ರಾಜ್ಯ

'ಸ್ವಾತಂತ್ರ್ಯ ಬೇಕಿತ್ತು ಅದಕ್ಕೆ ತಂದೆಯನ್ನೆ ಕೊಂದೆ' ಪೊಲೀಸರ ಮುಂದೆ ಹಂತಕಿ ಮಗಳ ತಪ್ಪೊಪ್ಪಿಗೆ

ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. ಮರಳಿ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ತಂದೆಯನ್ನೇ ಕೊಂದಿದ್ದಾಗಿ ಹದಿನಾರರ ಹರೆಯದ ಹಂತಕಿ ಮಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಬೆಂಗಳೂರು: ರಾಜಾಜಿನಗರದ ಬಟ್ಟೆ ವ್ಯಾಪಾರಿ 41 ವರ್ಷದ ಜೈಕುಮಾರ್ ಜೈನ್ ಅವರನ್ನು ಹದಿನಾರರ ಹರೆಯದ ಮಗಳೇ ಪ್ರಿಯಕರನ ಜೊತೆ ಸೇರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾಗಿ ಆಕೆ  ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ

ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. ಮರಳಿ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ತಂದೆಯನ್ನೇ ಕೊಂದಿದ್ದಾಗಿ ಹದಿನಾರರ ಹರೆಯದ ಹಂತಕಿ ಮಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಸ್ನೇಹಿತರನ್ನು ಭೇಟಿಯಾಗಲು  ಅವರ ಜೊತೆ ಮಾರುಕಟ್ಟೆಗೆ ಹೋಗಲು ಬಿಡುತ್ತಿರಲಿಲ್ಲ. ಮೊಬೈಲ್ ಪೋನ್ ಕಸಿದುಕೊಂಡು ಮುಚ್ಚಿಟ್ಟಿದ್ದರು. ಇಂಟರ್ ನೆಂಟ್ ನ್ನು ಮಿತವಾಗಿ ಬಳಸುವಂತೆ ಹೇಳುತ್ತಿದ್ದರು. ಇದರಿಂದ ಬೇಸತ್ತು ಕೊಲೆ ಮಾಡಿದ್ದಾಗಿ  ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. 

ಪ್ರಿಯಕರ ಪ್ರವೀಣ್ ನನ್ನು ಕದ್ದುಮುಚ್ಚಿ ಭೇಟಿಯಾಗುತ್ತಿದ್ದ ಬಾಲಕಿ ಶನಿವಾರ ಆತನೊಂದಿಗೆ ಸೇರಿ ಆಕೆಯ ತಂದೆ ಜೈಕುಮಾರ್ ಜೈನ್ ನನ್ನು ಕೊಲೆ ಮಾಡಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಜೈಕುಮಾರ್  ಜೈನ್ ಗೆ ಊಟದ ನಂತರ ನಿದ್ದೆ ಮಾತ್ರೆ ಬೆರೆಸಿದ್ದ ಜ್ಯೂಸ್ ಕುಡಿಸಿದ್ದಳು. ನಂತರ ಆತ ಮಲಗಿದ ಎರಡು ಗಂಟೆ ಬಳಿಕ ಪ್ರವೀಣ್ ನನ್ನು ಮನೆಗೆ ಕರೆಸಿಕೊಂಡು, ತಂದೆಗೆ 25 ಕಡೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ಮೃತದೇಹವನ್ನು  ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಿಗೂಢವಾಗಿ ಕೊಲೆಯಾಗಿದ್ದ  ಜೈಕುಮಾರ್  ಜೈನ್ ಪುತ್ರಿಯ ಪ್ರಿಯಕರ ಬಗ್ಗೆ ಮಾಹಿತಿ ದೊರೆತ ನಂತರ ಆಕೆಯನ್ನು ವಿಚಾರಿಸಿದಾಗ  ತಪ್ಪೊಪ್ಪಿಕೊಂಡಳು ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

SCROLL FOR NEXT