ಸಂಗ್ರಹ ಚಿತ್ರ 
ರಾಜ್ಯ

ಹಾಸನ: ನೆಲಮಾಳಿಗೆಯಲ್ಲಿಟ್ಟ ಬಾಳೆಹಣ್ಣು ತರಲು ಹೋಗಿ ವಿಷಗಾಳಿ ಸೇವನೆ, ಇಬ್ಬರು ಸಾವು

ಬಾಳೆಹಣ್ಣಿನ ಗೊನೆಗಳನ್ನು ತರಲೆಂದು ನೆಲಮಾಳಿಗೆಗೆ ಇಳಿದಿದ್ದ ಇಬ್ಬರು ಅಲ್ಲಿನ ವಿಷ ಮಿಶ್ರಿತ ಗಾಳಿ ಸೇವನೆಯಿಂದ ಮೃತರಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

:ಹಾಸನ ಬಾಳೆಹಣ್ಣಿನ ಗೊನೆಗಳನ್ನು ತರಲೆಂದು ನೆಲಮಾಳಿಗೆಗೆ ಇಳಿದಿದ್ದ ಇಬ್ಬರು ಅಲ್ಲಿನ ವಿಷ ಮಿಶ್ರಿತ ಗಾಳಿ ಸೇವನೆಯಿಂದ ಮೃತರಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. 
ಹಾಸನ ತಾಲ್ಲೂಕು ಹಂಚಿಹಳ್ಳಿಎಂಬಲ್ಲಿ ಭಾನುವಾರ ಸಂಜೆ ನೆಲದಿಂದ 10 ಅಡಿ ಆಳದಲ್ಲಿದ್ದ ನೆಲಮಾಳಿಗೆಯಲ್ಲಿ ಇಡಲಾಗಿದ್ದ ಬಾಳೆಗೊನೆ ತರಲು ಹೋಗಿದ್ದ ವೆಂಕಟೇಶ್ (45) ಮತ್ತು ಮಂಜೇಗೌಡ (51)  ಎಂಬುವವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬಸವೇಗೌಡ  ಎಂಬುವವರು ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಂಡಿಕಾಂಬ ದೇವಾಲಯದ ವಾರ್ಷಿಕ ಉತ್ಸವದ ಆಚರಣೆಗಾಗಿ ಬಾಳೆಹಣ್ಣುಗಳನ್ನು ತರಲು ಮೂವರೂ ನೆಲಮಾಳಿಗೆಯಲ್ಲಿದ್ದ ಕೋಣೆಗೆ ಹೋಗಿದ್ದಾರೆ. ವಾರಗಳ ಹಿಂದೆ ಇಲ್ಲಿ ಬಾಳೆಕಾಯಿಗಳನ್ನಿಟ್ಟಿದ್ದು ಅವು ಹಣ್ಣಾಗುವುದಕ್ಕಾಗಿ ರಾಸಾಯನಿಕಗಳನ್ನು ಸಿಂಪಡಿಸಲಾಗಿತ್ತು. ಈ ವೇಳೆ ಕೋಣೆ ಪ್ರವೇಶಿಸಿದ್ದ ವೆಂಕಟೇಶ್ ಮತ್ತು ಮಂಜೇಗೌಡ ರಾಸಾಯನಿಕಯುಕ್ತ ವಿಷಗಾಳಿಯ ಸೇವನೆ ಮಾಡಿದ ಕೆಲಕ್ಷಣದಲ್ಲಿಯೇ ಮೃತಪಟ್ಟರು ಎಂದು ವರದಿಗಳು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT