ರಾಜ್ಯ

'ಸ್ವಾತಂತ್ರ್ಯ ಬೇಕಿತ್ತು ಅದಕ್ಕೆ ತಂದೆಯನ್ನೆ ಕೊಂದೆ' ಪೊಲೀಸರ ಮುಂದೆ ಹಂತಕಿ ಮಗಳ ತಪ್ಪೊಪ್ಪಿಗೆ

ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. ಮರಳಿ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ತಂದೆಯನ್ನೇ ಕೊಂದಿದ್ದಾಗಿ ಹದಿನಾರರ ಹರೆಯದ ಹಂತಕಿ ಮಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಬೆಂಗಳೂರು: ರಾಜಾಜಿನಗರದ ಬಟ್ಟೆ ವ್ಯಾಪಾರಿ 41 ವರ್ಷದ ಜೈಕುಮಾರ್ ಜೈನ್ ಅವರನ್ನು ಹದಿನಾರರ ಹರೆಯದ ಮಗಳೇ ಪ್ರಿಯಕರನ ಜೊತೆ ಸೇರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾಗಿ ಆಕೆ  ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ

ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. ಮರಳಿ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ತಂದೆಯನ್ನೇ ಕೊಂದಿದ್ದಾಗಿ ಹದಿನಾರರ ಹರೆಯದ ಹಂತಕಿ ಮಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಸ್ನೇಹಿತರನ್ನು ಭೇಟಿಯಾಗಲು  ಅವರ ಜೊತೆ ಮಾರುಕಟ್ಟೆಗೆ ಹೋಗಲು ಬಿಡುತ್ತಿರಲಿಲ್ಲ. ಮೊಬೈಲ್ ಪೋನ್ ಕಸಿದುಕೊಂಡು ಮುಚ್ಚಿಟ್ಟಿದ್ದರು. ಇಂಟರ್ ನೆಂಟ್ ನ್ನು ಮಿತವಾಗಿ ಬಳಸುವಂತೆ ಹೇಳುತ್ತಿದ್ದರು. ಇದರಿಂದ ಬೇಸತ್ತು ಕೊಲೆ ಮಾಡಿದ್ದಾಗಿ  ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. 

ಪ್ರಿಯಕರ ಪ್ರವೀಣ್ ನನ್ನು ಕದ್ದುಮುಚ್ಚಿ ಭೇಟಿಯಾಗುತ್ತಿದ್ದ ಬಾಲಕಿ ಶನಿವಾರ ಆತನೊಂದಿಗೆ ಸೇರಿ ಆಕೆಯ ತಂದೆ ಜೈಕುಮಾರ್ ಜೈನ್ ನನ್ನು ಕೊಲೆ ಮಾಡಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಜೈಕುಮಾರ್  ಜೈನ್ ಗೆ ಊಟದ ನಂತರ ನಿದ್ದೆ ಮಾತ್ರೆ ಬೆರೆಸಿದ್ದ ಜ್ಯೂಸ್ ಕುಡಿಸಿದ್ದಳು. ನಂತರ ಆತ ಮಲಗಿದ ಎರಡು ಗಂಟೆ ಬಳಿಕ ಪ್ರವೀಣ್ ನನ್ನು ಮನೆಗೆ ಕರೆಸಿಕೊಂಡು, ತಂದೆಗೆ 25 ಕಡೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ಮೃತದೇಹವನ್ನು  ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಿಗೂಢವಾಗಿ ಕೊಲೆಯಾಗಿದ್ದ  ಜೈಕುಮಾರ್  ಜೈನ್ ಪುತ್ರಿಯ ಪ್ರಿಯಕರ ಬಗ್ಗೆ ಮಾಹಿತಿ ದೊರೆತ ನಂತರ ಆಕೆಯನ್ನು ವಿಚಾರಿಸಿದಾಗ  ತಪ್ಪೊಪ್ಪಿಕೊಂಡಳು ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT