 'ಆಶಾಕಿರಣ', 'ನೆಲಸಂಪಿಗೆ', 'ತಾಜಮಹಲು', 'ಹಿಮಗಿರಿಯ ಮುಡಿಯಲ್ಲಿ'ಯಿಂದ ಹಿಡಿದು 'ನಮ್ಮ ಪ್ರೀತಿ'ಯವರೆಗೆ 18 ಕವನ ಸಂಕಲನಗಳು ಮತ್ತು THIRSTY WORDS ಎಂಬ ಆಂಗ್ಲ ಕವನ ಸಂಕಲನವನ್ನೂ ಪ್ರಕಟಿಸಿದ್ದು ಅವರ ವೈವಿದ್ಯಮಯ ಸಾಹಿತ್ಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಸಿರಿಗನ್ನಡ ಪ್ರಶಸ್ತಿ, ಸಂದೇಶ ಪ್ರಶಸ್ತಿ, , ಕಾರಂತ ಸಾಹಿತ್ಯ ಪ್ರಶಸ್ತಿ, ಗುರು ನಾರಾಯಣ ಪ್ರಶಸ್ತಿ ಮತ್ತು ಕವಿಬೇಂದ್ರೆ ಟ್ರಸ್ಟ್ ಪ್ರಶಸ್ತಿಗಳು ಲಭಿಸಿದ್ದವು. 
ಹಲವು ಕನ್ನಡ ಕೃತಿಗಳ ಭಾಷಾಂತರ್ಕಾರರಾಗಿರುವ ಸನದಿ ಅವರ ಭಾಷ್ಂತರ ಕಾರ್ಯವನ್ನು ಮೆಚಿ ಗಿ ಕುವೆಂಪು ಭಾಷಾ ಭಾರತಿ (ಅನುವಾದ ಅಕಾಡೆಮಿ) ಮತ್ತು ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಬಾಲ ವಿಕಾಸ್ ಅಕಾಡೆಮಿ ಪ್ರಶಸ್ತಿ ಸಹ ಅವರಿಗೆ ಒಲಿದಿದ್ದವು.ಕರ್ನಾಟಕ ವಿಶ್ವವಿದ್ಯಾಲಯವು 2014 ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿದ್ದರೆ  ಕೆನಡಾದಲ್ಲಿ 2013ರಲ್ಲಿ ನಡೆಇದ್ದ ಟೊರೊಂಟೊ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರನ್ನು ಮಲೇಷಿಯಾ, ಯುಎಇ ಮತ್ತು ಅಮೆರಿಕಾದಲ್ಲಿ ಕನ್ನಡ ಸಂಸ್ಥೆಗಳು ಆಹ್ವಾನಿಸಿ ಗೌರವಿಸಲಾಗಿತ್ತು.
ಗಣ್ಯರ ಸಂತಾಪ
ಹಿರಿಯ ಸಾಹಿತಿ ಸನದಿಯವರ ನಿಧನಕ್ಕೆ ಕನ್ನಡ ಸಾಹಿತ್ಯ ಲೋಕದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ಸಾಹಿತಿ ಡಾ. ಸರಜೂ ಕಾಟ್ಕರ,  ಯ.ರು. ಪಾಟೀಲ,, ಹಿರಿಯ ಸಾಹಿತಿ ಚಂದ್ರಕಾಂತ ಪೋಕಳೆ, ಡಾ. ರಾಮಕೃಷ್ಣ ಮರಾಠೆ, ಸಾಹಿತಿ ರವಿ ಕೋಟಾರಗಸ್ತಿ, ಶಿಕ್ಷ ಕ, ಸಾಹಿತಿ ಶಿವರಾಯ ಏಳುಕೋಟಿ, ಉಪನ್ಯಾಸಕ, ಸಾಹಿತಿ ಡಾ. ಎಸ್‌.ಎಸ್‌. ಅಂಗಡಿ ಮೊದಲಾದವರು ಸನದಿಯವರ ಕೊಡುಗೆಗಳನ್ನು ಸ್ಮರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Epstein ಕಡತಗಳಲ್ಲಿ ಪ್ರಧಾನಿ ಮೋದಿ ಉಲ್ಲೇಖ: ಭಾರತದ ಪ್ರತಿಕ್ರಿಯೆ ಏನು?

5th T20I: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 46 ರನ್ ಗೆಲುವು; 4-1 ಅಂತರದಲ್ಲಿ ಸರಣಿ ವಶ

ಮಹಾರಾಷ್ಟ್ರ ನೂತನ DCM ಸುನೇತ್ರಾ ಪವಾರ್‌ಗೆ ಕಂದಾಯ ಸೇರಿ ಮೂರು ಖಾತೆ ಹಂಚಿಕೆ; ಕೈತಪ್ಪಿದ ಹಣಕಾಸು

5th T20: 42 ಎಸೆತಗಳಲ್ಲಿ ಶತಕ ಬಾರಿಸಿದ ಇಶಾನ್ ಕಿಶಾನ್! 272 ರನ್ ಟಾರ್ಗೆಟ್ ನೀಡಿದ ಭಾರತ! Video

IND vs NZ 5th T20I: UAE ಆಟಗಾರನ 'ವಿಶ್ವದಾಖಲೆ' ಮುರಿದ ಸೂರ್ಯ ಕುಮಾರ್ ಯಾದವ್!

SCROLL FOR NEXT