ರಾಜ್ಯ

ಬೆಳಗಾವಿ: ಪ್ರವಾಹದಲ್ಲಿ ಕೊಚ್ಚಿ ಹೋದ ಮನೆ, ಬೆಳೆ: ರೈತ ಆತ್ಮಹತ್ಯೆ 

Nagaraja AB

ಬೆಳಗಾವಿ: ಭೀಕರ ಪ್ರವಾಹದಲ್ಲಿ ಮನೆ, ಬೆಳೆ ಕೊಚ್ಚಿ ಹೋದರಿಂದ ಮನನೊಂದ ಚಿಕ್ಕೋಡಿ ತಾಲೂಕಿನ ಕಾಲೊಲ್ ಗ್ರಾಮದ ರೈತರೊಬ್ಬರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಾಲೊಲ್ ನಿವಾಸಿ ಅಪ್ಪಸಾಬ್ ಕಾಳಪ್ಪ ಮಂಗವಟ್ಟಿ (50 ) ಎಂದು ಮೃತಪಟ್ಟ ದುರ್ದೈವಿಯಾಗಿದ್ದಾರೆ.

ವಿವಿಧ ಬ್ಯಾಂಕುಗಳಿಂದ ಸಾಲ ಶೂಲ ಮಾಡಿ ಮಂಗವಟ್ಟಿ ಕಬ್ಬು ಬೆಳೆದಿದ್ದರು. ಆದರೆ, ಉತ್ತಮ ಬೆಳೆ ಬಂದು ಕಟಾವಿನ ಹಂತದಲ್ಲಿರಬೇಕಾದರೆ ಪ್ರವಾಹಕ್ಕೆ ಸಿಲುಕಿ ಎಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಮನನೊಂದು ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗವಟ್ಟಿಯನ್ನು ಆಸ್ಪತ್ರೆಗೆ ಸೇರಿಸಿ ಬದುಕುಳಿಸಲು ಪ್ರಯತ್ನಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೂಲಗಳು ಹೇಳಿವೆ.

ಚಿಕ್ಕೊಡಿ ತಾಲೂಕಿನಲ್ಲಿ ಭಾರೀ ಪ್ರವಾಹದಿಂದಾಗಿ  ಸಾವಿರಾರು ಕಬ್ಬು ಬೆಳೆಗಾರರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ.

SCROLL FOR NEXT