ರಾಜ್ಯ

ವಂದೇ ಭಾರತ್ ಆಯ್ತು, ಈಗ ನಮ್ಮ ಮೆಟ್ರೋ ರೈಲಿಗೆ ಕಲ್ಲು ಹೊಡೆದ ಕಿಡಿಗೇಡಿಗಳು!

Vishwanath S
ಬೆಂಗಳೂರು: ದೇಶದ ವೇಗದ ರೈಲು ವಂದೇ ಭಾರತ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿ ಜಖಂ ಮಾಡಿದ್ದರು. ಇದೀಗ ನಮ್ಮ ಮೆಟ್ರೋ ರೈಲಿಗೂ ಕಲ್ಲು ತೂರಿಸಿದ್ದು ಮೂರು ನಾಲ್ಕು ರೈಲುಗಳಿಗೆ ಹಾನಿಯಾಗಿದೆ. 
ಮಂತ್ರಿ ಸ್ಕ್ವಾರ್ ಹಾಗೂ ಶ್ರೀರಾಂಪುರ ಮೆಟ್ರೋ ನಿಲ್ದಾಣದ ಬಳಿ ಕಿಡಿಗೇಡಿಗಳು ಮೆಟ್ರೋ ಟ್ರೇನ್ ಗೆ ಕಲ್ಲು ಹೊಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. 
ಕಿಡಿಗೇಡಿಗಳು ಕಲ್ಲು ಹೊಡೆದಿರುವುದರಿಂದ ಮೂರು ರೈಲುಗಳ ಕಿಟಿಕಿ ಗಾಜುಗಳಿಗೆ ಹಾನಿಯಾಗಿದೆ. ಇನ್ನು ಎರಡು ತಿಂಗಳಿಂದ ಪದೇ ಪದೇ ಮೆಟ್ರೋಗೆ ಕಲ್ಲು ಎಸೆಯಲಾಗುತ್ತಿದೆ ಎನ್ನಲಾಗಿದೆ. ಕಲ್ಲು ಎಸೆಯುವವರನ್ನು ಪತ್ತೆ ಹಚ್ಚಲು ಮೆಟ್ರೋ ಸಿಬ್ಬಂದಿ ಹೆಣಗಾಡುತ್ತಿದ್ದಾರೆ.
SCROLL FOR NEXT